Thursday, November 15, 2007

ಕಸ ಬಿಸಾಡಿದ್ರೂ ದಂಡ?!

ಬೆಂಗಳೂರಿನಲ್ಲಿರುವ ನಮ್ಮ ಮಂತ್ರಿಗಳೇ ಹೀಗೆ. ಮೊದಲ ಬಾರಿ ಅಧಿಕಾರ ಗದ್ದುಗೇರಿ, ತನ್ನ ಕಾರ್ಯಕ್ರಮಗಳಿಗೆ ಶುರುವಿಟ್ಟಾಗ ಟ್ರಾಫಿಕ್ ಜಾಮ್, ಕಸದ ರಾಶಿ ನೋಡಿ ನೋಡಿ ಸುಸ್ತಾಗಿ ವೇದಿಕೆಯಲ್ಲಿ ನಿಂತು ಏನ್ ಭಾಷಣ ಬಿಗೀತಾರೆ ಗೊತ್ತೇ? 'ಒಂದೇ ವರ್ಷದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡ್ತೇನೆ'!! ಇದು ಬೆಂಗಳೂರಿನ ಜನತೆಗೆ ಮಂತ್ರಿಗಳು ನೀಡುವ ಮೊದಲ ಆಶಯ. ಅವ್ರು ಸಿಂಗಾಪುರ ಹೇಗಿದೆ ಎಂದು ಸ್ವತಃ ಕಣ್ಣಾರೆ ನೋಡಿದ್ದರೋ ಇಲ್ವೋ(ಪೋಟೋ ಆದ್ರೂ ನೋಡಿರ್ತಾರೆ) ಅದು ಬೇರೆ ವಿಷಯ. ಅಂತೂ-ಇಂತೂ ರಾಶಿ ರಾಶಿ ಕಸ, ರಸ್ತೆ ಬದೀಲಿ ಉಯ್ದ ಮೂತ್ರದ ಅಸಹ್ಯ ವಾಸನೆ ಮೂಗಿಗೆ ಬಡಿದಾಗ ಈ ರೀತಿ ಹೇಳದೆ ಬೇರೆ ದಾರಿಯೇ ಇಲ್ಲ.

ಇಂಥಹ ಮಾತುಗಳನ್ನು ಬೆಂಗಳೂರಿಗರು ಕೇಳಿ ಕೇಳಿ ರೋಸಿಹೋಗಿದ್ದಾರೆ. ಇದೀಗ ಬಿಬಿಎಂಪಿ ಕೂಡ ಇಂಥದ್ದೇ ಒಂದು ಆದೇಶ ಹೊರಡಿಸಿದೆ. ನಗರದ ಯಾವುದೇ ಸ್ಥಳದಲ್ಲಿ ಕಸ ಬಿಸಾಕಿದ್ರೆ...?? .."ದಂಡ"!!! 100ರಿಂದ 5000ದ ತನಕ ಭರ್ಜರಿ ದಂಡ. ಕಿಸೆಯಲ್ಲಿ ಸುಲಭ್ ಶೌಚಾಲಯಕ್ಕೆ ಹೋಗಲು ಒಂದು ರೂಪಾಯಿನೂ ಇಲ್ಲದೆ ಪರದಾಡುವವನು ರಸ್ತೆ ಬದೀಲಿರುವ ಕೌಂಪೌಂಡುಗೆ ಮೂತ್ರ ಮಾಡಿದ್ರೆ ಅವ್ನ ಗತಿಯೇನೋ? ದೇವ್ರೆ ಬಲ್ಲ. ಪಾಪ! ದಿನ ಗಾಡಿಯಲ್ಲಿ ಕಸ ತುಂಬಿಸಿ ತುಂಬಿಸಿ ಸುಸ್ತಾಗಿ, ಈ ರೀತಿ ಆದೇಶಿಸಿದೆ. ಇದು ಒಳ್ಳೆಯದೇ. ಆದ್ರೆ ಎಷ್ಟರಮಟ್ಟಿಗೆ ಇದು ಸಾಧ್ಯವಾಗಬಹುದು? ಎಂಬುದೇ ದೊಡ್ಡ ಪ್ರಶ್ನೆ.

ಇದು ದೇಶದಲ್ಲೇ ಮೊದಲ ಕ್ರಮವಂತೆ. ರಸ್ತೆ ಬದೀಲಿ ಕಸ ಹಾಕುವವರು, ಮೂತ್ರ ಮಾಡೋರನ್ನು ಕಸ ಪರಿವೀಕ್ಷಕರ ತಂಡ ಪೋಟೋ ತೆಗೆಯುತ್ತಾರಂತೆ. ಆ ಮೂಲಕ ತಪ್ಪಿತಸ್ಥನಿಗೆ ದಂಡ ಶಿಕ್ಷೆ ವಿಧಿಸೋದು ಎಂದು ಬಿಬಿಎಂಪಿ ಆಯುಕ್ತ ಎಸ್. ಸುಬ್ರಹ್ಮಣ್ಯ ಅವರ ಐಡಿಯಾ. ಅಮೇರಿಕ, ಲಂಡನ್ಗಳಲ್ಲಿ ಈ ವ್ಯವಸ್ಥೆ ಇದೆ. ಇದನ್ನು ಬೆಂಗಳೂರಿನಲ್ಲಿಯೂ ಸಮರ್ಪಕವಾಗಿ ಜಾರಿಗೊಳಿಸಲಾಗುವುದು, ಕಸ ಪರಿವೀಕ್ಷಕರು ದಿನದ 24 ಗಂಟೆನೂ ಸ್ವಚ್ಚತೆಯ ಕಾಳಜಿ ವಹಿಸಲಿದ್ದಾರೆಂಬುವುದು ಆಯುಕ್ತರು ಗಟ್ಟಿ ಭರವಸೆಯ ಮಾತುಗಳನ್ನೇ ಆಡಿದ್ದಾರೆ. ನಿರೀಕ್ಷೆಯಂತೆ ನಡೆದ್ದಲ್ಲಿ ಅದರಷ್ಟು ಒಳ್ಳೆಯ ಕಾರ್ಯ ಬೇರೊಂದಿರದು.

ಬೆಂಗಳೂರಿನಲ್ಲಿ ಪ್ರತಿದಿನ ಎಷ್ಟು ಕಸ ಉತ್ಪತ್ತಿ ಆಗುತ್ತೆ ಗೊತ್ತೆ? ಬರೋಬ್ಬರಿ 2,200 ಮೆಟ್ರಿಕ್ ಟನ್!!! ಇಷ್ಟು ಮಾತ್ರವಲ್ಲ ಕಾರ್ಖಾನೆ, ಕಟ್ಟಡಗಳ ಅವಶೇಷ ಎಲ್ಲವೂ ರಸ್ತೆ ಬದೀಲಿ ಇರುವ ಚರಂಡಿಗೆ. ಜನರಿಗೆ ಕಸ ಹಾಕೋಕೆ, ಉಗುಳೋಕೆ, ಮೂತ್ರ ಮಾಡೋಕೆ..ಎಲ್ಲಾ ಪುಟ್ಪಾತೇ ತಾಣ.

ಇನ್ನೊಂದು ವಿಷ್ಯ ಅಂದ್ರೆ ಈವರೆಗೆ ಇಂಥಹ ಬಹಳಷ್ಟು ಭರವಸೆಯ ಮಾತುಗಳನ್ನು ಕೇಳಿಯಾಗಿದೆ. ಕಳೆದ ವರ್ಷ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲೇ ಇರಬೇಕೆಂದು ಆದೇಶ ಹೊರಡಿಸಿತ್ತು. ಕೆಲವೊಂದು ಇಂಗ್ಲೀಷ್ ಅಂಗಡಿಗಳನ್ನು ಮುಚ್ಚುವಂತೆಯೂ ಆದೇಶಿಸಲಾಯ್ತು. ಪತ್ರಿಕೆಗಳ ಮುಖಪುಟ ತುಂಬಾ ಸುದ್ದೀನೂ ಆಯ್ತು. ಅದೇ ರೀತಿ ಎಫ್ಎಂ ರೈನ್ಬೋದಲ್ಲಿ ಕನ್ನಡ ಕಡ್ಡಾಯ ಬಳಸಬೇಕೆಂದು ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಬಡಬಡಿಸಿಕೊಂಡ್ರು...ತುಂಬಾ ದಿನ. ಆಮೇಲೆ ಮೆಲ್ಲನೆ ತಣ್ಣಗಾದ್ರು..ಯೋಜನೆ, ಭರಸೆಗಳು ಮರೆತೇ ಹೋದವು..ಕಡ್ಡಾಯವೆಲ್ಲಾ ಸಡಿಲಗೊಂಡವು..ಜನರು ಮತ್ತೇ ಅದೇ ರಾಗ, ಅದೇ ಹಾಡು ಎಂಬಂತೆ ಮತ್ತೆ ತಮ್ಮ ಹಳೆ ಚಾಳಿಯನ್ನೇ ಮುಂದುವರೆಸಿದ್ರು..

ಇಂಥ ಬೇಕಾದಷ್ಟು ನಿದರ್ಶನಗಳಿವೆ...ಅಂತೆಯೇ ಬಿಬಿಎಂಪಿಯ ಯೋಜನೆಗಳು ಆದವೇ? ಎಂಬ ಸಂಶಯ ನಮಗೆಲ್ಲಾ. ಯಾಕೆಂದ್ರೆ ಈವರೆಗೆ ಆಗಿದ್ದು ಅದೇ. ಆದ್ರೀಂದ ಜನರ್ರು ನಂಬ್ಕೆ ಕಳಕೊಂಡಿದ್ದಾರೆ. ಸಿಂಗಾಪುರ ಮಾಡ್ತಾನೆಂದವನ್ನು ಅವ್ನ ಮನೆಗೆ ಹೋಗುವ ದಾರಿಗೆ ಡಾಂಬರು ಹಾಕಿಸ್ತಾನೆ, ಅದೇ ರಸ್ತೆ ಬದೀಲಿ ಗಾರ್ಡನ್ ಮಾಡಿಸ್ತಾನೆ..ಆದ್ರೆ ನಿತ್ಯ ನಾವು ನಡೆಯೋ ದಾರಿಯಲ್ಲಿ ಕಲ್ಲು-ಮಣ್ಣು ಹಾಕ್ಸಿ ಗುಂಡಿ ಮುಚ್ಚೋ ಕೆಲ್ಸ ಯಾವ ನಾಯಕನೂ ಮಾಡಲ್ಲ. ಆ ದಾರಿಯಾಗಿ ಮತ್ತೆಂದೂ ಅವ್ನು ಬರಲ್ಲ. ಜನರು ಮಾತ್ರ ಅದೇ ಕೊಳೆತು ನಾರುವ ಕಸದ ರಾಶೀಲಿ ಮೂಗು-ಬಾಯಿ ಮಚ್ಚುಕೊಂಡು ನಡೆದುಹೋಗಬೇಕು...ಮತ್ತೆ ನಂಬೋದು ಹೇಗೆ?

ಇರ್ಲಿ ಬಿಡಿ..ಆಯುಕ್ತರ ಭರವಸೆ ಈಡೇರಿದ್ದರೆ, ಬೆಂಗಳೂರಿನ ಸಮಸ್ತ ನಾಗರಿಕರ ಆಸೆ ಈಡೇರಿದಂತೆ.. ಇದು ಈಡೇರಲಿ ಎಂದು ಹಾರೈಸೋಣ. ಆದ್ರೆ ಕಸ ಹಾಕೋವರನ್ನು, ಉಗುಳೋರನ್ನಾದರೂ ಕಂಡುಹಿಡೀಬಹುದು. ಆದ್ರೆ ಗೋಡೆಗೆ ಮುಖ ಮಾಡಿ ಮೂತ್ರ ಮಾಡೋವರನ್ನ ಹೆಂಗೆ ಕಂಡುಹಿಡೀತಾರೋ..?!


2 comments:

ರವಿರಾಜ್ ಆರ್.ಗಲಗಲಿ said...

sweater bagge ammana bagge bardirodu chennagide, adre kingfisher bagge baredorudu en vishesha ansalilla egagale ella vimanagalallu drinks kodtare, air indiadallu kuda...

ಚಿತ್ರಾ ಸಂತೋಷ್ said...

ನಿಮ್ ಸಲಹೆಗೆ ತುಂಬಾ ಕೃತಜ್ಞತೆಗಳು..ಸರಿಯಾದ ಮಾಹಿತಿ ನೀಡಿದ್ದಕ್ಕೂ..