ಅಂದು ಭಾನುವಾರ. ಭಾನುವಾರ ಆದ್ರೂ ಲೇಟ್ ಏಳೋ ಬುದ್ದಿ ನಂಗಿಲ್ಲ. ಎಂದಿನಂತೆ ಬೆಳಿಗ್ಗೆ 5.30 ಆಲಾರಂ ಬಡಿದುಕೊಳ್ಳತೊಡಗಿತ್ತು. ಕಣ್ಣ ಬಿಟ್ಟಾಗ ಬಿಳಿದಾದ ಪುಟ್ಟ ಬೆಕ್ಕಿನ ಮರಿಯೊಂದು ಎದೆ ಮೇಲೆ ಮಲಗಿ ನಿದ್ರಿಸುತ್ತಿದ್ದೆ. ಒಂದು ಸಲ ಹೆದರಿದರೂ ಬೆಕ್ಕಿನ ಮರಿ ಅಲ್ವಾ? ಪಾಪ ಅನಿಸುತ್ತಿತ್ತು. ಪುಟ್ಟ ಮಗುವಿನಂತೆ ಮುದ್ದಾಗಿ ಮಲಗಿ ನಿದ್ರಿಸುತ್ತಿದ್ದ ಅದನ್ನು ಎಬ್ಬಿಸಕ್ಕೂ ಮನಸ್ಸಾಗಲಿಲ್ಲ. ಹಾಗೆ ಮೆಲ್ಲ ದಿಂಬು ಮೇಲಿಟ್ಟುಬಿಟ್ಟೆ..ಆದ್ರೂ ಅದಕ್ಕೆ ನಿದ್ದೆಬಿಟ್ಟಿಲ್ಲ. ಪಕ್ಕದಲ್ಲಿ ಮಲಗಿದ್ದ ಅಣ್ಣ-ತಮ್ಮ ಇಬ್ರೂ ಮನೆಯಿಂದ ಹೊರಗೆ ಹೋಗಿ ಬೆಕ್ಕನ್ನು ಮಲಗಿಸಿಕೊಂಡು ಬಿಡು ಅಂತ ಬೈತಾನೆ ಇದ್ರು. ಆದ್ರೂ ಬಿಡಲಿಲ್ಲ. ಅದನ್ನು ಅಲ್ಲೇ ಮಲಗಿಸಿ ಬಿಸಿನೀರು ಇಟ್ಟು ಸ್ನಾನ ಮಾಡಿದೆ ಆದ್ರೂ ಬೆಕ್ಕು ಎದ್ದಿಲ್ಲ. ದೇವರಿಗೆ ದೀಪ ಹಚ್ಚಿದೆ.
ನಂತರ ಟೀ ಹೀರುತ್ತಾ ಕುಳಿತಿದ್ದಾಗ ಬೆಕ್ಕು ಮಿಯಾಂಮ್ ಅಂದಿತ್ತು. ಒಂದು ಕ್ಷಣ ಸುತ್ತಲೂ ಕಣ್ಣಾಡಿಸಿದ ಅದು ಜೋರಾಗಿ ಕೂಗಲಾರಂಭಿಸಿತ್ತು. ಆಗ ಗಂಟೆ 6.30. ಅಣ್ಣನವ್ರು ಜೋರಾಗಿ ನಂಗೆ ಬೈಯತೊಡಗಿದರು. ನನ್ನ ಹತ್ತಿರ ಬಂದ ಬೆಕ್ಕಿಗೆ ಹಾಲಲ್ಲಿ ಮುಳಗಿಸಿ ರಸ್ಕ್ ಹಾಕಿದೆ. ಅಳೋದನ್ನೆಲ್ಲಾ ಬಿಟ್ಟು ಅದು ತಿನ್ನೋದಕ್ಕೆ ಶುರು ಮಾಡಿತ್ತು. ಅಂದಿನಿಂದ ಆ ಬೆಕ್ಕು ನನಗೆ ತುಂಆ ಇಷ್ಟ. ಆಫೀಸಿಗೆ ಹೊರಡುವಾಗ್ಲೂ ಅದನ್ನು ಬಿಟ್ಟು ಬರಕ್ಕೆ ಮನಸ್ಸಿಲ್ಲ. ದಿನಾ ಮುದ್ದು ಮಾಡ್ತಿದ್ದೆ. ಯಾಕಂದ್ರೆ ಅದು ಮುದ್ದುಮುದ್ದಾಗಿ ನೋಡಾಕೂ ತುಂಬಾ ಚೆನ್ನಗಿತ್ತು. ನಾವ್ಯಾರು ಇಲ್ಲಾಂದ್ರೂ ಅದ್ರ ಪಾಡಿಗೆ ಅದು ಇರ್ತಾ ಇತ್ತು. ನಿಜ ಹೇಳಬೇಕೆಂದರೆ ಮನುಷ್ಯರಲ್ಲಿ ಕಾಣದ ಪ್ರಾಮಾಣಿಕ ಪ್ರೀತಿ ಆ ಬೆಕ್ಕಿನಲ್ಲಿತ್ತು. ದಿನಾ ನಾನು ಬರೋದನ್ನೇ ಎದುರು ನೋಡ್ತಾ ಇತ್ತು. ಒಂದು ರೀತಿಯಲ್ಲಿ ನಮ್ಮ ಮನೆಯ ಸದಸ್ಯೆ. ಅದನ್ನು ಚಿನ್ನು ಅಂತ ಕರೀತಾ ಇದ್ದೆ.
ಆದ್ರೆ ಇದ್ದಕ್ಕಿದ್ದಂತೆ ಆ ಬೆಕ್ಕು ಕಾಣೆಯಾಯಿತು. ಸಂಜೆ ಆಫೀನಿಂದ ಹೋಗಿ ಮನೆಯಲ್ಲಿ ನೋಡಿದ್ರೆ ಬೆಕ್ಕಿಲ್ಲ..ಇಡೀ ದಿನ ಹುಡುಕಾಡಿದೆ..ಯಾರ ಮನೆಯಲ್ಲಿ ಕೇಳಿದ್ರೂ ಬೆಕ್ಕಿಲ್ಲ..ಬದುಕಿನ ಪ್ರೀತಿ ನೀಡಿದ ಆ ನನ್ನ ಚಿನ್ನು...ನೆನಪು ಮತ್ತೆ ಮತ್ತೆ ಕಾಡುತ್ತಿತ್ತು..ಆದ್ರೆ ಅದು ಕಾನೆಯಾಗಿದ್ದಲ್ಲ..ಪಕ್ಕದಮನೆ ನಾಯಿ ಕೊಂದು ಹಾಕಿದೆ ಅನ್ನೋದು ಗೊತ್ತಾಗಿದ್ದು ಒಂದು ತಿಂಗಳ ನಂತರವೇ. ತಿಳಿದಾಗ ಕಣ್ಣಂಜಿನಲ್ಲಿ ನೀರು ಜಿನುಗಿತ್ತು..ನನ್ನ ಮುದ್ದು ಚಿನ್ನು ಮತ್ತೆ ಬರಲೇ ಇಲ್ಲ..
Wednesday, January 30, 2008
Subscribe to:
Post Comments (Atom)
3 comments:
Check out http://kannada.blogkut.com/ for all kannada blogs, News & Videos online. Lets Get united with other bloggers.
nimma lekhana nanna kaledu hoda prethiya bekkina nenapannu marukaliside. Adare Ondu takararu Manushyanannu Bekkinondige holisuvudara baradalli Pramanikateyannu adakke aropisabaradu embude nanna nambike.
shubhashayagalondige
geleya
rajesh
ಪ್ರೀತಿಯಾ ಚೀತ್ರಾರವರೆ,
ನಿಮ್ಮ"ಚಿನ್ನು ಮತ್ತೆಬರಲೇ ಇಲ್ಲ" ಲೆಖನ ತುಂಬ ಚೆನ್ನಾಗಿ ಮೊಡೀ ಬಂದಿದೆ.ಗೊತ್ತಾಗದೆ ಕಣ್ಣ್ಣಾಂಚಿನಲ್ಲಿ ನೀರು ಬರುತ್ತದೆ.
ನಿಮಗೆ ಶುಭವಾಗಲಿ.
ಸವಿತಾಶ್ರೀಧರ್
Post a Comment