Wednesday, January 9, 2008

ಹುಡುಗ ಚಾಕಲೇಟ್ ಕೊಟ್ಟಾಗ..

"ಮೊನ್ನೆ ಶನಿವಾರ ಆಫೀಸ್ನಿಂದ ಹೊರಡುವಾಗ ರಾತ್ರಿ 9 ಗಂಟೆ. ಎಂಜಿ ರೋಡ್ನಿಂದ ಕಾರ್ಪೋರೇಷನ್ ಬಳಿ ಬಂದಾಗ 9.45. ಅಲ್ಲೊಬ್ಬ ಹುಡುಗ ನನ್ ಜೊತೆ ಮೆಜೆಸ್ಟಿಕ್ ಬಸ್ ಎಲ್ಲಿ ಬರುತ್ತೆ? ಅಂತ ಮಾತಾಡಿಸಿದ. ನಾನು ನಿಜ ಹೇಳಿದೆ. ನಾನೂ ಮೆಜೆಸ್ಟಿಕ್ ಹೋಗುವವನು. ನೀವೂ ಬರಬಹುದು ಅಂದೆ. ಪಟಪಟನೆ ಇಂಗ್ಲೀಷ್ ಮಾತಾಡುತ್ತಿದ್ದ ಆ ಹುಡುಗ, ನೋಡಲೂ ಲಕ್ಷಣವಾಗಿದ್ದ.

ಆತ ನನ್ ಪಕ್ಕನೆ ಕುಳಿತ. ನಗುನಗುತ್ತಾ ಮಾತಾಡುತ್ತ ನಂಗೊಂದು ಚಾಕಲೇಟ್ ಕೊಟ್ಟ. ನಾನು ಬೇಡವೇ ಬೇಡ ಅಂದ್ರೂ ಕೈಹಿಡಿದು ತುರುಕಿದ. ಆತನೂ ತಿಂದ. ನಂತ್ರ ನಾನೂ ಬಾಯಿಗೆ ಹಾಕಿದ. ಆ ಚಾಕಲೇಟ್ ಬಾಯಿಗೆ ಹಾಕಿದ್ದೇ ತಡ, ಏನಾಯ್ತೋ..ಆತ ನನ್ನನನ್ನು ದುರುಗುಟ್ಟಿ ಅಪರಿಚಿತನಂತೆ ನೋಡಲಾರಂಭಿಸಿದ. ನಾನು ಕಕ್ಕಾಬಿಕ್ಕಿ. ಹೀಗ್ಯಾಕೆ ನನ್ ನೋಡ್ತಾ ಇದ್ದಾನೆ? ...ನೋಡು ನೋಡುತ್ತಿದ್ದಂತೆ ಮೆಜೆಸ್ಟಿಕ್ ಅಂದಿರುವ ಆ ಮನುಷ್ಯ ಮುಂದಿನ ಬಸ್ ಸ್ಟಾಂಡಿನಲ್ಲೇ ಇಳಿದುಹೋದ. ನಂತ್ರ ನನ್ನ ಹೊಟ್ಟೆಯೊಳಗೆ ಒಂದೇ ಸಮನೆ ಉರಿ ಶುರುವಾಯ್ತು. ಬೆಂಕಿಯಂತೇ ಹೊಟ್ಟೆ ಸುಡುತ್ತಿತ್ತು. ತಲೆ ಸುತ್ತು ಬಂತು, ವಾಂತಿ ಮಾಡಿದೆ..ಅಷ್ಟೇ ಗೊತ್ತು. ಅಮೇಲೆ ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿ ಕುಳಿತು ರಾತ್ರಿ 11 ಗಂಟೆಗೆ ಕಣ್ತರೆದಾಗ ನನ್ ಪಕ್ಕ ನನ್ ಫ್ರೆಂಡ್ ರಾಘು ಕುಳಿತಿದ್ದ. ಪಕ್ಕದಲ್ಲಿ ಇನ್ನೊಬ್ಬ ಅಪರಿಚಿತ. ಈ ಅಪರಿಚಿತ ಯುವಕ ನನಗೆ ನೀರು ಕೊಟ್ಟು, ಕೈಯಿಂದ ಬಿದ್ದ ಮೊಬೈಲು, ಬ್ಯಾಗಗ ಎತ್ತುಕೊಂಡು ನನ್ ಮೊಬೈಲಲ್ಲಿ ಮೆಸೇಜ್ ನೋಡಿ..ನನ್ ಫ್ರೆಂಡ್ ರಾಘುಗೆ ಪೋನ್ ಮಾಡಿದ್ದ. ನಂತ್ರ ಅಲ್ಲಿಗೆ ರಾಘು ಬಂದ..ಅವನ ರೂಮಿಗೆ ಕರೆದುಕೊಂಡ ಹೋದ.."

ಭಾನುವಾರ ರಾತ್ರಿ ಕೆಲಸ ಮುಗಿಸಿ ರಾತ್ರಿ ಹನ್ನೊಂದು ಗಂಟೆಗೆ ಮನೆಗೆ ಬಂದು, ತಟ್ಟೆ ತುಂಬಾ ಅನ್ನ-ಸಾರು ಹಾಕೊಂಡು ನನ್ ತಮ್ಮ ಸಂದೇಶ್ ಹೇಳುತ್ತಿದ್ದಂತೆ ನಾನು ಗರಬಡಿದಂತೆ ನಿಂತಿದ್ದೆ. ಫ್ರೆಂಡ್ ಮನೆಗೆಂದು ಹೋದ ಸಂದೇಶ್ ಗೆ ಯಾರೊಬ್ಬ ಕಳ್ಳತನ ಮಾಡೋಕೆ ಈ ರೀತಿ ಮಾಡಿದ್ದಾನೆ. ಮರುದಿನ ಡಾಕ್ಟರ್ ಬಳಿ ಹೋದ್ರೆ 'ಡ್ರಗ್ಸ್ ಕೊಟ್ಟಿದ್ದಾನೆ' ಅಂದ್ರು. ದೊಡ್ಡ ಅನಾಹುತಗಳೇನೂ ಆಗಿಲ್ಲ. ಇಂಥವುಗಳು ಬೆಂಗಳೂರಿನಂಥ ಹೈಟೆಕ್ ಸಿಟಿಯಲ್ಲಿ ಮಾತ್ರ ನಡೆಯಲು ಸಾಧ್ಯ. ನಮ್ಮ ಮುಗ್ಧತೆ, ಪ್ರಾಮಾಣಿಕತೆ ಎಲ್ಲವನ್ನೂ ತಿಂದುಂಡು ತೇಗುವವರಿದ್ದಾರೆ. ಸಹಾಯ, ಅನುಕಂಪ, ಮಾನವೀಯತೆ ಯಾವುದಕ್ಕೂ ಇಲ್ಲಿ ಬೆಲೆಯಿಲ್ಲ. ಈ ಅನುಭವ ನಮಗೂ ಒಂದು ಎಚ್ಚರಿಕೆಯಷ್ಟೇ.

2 comments:

ಹೆಸರು ರಾಜೇಶ್, said...

Adakke Gurutu parichayaviradavara bagge echaradinda erabeku endu doddavaru helodu.
Apattininda nimmannu kapadida aa Shaktige nanna ananta vandane.
geleya
rajesh

ಚಿತ್ರಾ ಸಂತೋಷ್ said...

ಸ್ನೇಹಿತ ರಾಜೇಶ್,
ಪ್ರತಿ ಲೇಖನಗಳಿಗೆ ನೀವು ಪ್ರತಿಕ್ರಿಸುತ್ತೀರಿ..ತುಂಬಾ ಕೃತಜ್ಞತೆಗಳು...ಶರಧಿಯ ಪಯಣದಲ್ಲಿ ಪಯಣಿಸುವ ಎನಗೆ..ನಿಮ್ಮ ಸಲಹೆ, ಪ್ರೋತ್ಸಾಹ ನನ್ನನ್ನು ಇನ್ನಷ್ಟು ಬರೆಯುವಂತೆ ಮಾಡಲಿ..