Thursday, March 20, 2008

ಎಲ್ಲವೂ ಜನ್ರ ಉದ್ಧಾರಕ್ಕಾಗಿ!

ಅದೇ ..ಎಲ್ಲವೂ ಮಾಡೋದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ..ಅನ್ನೋದಕ್ಕಿಂತಲೂ ಎಲ್ಲರೂ ಮಾಡೋದು ಜನ್ರ ಉದ್ದಾರಕ್ಕಾಗಿ! ಅಂದ್ರೆ ಇನ್ನೂ ಚೆನ್ನಾಗಿರುತ್ತೆ ಅಂತ ಅನಿಸುತ್ತೆ. ಈ ಪಕ್ಷಗಳು, ರಾಜಕಾರಣಿಗಳು ಎಲ್ರೂ ಮಾಡೋದು ಜನ್ರ ಉದ್ಧಾರಕ್ಕಾಗಿ! ಅದೂ ಕೇವಲ ಚುನಾವಣೆ ಬಂದಾಗ ಮಾತ್ರ. ಕಳೆದ ಶನಿವಾರ 15ನೇ ತಾರೀಕು ಬಿ.ಜೆ.ಪಿಯ ಭಾರೀ ದೊಡ್ಡ ಹೋರಾಟ ಇತ್ತು. ಯಾಕಂದ್ರೆ ರಾಜ್ಯಪಾಲರು ಸಂಧ್ಯಾ ಸುರಕ್ಷಾ ಯೋಜನೆಯನ್ನು ವಿಳಂಬ ಮಾಡಿದ್ರು ಅಂತೇಳಿ ..ಅವ್ರ ಹೋರಾಟ ಅಷ್ಟೇ.

.ಎಷ್ಟಾದ್ರೂ ಸರ್ಕಾರದ ಯೋಜನೆಗಳೆಲ್ಲ ಜನರಿಗೆ ಉಪಯೋಗವಾಗುವಂತವುಗಳು...ಅಷ್ಟೇ ಅಲ್ಲ ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಬಂದ್ರೆ ಅದ್ಕು ಉಪಯೋಗವಾಗುತ್ತೆ ಬಿಡಿ. ನಾನು ಅಂದು ಕೆಪಿಸಿಸಿ, ಬಿಜೆಪಿ ಮತ್ತು ಜೆಡಿಎಸ್ ಕಚೇರಿಗಳಿಗೆ ಹೊರಟಿದ್ದೆ. ಮಲ್ಲೇಶ್ವರದಲ್ಲಿರುವ ಬಜೆಪಿ ಕಚೇರಿಗೆ ಹೋದಾಗ ಮಲ್ಲೇಶ್ವರದ ಮುಖ್ಯರಸ್ತೆಯಿಂದಲೇ ಬಸ್ಸುಗಳು, ಕಾರುಗಳು, ವ್ಯಾನ್ ಗಳು ನಿಂತಿವೆ. ಅವ್ರ ಕಚೇರಿಗೆ ಹೋದಾಗ ಕಾರ್ಯಕರ್ತರೆಲ್ಲ ಪುಲ್ ಬ್ಯುಸಿ. ನನ್ ಕೆಲ್ಸ ಮುಗಿಸಿಕೊಂಡು ಕೆಪಿಸಿಸಿಗೆ ಬಂದು ಅಲ್ಲಿಂದ ಕೆಪಿಸಿಸಿಗೆ ಬರಬೇಕಾದ್ರೆ 4 ಗಂಟೆ ಬೇಕಾಯಿತು. ರಾಜಭವನ ರಸ್ತೆಯಲ್ಲಂತೂ ಗಂಟೆಗಟ್ಟಲೆ ನಡೆದೆ. ಎಲ್ಲಾ ಬಿಜೆಪಿ ಹೋರಾಟದ ಬಸ್ಸುಗಳು..ಟ್ರಾಫಿಕ್ ಜಾಮ್. ನಡೆದುಕೊಂಡೇ ವಿಧಾನಸೌಧ ಹತ್ರ ಬಂದೆ ಅಲ್ಲೂ ಜಾಮ್..ಕಬ್ಬನ್ ಪಾರ್ಕ್ ನಲ್ಲಿರುವ ತಂಪು ಮರಗಳ ನಡುವೆ ವಾಹನಗಳು, ಜನಜಂಗುಳಿ..ಅಲ್ಲೇ ತಿಂದು ಉಗಿಯುವ ಜನರು..ಅಬ್ಬಬ್ಬಾ ಇನ್ನೇನೋ ಎದ್ದುನಡೆಯಲಾಗದ ಅಜ್ಜ-ಅಜ್ಜಿಯರು, ಯಾಕೋ ಕೈಗೆ ಬ್ಯಾಂಡೆಜ್ ಹಾಕಿದವರು...ಮಕ್ಕಳು ಎಲ್ರೂ ಈ ಹೋರಾಟಗಳ ಪಾಲುದಾರರು. ಇಷ್ಟು ಬಂದ್ರೆ ಅವರಿಗೆ ಫ್ರೀ ಊಟ, ಬೇಕಾಂದ್ರೆ ಕಿರಿಕ್ಕು..ಆಮೇಲೆ 100ರೂಪಾಯಿಯಂತೆ! ಹಾಗಂತ ಅಲ್ಲೊಬ್ರು ಅಜ್ಜಿಯನ್ನು ಕೇಳಿದಾಗ ಹೇಳಿದ್ರು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬಂದಿದ್ರು. 100ಕ್ಕೂ ಹೆಚ್ಚು ಬಸ್ಸುಗಳು ಕಬ್ಬನ್ ಪಾರ್ಕ್ ತುಂಬಾ ನಿಂತಿದ್ದವು. ಅಲ್ಲೇಲ್ಲ ಗಲೀಜು, ಕಾಲಿಡಕ್ಕೂ ಜಾಗವಿಲ್ಲ. ಆ ಟ್ರಾಪಿಕ್ ನಲ್ಲಿ ಸಿಕ್ಕಹಾಕೊಂಡು ಕೇವಲ 2 ಗಂಟೆಯೊಳಗೆ ಮುಗಿಸಬೇಕಾದ ಕೆಲಸವನ್ನು ಮುಗಿಸಿ ನನ್ ಕಚೇರಿಗೆ ಬಂದಿದ್ದು ಸಂಜೆ ಸೂರ್ಯ ಮುಳುಗಿದ ನಂತರ ಅಂದ್ರೆ ಏಲು ಗಂಟೆಗೆ. ನಡೆದು ನಡೆದು ಕಾಲೆಲ್ಲ ಬಾತುಕೊಂಡಿತ್ತು..ಮನೆಗೆ ಬಂದು ಕಾಲಿಗೆ ಎಣ್ಣೆ ಸವರಿ ಬಿಸಿ ನೀರು ಹಾಕಿದ್ರೂ ಒಂದು ವಾರ ನೋವು ಹೋಗಿಲ್ಲ.


ನಮ್ ರಾಜಕಾರಣಿಗಳ ಹೋರಾಟ, ಜನಪರ ಕಾಳಜಿ ಎಲ್ಲಾ ಶುರುವಾಗೋದೇ ಚುನಾವಣೆ ಬಂದಾಗ. ಇನ್ನೆನೋ ಮೇ ನಲ್ಲಿ ಚುನಾವಣೆ ಗ್ಯಾರಂಟಿ ಅಂತ ಅನಿಸುತ್ತೆ. ಹೋರಾಟಗಳು, ರ್ಯಾಲಿಗಳು, ಸಮಾವೇಶಗಳು ಎಲ್ಲವೂ ಶುರುವಾಗಿವೆ. ರೈತ, ಜನಪರ ಸರ್ಕಾರದ ಕನಸಲ್ಲಿರುವ ಜನರಿಗೆ ಬೆಣ್ಣೆ ಸವರುವ ಕೆಲಸ ಆರಂಭವಾಗಿದೆ. ಕೇಂದ್ರದ ಕುರ್ಚಿಯಲ್ಲಿ ತಣ್ಣಗೆ ಕುಳಿತವರೆಲ್ಲ ಕರ್ನಾಟಕಕ್ಕೆ ಬಂದಿಳಿಯಲಿದ್ದಾರೆ. ಬೇಕಾಬಿಟ್ಟಿ ಭರವಸೆಗಳ ಸುರಿಮಳೆಗೈಲಿದ್ದಾರೆ.

1 comment:

ಹೆಸರು ರಾಜೇಶ್, said...

ಹೋರಾಟಗಳು, ರ್ಯಾಲಿಗಳು, ಸಮಾವೇಶಗಳು ellla bare Olu madam. edella bare nataka. e brasta rajakaranigallinda prajaprabutvada kaggole nadeyuttide.
geleya
rajesh