ಸ್ನೇಹಿತರೇ,
ನೀವಂದ್ರೆ ನನಗಿಷ್ಟ..ಹೀಗಿರುವಾಗ ನಾನಂದ್ರೂ ನಿಮಗಿಷ್ಟವಾಗಿರಬಹುದು. ಕಳೆದ ನವೆಂಬರ್ನಲ್ಲಿ ಬ್ಲಾಗ್ ಬುಟ್ಟಿ ತೆರೆದ ಹುಡುಗಿ ಎಲ್ಲೋದ್ಳಪ್ಪಾ?ಅಂತ ಹುಡುಕಿದವರಿದ್ದಾರೆ. ಸ್ವತಃ ನನ್ನ ಜೊತೆ ಕೇಳಿದವರೂ ಇದ್ದಾರೆ. ಯಾಕೋ ಬ್ಲಾಗ್ ನಿಲ್ಲಿಸಿಬಿಟ್ಟೆ..ಬರೇಮ್ಮಾ,..ಅಂತ ಬೆನ್ನು ತಟ್ಟಿದವರೂ ಇದ್ದಾರೆ. ಇಷ್ಟೇಲ್ಲಾ ಇದ್ರೂ ಕೆಲದಿನಗಳಿಂದ ನಾನು ಬರೆಯುತ್ತಿಲ್ಲ. ಹಾಗಂತ ಬ್ಲಾಗ್ ಲೋಕದಿಂದ ಹೊರಟು ಹೋಗುತ್ತೇನೆಂದಲ್ಲ.
ನಿಮಗೆ ತಿಳಿದೇ ಇದೆ. ಚುನಾವಣೆ ಬಂತು. ಪತ್ರಿಕಾಗೋಷ್ಠಿ ಅಥವಾ ಇನ್ನಿತರ ರಾಜಕೀಯ, ಚುನಾವಣಾ ಕಾರ್ಯಕ್ರಮಗಳು ಭರದಿಂದ ಸಾಗುತ್ತವೆ. ಆಫೀಸಿನಲ್ಲಿ ಕೆಲಸ ಜಾಸ್ತಿಯಾಗುತ್ತಿದೆ. ಎಷ್ಟೋ ಬಾರಿ ಬಿಡುವು ಮಾಡಿಕೊಂಡು ಬರೆಯೋಣ ಅಂದ್ರ ಬರೆಯಲಾಗುತ್ತಿಲ್ಲ. ಚುನಾವಣೆ ಮುಗಿಯುವುದು ಮೇ ತಿಂಗಳ ಕೊನೆಯ ವಾರದಲ್ಲಿ. ಆಮೇಲೆ ಬ್ಲಾಗ್ ಬರೇತಿಯಾ ಅಂತ ಕೇಳಬಹುದು. ಪ್ರತಿಯೊಬ್ಬರಿಗೂ ಮನೆ ಅಂತ ಒಂದು ಇದ್ದೇ ಇದೆಯಲ್ಲಾ..ಮನೆಗೆ ಹೋಗಬೇಕು. ಜೂನ್ ನಲ್ಲಿ ಮನೆಗೆ ಅಮ್ಮನ ನೋಡಿ, ಅವರ ಜೊತೆಗೊಂದಿಷ್ಟು ಖುಷಿ ಖುಷಿ ದಿನಗಳನ್ನು ಕಳೆದು ಬರಬೇಕು. ಆಮೇಲೆ ಬ್ಲಾಗ್.,ಜುಲೈ ಮೊದಲಿಂದ ಮತ್ತೆ ಬ್ಲಾಗ್ ಕಡೆ ಬರುತ್ತೇನೆ..ಅಲ್ಲಿಯವರೆಗೆ ಬ್ಲಾಗ್ ಬರೆಯುವುದು ಕಷ್ಟಸಾಧ್ಯ. ನಿಮ್ಮ ಪ್ರೀತಿ, ಪ್ರೋತ್ಸಾಹ, ಹಾರೈಕೆ ನನ್ನೊಂದಿಗಿರಲಿ. ನನ್ ಮರೆಯೊಲ್ಲ ಅಲ್ವಾ?
Thursday, April 24, 2008
Subscribe to:
Post Comments (Atom)
3 comments:
kandita mareyolla. nimma kate kelalu kayutthirutene.
geleya
rajesh
ಚುನಾವಣೆ ಮುಗಿಯಿತು!!
ಇನ್ನು ಫಲಿತಾಂಶಕ್ಕೆ ಕಾಯಬೇಡಿ.
ಮತ್ತೆ ಸರಕಾರ ಉರುಳಿದರೆ ಮತ್ತೊಂದು ಚುನಾವಣೆ ಬಂದೀತು!!
ಶುರುವಾಗಲಿ ನಿಮ್ಮ ಬ್ಲಾಗ್ ಯಾತ್ರೆ!!
ಒಲವಿನಿಂದ
ಬಾನಾಡಿ
ಚುನಾವಣೆ ಮುಗೀತು, ಸಚಿವರೂ ಬಂದ್ರು, ನೀವ್ ಎಲ್ಲಿ ಹೋದ್ರಿ? :)
Post a Comment