Friday, June 20, 2008

ಖಂಡಿತಾ ಬರ್ತೀರಲ್ವಾ?

ಇದೊಂದು ಸಿನಿಮಾ. ಹೆಸರು 'ನಂಪ್ರೀತಿ'! ನಮ್ದೋ..ನಿಮ್ದೋ ಯಾರ ಪ್ರೀತಿನೋ ಗೊತ್ತಿಲ್ಲ. ಹೆಸರೇ 'ನಂಪ್ರೀತಿ'. ಸಬ್ ಟೈಟಲ್ 'ನಿರೀಕ್ಷೆ ಕೂಡದು'! ಹೀಗಿರುವಾಗ ಯಾವುದೇ ನಿರೀಕ್ಷೆಯಿಟ್ಟುಕೊಂಡು ಹೋಗಬೇಡಿ. ಕೇವಲ 20 ನಿಮಿಷದಲ್ಲೇ ಸಿನಿಮಾ ಮುಗಿದುಹೋಗುತ್ತೆ. ಕಥೆಯ ಕ್ಲೂ ಕೊಡಕ್ಕೂ ನನಗಾಗಲ್ಲ, ಏಕಂದ್ರೆ ನನಗೂ ಗೊತ್ತಿಲ್ಲ..ಯಾರೂ ಹೇಳಿಲ್ಲ. ಪ್ರದರ್ಶನಕ್ಕೆ ಮೊದ್ಲು ಕಥೆ ಹೇಳೋದು ಮೂರ್ಖತನ ಬಿಡಿ. ಇದೇ ಭಾನುವಾರ(22 ತಾರೀಕು) ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ 'ಸುಚಿತ್ರಾ ಫಿಲಂ ಸೊಸೈಟಿ'ಯಲ್ಲಿ ಶೋ ಇದೆ. ನೀವು ಬರಬಹುದು, ಮನೆಯವರೆಲ್ಲರನ್ನೂ ಕರೆಯಬಹುದು. ಕೇವಲ 20 ನಿಮಿಷ, ಟಿಕೇಟ್ ಗೆ ದುಡ್ಡು ಕೊಡಬೇಕಿಲ್ಲ..2.30 ಗಂಟೆ ಕತ್ತಲಲ್ಲಿ ಕುಳಿತು ಅಯ್ಯೋ ಟೈಮ್ ವೇಸ್ಟ್ ಅಂತ ಬೊಬ್ಬಿಡುವ ಅಗತ್ಯವಿಲ್ಲ. ಕೇವಲ 20 ನಿಮಿಷ..ಜೀವನದಲ್ಲಿ ಇಂಥ ಎಷ್ಟೋ 20 ನಿಮಿಷವನ್ನು ಕಳೆದುಕೊಂಡಿದ್ದೇವೆ..ವ್ಯಯಿಸಿದ್ದೇವೆ. ಹೀಗಿರುವಾಗ 'ನಂಪ್ರೀತಿ' ಗೋಸ್ಕರ 20 ನಿಮಿಷ ಮೀಸಲಿಟ್ಟರೆ ಅದು ವ್ಯರ್ಥವೆನಿಸದು.
ಹೇಳಕ್ಕೆ ಮರೆತೆ..ಇದರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕವೀಶ್ ಶೃಂಗೇರಿ, ನಿರ್ಮಾಪಕ ಸಾಕ್ಷಿರಾಜ್, ನಾಯಕ ಕುಶಾಲ್ ರಾಘವೇಂದ್ರ, ನಾಯಕಿ ರಂಗಭೂಮಿ ಕಲಾವಿದೆ ನಿರ್ಮಾಲಾ. ಛಾಯಾಗ್ರಹಣ ಸುನೀಲ್ ಶಿವಮೊಗ್ಗ, ಸಂಗೀತ ಆನಂದ್ ಎನ್. ಕುಮಾರ್. ಇಲ್ಲಿ ಬರುವ ಎಲ್ಲಾ ಮುಖಗಳೂ ಹೊಸತು. ಈ ಪುಟ್ಟ ಸಿನಿಮಾಕ್ಕೆ ಬರೋಬ್ಬರಿ ದುಡ್ಡೇನು ಹಾಕಿಲ್ಲ. ಪ್ರಯತ್ನದ ಶ್ರಮವಿದೆ. ಭಾನುವಾರ ರಜಾ ಇದ್ದೇ ಇದೆ..ಬಿಡುವು ಮಾಡ್ಕೊಂಡು ಬನ್ನಿ. ಬರುತ್ತೀರಿ ತಾನೇ?
ಈ ಬಗ್ಗೆ ಇನ್ನೂ ಮಾಹಿತಿ ಬೇಕೇ?
ಸಾಕ್ಷಿರಾಜ್:9448171069
ರಾಘವೇಂದ್ರ: 9886683008

No comments: