Friday, December 7, 2007

ಮತ್ತೆ 'ರಾಮ ರಾಜಕೀಯ'?!

"ರಾಮ ಇರಲೇ ಇಲ್ಲ, ಅವನು ಕವಿಗಳ ಕಲ್ಪನೆ ಮಾತ್ರ"-ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಹೊಸ ಬಾಂಬ್ ಇದು. ಕರುಣಾನಿಧಿ "ರಾಮ ಇರಲಿಲ್ಲ. ಪೌರಾಣಿಕ ಪಾತ್ರವಾಗಿದ್ದ ರಾಮ ಮಹಾ ಹೆಂಡ ಕುಡುಕನಾಗಿದ್ದ" ಎಂದು ಗದ್ದಲ ಎಬ್ಬಿಸಿದ ಬಿಸಿ ಇನ್ನೂ ಪೂರ್ತಿ ಆರಿಹೋಗಿಲ್ಲ. ಈಗ ಬುದ್ದದೇವ್ ಮತ್ತೆ 'ರಾಮ'ನನ್ನು ಹಿಡ್ಕೊಂಡಿದ್ದಾರೆ.ಬಹುಶಃ ನಮ್ಮ 'ಮಂತ್ರಿ ಮಹಾಶಯ'ರಿಗೆ ವಿವಾದವೆಬ್ಬಿಸಲು ರಾಮ ಬಿಟ್ಟರೆ ಬೇರ್ಯಾರು ಸಿಗಲ್ಲ ಅನಿಸುತ್ತೆ ನಿಜಕ್ಕೂ ರಾಮ ಇದ್ದಾನೆ/ ಅಥವ ಇಲ್ಲ ಈ ಪ್ರಶ್ನೆಯ ಅಗತ್ಯವಿದೆಯೇ? ರಾಮ ಇದ್ದಾನೋ ಇಲ್ಲವೋ? ಆದರೆ ಭಾರತೀಯರ ಸನಾತನ ಹಿಂದೂ ಧರ್ಮದಲ್ಲಿ 'ರಾಮ'ನಿಗೆ ಅಗ್ರಸ್ಥಾನ ಇದ್ದೇ ಇದೆ. ರಾಮನೇ ಆದರ್ಶ. ರಾಮ ಇದ್ದಾನೋ ಇಲ್ಲವೋ ಎಂಬ ಪ್ರಶ್ನೆಗಿಂತ ಹೆಚ್ಚಾಗಿ ರಾಮನ ಅಸ್ತಿತ್ವದ ಬಗ್ಗೆ ಜನರಿಗೆ ನಂಬಿಕೆಯಿದೆ ಅನ್ನೋದೇ ನಿತ್ಯ ಸತ್ಯ. ಹೀಗಿರುವಾಗ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ಕರುಣಾನಿಧಿ ಅಥವಾ ಭಟ್ಟಾಚಾರ್ಯ ಅವರ 'ಅತಿ ಮೂರ್ಖತನ' ವಲ್ಲದೇ ಇನ್ನೇನೆಂದು ಹೇಳಲಿ?

'ಎಸ್ಇಝಡ್' ಯೋಜನೆಯ ಫಲವಾಗಿ ಪಶ್ವಿಮಬಂಗಾಳದ ನಂದಿಗ್ರಾಮದಲ್ಲಿ ನಡೆದ 'ರಕ್ತದೋಕುಳಿ' ದೇಶವನ್ನೇ ನಡುಗಿಸಿದೆ. ಎಷ್ಟೋ ಬಡಜನರು ಬದುಕು ಕಳೆದುಕೊಂಡಿದ್ದಾರೆ. ಅಲ್ಲಿ ನಡೆದಿರುವ ಘೋರ ದುರಂತಕ್ಕೆ ಬಲಿಯಾದ ಮುಗ್ಧ ಬಡಜನರ ಸುಟ್ಟ ದೇಹಗಳು ಇನ್ನೂ ಕಾಣಸಿಗುತ್ತವೆ. ಇಂಥ ಪರಿಸ್ತಿತಿ ತನ್ನದೇ ನೆಲದಲ್ಲಿರುವಾಗ, ಈ ಬಗ್ಗೆ ಒಂದಿಷ್ಟು ಯೋಚಿಸದೆ 'ರಾಮ'ನ ಬಗ್ಗೆ ಮಾತಾಡಿ 'ಉರಿಯುತ್ತಿರುವ ಬೆಂಕಿಗೆ ತುಪ್ಪ' ಸುರೀತಾರಲ್ಲಾ? 'ಎಂಥ ಬಾಲಿಶತನವಿದು?!

ಭಟ್ಟಾಚಾರ್ಯ ತನ್ನ ರಾಜ್ಯದ ಬಗ್ಗೆ ಚಿಂತಿಸಿ, ನಂತರ 'ರಾಮ ರಾಜಕೀಯ' ಮಾಡಿದ್ದರೆ ಒಳ್ಳೆಯದು. ಬಿಜೆಪಿ ಪಕ್ಷವನ್ನು ಕೆದಕಲು 'ರಾಮ'ನನ್ನು ರಾಜಕೀಯದಲ್ಲಿ ಬಳಸಿಕೊಳ್ಳುತ್ತಾರೆಂಬುದನ್ನು ಯಾರಿಗೂ ಹೇಳಬೇಕಾಗಿಲ್ಲ. ಇನ್ನೊಂದು ಪಕ್ಷದ ಬಗ್ಗೆ ಇರುವ ದ್ವೇಷವನ್ನು ತೀರಿಸಿಕೊಳ್ಳಲು ಈ ರೀತಿ ಮಾತಾಡುವುದು ಎಷ್ಟು ಸರಿ? ಜನರ ನಂಬಿಕೆಗೆ ಕೊಡಲಿಯೆಟು ಅಲ್ಲವೇ? ಭಟ್ಟಚಾರ್ಯ ಮೊದಲು ತನ್ನ ರಾಜ್ಯದ ಬಗ್ಗೆ ಯೋಚಿಸಲಿ. ರಾಮ ಇಲ್ಲ ಅಂದುಬಿಟ್ಟ ತಕ್ಷಣ ನಂದಿಗ್ರಾಮ ದರಂತಕ್ಕೆ ಬಲಿಯಾದ ಮುಗ್ಧ ಜನರ ಬದುಕು ಬೆಳಗುವುದಿಲ್ಲ. ಸೂರು ಕಳೆದುಕೊಂಡ ಜನರಿಗೆ ರಕ್ಷಣೆ ನೀಡಲಿ. ಅದು ಬಿಟ್ಟು ತನ್ನ ನೆಲದಲ್ಲಿ 'ನರಹತ್ಯೆ' ಮಾಡಿಬಿಟ್ಟು ಎಲುಬಿಲ್ಲದ ನಾಲಗೇಲಿ ಏನೇನೋ ಮಾತಾಡುವುದು ಸರಿಯಲ್ಲ. ಅಷ್ಟಕ್ಕೂ 'ರಾಜಕೀಯ'ದ ಬೇಳೆ ಬೇಯಿಸಲು ಜನರ ನಂಬಿಕೆಯನ್ನೇ ಸುಳ್ಳು ಮಾಡಲು ಹೊರಟಿರುವ ಇವರು ಎಂಥ ಅವಿವೇಕಿಗಳು ???

3 comments:

ಹೆಸರು ರಾಜೇಶ್, said...

Chitraravare Rama, Krishna Mattu Shiva E Deshada Mahan Kanasu Mattu Kanavarikegalu Endu Nanna Bhavane. Adare Rajakaranadalli Hagu Rajyadalitadalli Darmavannu Berasabaradu. Hage Madidare Nanu Namma Deshada Sanvidanakke Apamanisidante. Elli BJP, Congress Hagu Edapakashagalu Tamma Rajakeeya Hitakkagi, Janasamanyana Bhavanegalige Dakke Taruvante Varthisuttiruve. Adakke Nanage Dr.Rammanohar Lohiya Adarsha. Neevu Avara "Rajakeeyada Madya Ondu Biduvu" Pustakadalli "Rama Krishna Shiva" Lekana Odi. Dhanyavadagalu
Gelaya Rajesh

ಚಿತ್ರಾ ಸಂತೋಷ್ said...

ಗೆಳೆಯಾ,
ಪ್ರತಿಕ್ರಿಯೆ ಗೆಕೃತಜ್ಞತೆಗಳು ಹಾಗೂ ಪ್ರೀತಿಯ ಸ್ವಾಗತ. ಮಾಹಿತಿ ನೀಡಿದ್ದೀರಿ. ಖಂಡಿತಾ ನೀವು ಹೇಳಿದ ಪುಸ್ತಕಗಳನ್ನು ತಪ್ಪದೆ ಓದುತ್ತೇನೆ

Rajesh said...

Lohiya was a thunderbolt against capitalistic politics and capitalism.