Friday, June 20, 2008

ಜೀವ ಉಳಿಬೇಕಾದ್ರೂ Influence ಬೇಕು?!

ಅದು ನಗರದ ಪ್ರತಿಷ್ಠಿತ ಆಸ್ಪತ್ರೆ. ರಾಜ್ಯದ ವಿವಿಧ ಭಾಗಗಳ ರೋಗಿಗಳ ಕೇಂದ್ರ. ಯಾರೇ ಕೇಳಿ ಈ ಆಸ್ಪತ್ರೆ ಬಗ್ಗೆ ಗೊತ್ತು..ಜನತೆಗೆ ಒಳ್ಳೆ ಅಭಿಪ್ರಾಯನೂ ಇದೆ. ಅದರ ನಿರ್ದೇಶಕರಂತೂ ಪದೇ ಪದೇ ಈ ಆಸ್ಪತ್ರೆ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತೇವೆ, ಅದು ನೀಡುತ್ತೇವೆ ಇದು ನೀಡುತ್ತವೆ ಅಂತ ಪತ್ರಿಕಾಗೋಷ್ಠಿಯಲ್ಲಿ ಪುಂಖಾನುಪುಂಖವಾಗಿ ಬೊಬ್ಬಿಟ್ಟದ್ದೇ ಬಂತು. ನಾನು ಎರಡು ಸಲ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆಸ್ಪತ್ರೆಯ ಹೆಸರು ಕೇಳಿದ್ರೆ ಮಹಾನ್ ದಾನಿಗಳು ಹಣ ಸುರೀತಾರೆ,ಹೊಗಳುತ್ತಾರೆ. ಒಟ್ಟಿನಲ್ಲಿ ಆ ಆಸ್ಪತ್ರೆಯ ಬಗ್ಗೆ ಒಳ್ಳೆ ಹೆಸರಿದೆ..
ಆದ್ರೆ ಮೊನ್ನೆ ಮೊನ್ನೆ ನನ್ನ ಫ್ರೆಂಡು ಒಬ್ಬರು ತಮ್ಮ ಅತ್ತೆಯ ಚಿಕಿತ್ಸೆಗೆಂದು ಮೈಸೂರಿಂದ ಬಂದಿದ್ದರು. ನಾನು ಸಹಜವೆಂಬಂತೆ ಕೇಳಿದ್ದೆ; ಹೇಗೆ ಬಡವ್ರು ಹೋಗ್ಬಹುದಾ? ಖರ್ಚು ಹೆಚ್ಚಾ?.ಅದ್ಕೆ ಅವ್ರು ಹೇಳಿದ್ದ ಉತ್ತರ ಹೇಗಿತ್ತು ಗೊತ್ತಾ? "ನಾವು (ಜೆಡಿಎಸ್ ನ ಪ್ರಮುಖ ಮುಖಂಡರ ಹೆಸರು ಹೇಳಿ) ಕಡೆಯಿಂದ ಬಂದವರು. ಹೌದಾ? ಅದ್ಕೂ influence ಬೇಕಾ? ಅಂದಾಗ "ಹೂಂ ಮತ್ತೆ, ಅದಿಲ್ಲದೆ ಯಾವುದೂ ಆಗಲ್ಲಮ್ಮ." ಅಂದ್ರು. ಅವರು ಹೇಳಿದ್ದನ್ನು ಕೇಳಿ ನಾನು ಆಸ್ಪತ್ರೆಯ ಒಳಹೊಕ್ಕೆ. ಐದಾರು ರೋಗಿಗಳನ್ನು ಮಾತಾಡಿಸಿದ್ದೆ. ಅವರೇನೂ ಬಡವರಲ್ಲ, ದುಡ್ಡನ್ನೇ ಹಾಸಿಗೆ ಮಾಡ್ಕೊಂಡವರು. ಆದ್ರೂ ಅವರಿಗೆ influence! ಬಡವರಿಗೆ ಅಲ್ಲಿನ ಡಾಕ್ಟರ್ ಗಳು ಹೇಳಿದ್ದೇ ಮದ್ದು..ಕೊಟ್ಟಿದ್ದೇ injection, ಹೇಳಿದಷ್ಟು ದುಡ್ಡು ಎನೀಸಿಕೊಡಬೇಕು..ಹಾಗಾಗಿ ಬಡವರು ಬಂದ್ರು ಸಾಲ ಮಾಡಿ, ಏನೇನೋ ಮಾಡಿ ಬರಬೇಕು. ಹಣವಿಲ್ಲಾಂದ್ರೆ ಅಲ್ಲಿಗೆ ಬರುವಂತಿಲ್ಲ. ಸಾಯುತ್ತಿರುವ ಜೀವವನ್ನು ಉಳಿಸಿಕೊಳ್ಲಲೂ ಸಾಧ್ಯವಿಲ್ಲ.
ಇದ್ಯಾಕಪ್ಪಾ ಬ್ಲಾಗಲ್ಲಿ ಬರೆದ್ಳು? ಇದು ಎಲ್ಲಾ ಕಡೆ ಆಗುತ್ತೆ ಅನ್ನಬಹುದು..ಅದರೆ ನನಗೇಕೋ ಆ ಆಸ್ಪತ್ರೆ ಮೇಲ್ನೋಟಕ್ಕೆ ಕಾಣುವ ಹಾಗೆ ಇಲ್ಲ ಅನಿಸುತ್ತೆ..ಹೌದು! ಈಗಿನ ಕಾಲದಲ್ಲಿ ಮನುಷ್ಯನ ಬದುಕೇ influence ಮೇಲೆ ನಿಂತಿದೆ. ಅನಿಸಲ್ವಾ?

ಖಂಡಿತಾ ಬರ್ತೀರಲ್ವಾ?

ಇದೊಂದು ಸಿನಿಮಾ. ಹೆಸರು 'ನಂಪ್ರೀತಿ'! ನಮ್ದೋ..ನಿಮ್ದೋ ಯಾರ ಪ್ರೀತಿನೋ ಗೊತ್ತಿಲ್ಲ. ಹೆಸರೇ 'ನಂಪ್ರೀತಿ'. ಸಬ್ ಟೈಟಲ್ 'ನಿರೀಕ್ಷೆ ಕೂಡದು'! ಹೀಗಿರುವಾಗ ಯಾವುದೇ ನಿರೀಕ್ಷೆಯಿಟ್ಟುಕೊಂಡು ಹೋಗಬೇಡಿ. ಕೇವಲ 20 ನಿಮಿಷದಲ್ಲೇ ಸಿನಿಮಾ ಮುಗಿದುಹೋಗುತ್ತೆ. ಕಥೆಯ ಕ್ಲೂ ಕೊಡಕ್ಕೂ ನನಗಾಗಲ್ಲ, ಏಕಂದ್ರೆ ನನಗೂ ಗೊತ್ತಿಲ್ಲ..ಯಾರೂ ಹೇಳಿಲ್ಲ. ಪ್ರದರ್ಶನಕ್ಕೆ ಮೊದ್ಲು ಕಥೆ ಹೇಳೋದು ಮೂರ್ಖತನ ಬಿಡಿ. ಇದೇ ಭಾನುವಾರ(22 ತಾರೀಕು) ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ 'ಸುಚಿತ್ರಾ ಫಿಲಂ ಸೊಸೈಟಿ'ಯಲ್ಲಿ ಶೋ ಇದೆ. ನೀವು ಬರಬಹುದು, ಮನೆಯವರೆಲ್ಲರನ್ನೂ ಕರೆಯಬಹುದು. ಕೇವಲ 20 ನಿಮಿಷ, ಟಿಕೇಟ್ ಗೆ ದುಡ್ಡು ಕೊಡಬೇಕಿಲ್ಲ..2.30 ಗಂಟೆ ಕತ್ತಲಲ್ಲಿ ಕುಳಿತು ಅಯ್ಯೋ ಟೈಮ್ ವೇಸ್ಟ್ ಅಂತ ಬೊಬ್ಬಿಡುವ ಅಗತ್ಯವಿಲ್ಲ. ಕೇವಲ 20 ನಿಮಿಷ..ಜೀವನದಲ್ಲಿ ಇಂಥ ಎಷ್ಟೋ 20 ನಿಮಿಷವನ್ನು ಕಳೆದುಕೊಂಡಿದ್ದೇವೆ..ವ್ಯಯಿಸಿದ್ದೇವೆ. ಹೀಗಿರುವಾಗ 'ನಂಪ್ರೀತಿ' ಗೋಸ್ಕರ 20 ನಿಮಿಷ ಮೀಸಲಿಟ್ಟರೆ ಅದು ವ್ಯರ್ಥವೆನಿಸದು.
ಹೇಳಕ್ಕೆ ಮರೆತೆ..ಇದರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕವೀಶ್ ಶೃಂಗೇರಿ, ನಿರ್ಮಾಪಕ ಸಾಕ್ಷಿರಾಜ್, ನಾಯಕ ಕುಶಾಲ್ ರಾಘವೇಂದ್ರ, ನಾಯಕಿ ರಂಗಭೂಮಿ ಕಲಾವಿದೆ ನಿರ್ಮಾಲಾ. ಛಾಯಾಗ್ರಹಣ ಸುನೀಲ್ ಶಿವಮೊಗ್ಗ, ಸಂಗೀತ ಆನಂದ್ ಎನ್. ಕುಮಾರ್. ಇಲ್ಲಿ ಬರುವ ಎಲ್ಲಾ ಮುಖಗಳೂ ಹೊಸತು. ಈ ಪುಟ್ಟ ಸಿನಿಮಾಕ್ಕೆ ಬರೋಬ್ಬರಿ ದುಡ್ಡೇನು ಹಾಕಿಲ್ಲ. ಪ್ರಯತ್ನದ ಶ್ರಮವಿದೆ. ಭಾನುವಾರ ರಜಾ ಇದ್ದೇ ಇದೆ..ಬಿಡುವು ಮಾಡ್ಕೊಂಡು ಬನ್ನಿ. ಬರುತ್ತೀರಿ ತಾನೇ?
ಈ ಬಗ್ಗೆ ಇನ್ನೂ ಮಾಹಿತಿ ಬೇಕೇ?
ಸಾಕ್ಷಿರಾಜ್:9448171069
ರಾಘವೇಂದ್ರ: 9886683008