Sunday, April 18, 2010

ಅಕ್ಕರೆಯ ತಮ್ಮಂಗೆ ಶುಭಾಶಯ


ಈಗಲೂ ನೆನಪಾಗುವವನು ಅವನೇ.
ನನ್ನನ್ನು ಅಕ್ಕರೆಯಿಂದ ಅಕ್ಕಾ ಎನ್ನೋನು. ಒಡಹುಟ್ಟಿಲ್ಲಾಂದ್ರೂ ಒಡನಾಡಿ ಆದೋನು. ಬೆಂಗಳೂರೆಂಬ ಬೆಂಗಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಗ ನನಗೆ ಆಸರೆಯಾದೋನು, ಕಳೆದ ಆರು ವರುಷಗಳಿಂದ ಜೊತೆ ಜೊತೆಗೆ ಹೆಜ್ಜೆ ಹಾಕಿ, ನನ್ನೆಲ್ಲಾ ಭಾವಗಳಿಗೆ ಜೀವ ತುಂಬಿದೋನು, ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾದೋನು, ನನ್ನೆಲ್ಲಾ ಕೋಪ-ತಾಪಗಳ ಜೊತೆ ತಂಗಾಳಿಯಾಗಿ ಬೀಸಿದೋನು, ಸಣ್ಣ-ಸಣ್ಣ ವಿಷ್ಯಕ್ಕೆಲ್ಲಾ ತಲೆಕೆಡಿಸಿಕೊಂಡು ನಿತ್ಯ ನನ್ನ ಬಳಿ ಬೈಗುಳ ತಿಂದೋನು.

ನಾನು ಮದುವೆ ಆಗ್ತೀನಿ ಎಂದಾಗ ಖುಷಿಪಟ್ಟು ಪಾಯಸ ಮಾಡಿ ಸಿಹಿ ತಿನ್ನಿಸಿದೋನು, ಮದುವೆ ದಿನ ಬಾವನ ಕಾಲು ತೊಳೆಯೋದು ನಾನೇ ಎಂದು ಹಠ ಹಿಡಿದು ಕುಳಿತೋನು, ಮದುವೆಗೆ ಮುಂಚೆ ನನ್ನ ಜೊತೆಗಿದ್ದು ಅಕ್ಕಾ ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ಅತ್ತೆ ಮನೇಲಿ ಬೆಳಿಗೆದ್ದು ರಂಗೋಲಿ ಹಾಕಬೇಕೆಂದು ನನಗೆ ರಂಗೋಲಿ ಹಾಕೋಕೆ ಕಲಿಸಿಕೊಟ್ಟವನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದ ಬೋರ್ ಎಂದು ಗೋಳಿಡುವವನು..
ಅವನು ನನ್ನ ಪ್ರೀತಿಯ ತಮ್ಮ, ಸಂದೇಶ. ನನ್ನ ಕೈಲಿ ಬೈಸಿಕೊಂಡ್ರೂ, ಉಗಿಸಿಕೊಂಡ್ರೂ, ಹೊಡೆಸಿಕೊಂಡ್ರೂ ಎಲ್ಲವನ್ನೂ ಸಹಿಸಿಕೊಳ್ತಾ ನನ್ನಳಗೊಂದು ನಗುವಿನ ಅಲೆ ಮೂಡಿಸಿದವನು ನನ್ನ ತಮ್ಮಾ...

ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ...
-ಚಿತ್ರಾ ಸಂತೋಷ್

ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ





ಹೌದಲ್ವಾ? ತುಂಬಾ ಒಳ್ಳೆ ಕಾರ್ಯಕ್ರಮ. ಭಾನುವಾರ, ರಜಾ ದಿನ ಬೇರೆ. ಭಾನುವಾರ ಸ್ವಲ್ಪ ಲೇಟಾಗಿ ಏಳಬೇಕು ಎಂದು ಪ್ರೋಗ್ರಾಂ ಹಾಕ್ಕೊಂಡವರು ಕೂಡ ಸ್ವಲ್ಪ ಬೇಗನೆ ಎದ್ದು ಈ ಕಾರ್ಯಕ್ರಮಕ್ಕೆ ರೆಡಿಯಾಗಿ. ವಿವೇಕ್ ಶಾನುಭಾಗ ಸರ್ ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ರು. ಛೇ! ನಾನು ಮಾತ್ರವಲ್ಲ ನೀವೆ;ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು.
ಬಂದೇ ಬರ್ತೀರಲ್ಲಾ...?
-ಚಿತ್ರಾ ಸಂತೋಷ್