ಪ್ರೀತಿಯ ಅಣ್ಣ....
ರಾಖಿ ಹಬ್ಬದ ಶುಭಾಶಯಗಳು.
ಹೌದು, ನೀನಂದ್ರೆ ಪ್ರೀತಿ, ನೀನಂದ್ರೆ ಭಯ, ನೀನಂದ್ರೆ ಗೌರವ, , ನೀನಂದ್ರೆ ಅಮ್ಮ, ನೀನಂದ್ರೆ ಗೆಳೆಯ,..ಹೀಗೆ ಬದುಕಿನ ಸಮಸ್ತ ಬಾಂಧವ್ಯಗಳನ್ನು ಒಟ್ಟೊಟ್ಟಾಗೇ ನೀಡಿದವ. ಒಡಹುಟ್ಟಿದವ ಅಲ್ಲದಿದ್ದರೂ ಒಡನಾಡಿ ಆದವ. ನನ್ನ ಜೊತೆಗೇ ಹೆಜ್ಜೆಹಾಕಿದವ. ನಾನು, ನನ್ನ ಬದುಕನ್ನು ,ಪ್ರೀತಿಸೋಕೆ ಕಲಿಸಿದವ. ಬೆಳದಿಂಗಳ ತಂಪಿನಲ್ಲಿ ಕುಳಿತು ಅಜ್ಜಿ ಕಥೆ ಹೇಳಿದವ. ಶಾಲೆಗೆ ಹೋಗದೆ ರಚ್ಚೆ ಹಿಡಿದಾಗ ಗದರಿಸಿ, ಶಾಲೆಗೆ ಕಲಿಸಿದವ. ಸಮಸ್ತರನ್ನೂ ಪ್ರೀತಿಸು, ಯಾರನ್ನೂ ಪ್ರೇಮಿಸಬೇಡ ಎಂದು ಬುದ್ಧಿಮಾತು ಹೇಳಿದವ ನೀನು ನನ್ನಣ್ಣ. ನಿದ್ದೆ ಬಾರದಿದ್ದಾಗ ಅಮ್ಮನಂತೆ ಲಾಲಿ ಹಾಡಿದವ. ಅತ್ತಾಗ ನಿನ್ನೆದೆಯ ಪ್ರೀತಿಯ ಮಡಿಲಲ್ಲಿ ಮಲಗಿಸಿ ಸಂತೈಸಿದವ ನೀನು ನನ್ನಣ್ಣ. ಚೆನ್ನಾದ ಡ್ರೆಸ್ ಕೊಡಿಸು, ಬಳೆ ಕೊಡಿಸು, ಕಿವಿಯೋಳೆ ಕೊಡಿಸು ಎಂದಾಗ ಏನೂ ಅನ್ನದೆ ತೆಗೆದುಕೊಟ್ಟವ. ಕೈತುಂಬಾ ಬಳೆ, ತಲೆತುಂಬಾ ಮಲ್ಲಿಗೆ ಮುಡಿಸಿ ನನ್ನ ತಂಗಿ ಎಷ್ಟು ಚೆಂದ ಕಾಣ್ತಾಳೆ ಅಂತ ಹೆಮ್ಮೆ ಪಟ್ಟವ ನೀನು ನಂಗೆ ದೇವ್ರು ಕೊಟ್ಟ ಅಮೂಲ್ಯ ಉಡುಗೊರೆ ಗೊತ್ತಾ? ನಿನ್ನ ಪ್ರೀತಿಯನ್ನು ಮೀರಿ ನಡೆದಾಗ ಕಂಗಳು ಹನಿಗೂಡಿಸಿದವ. ಸುತ್ತಲ ಜಗತ್ತಿನ ಸತ್ಯ-ಮಿಥ್ಯಗಳ, ನೋವು-ನಲಿವುಗಳ ಅರಿವಾಗಿಸಿದವ. ಒಂದು ರೂ.ಗೂ ಅಮೂಲ್ಯ ಬೆಲೆಯಿದೆ ಎಂದು ತಿದ್ದಿತೀಡಿದವ.
ನನಗೆ ಇಷ್ಟದ ತಿಂಡಿ ತಂದುಕೊಟ್ಟು ನನ್ನ ಇನ್ನೂ ಡುಮ್ಮಿಯಾಗಿಸಿದವ. ಆಫೀಸ್ ನಲ್ಲಿ ಬಾಸ್ ಬೈದರೆಂದು ಮನೆಯ ಮೂಲೆಯಲ್ಲಿ ಕುಳಿತು ಅತ್ತಾಗ ಹೆದರಿಕೋಬೇಡ, ಸಹನೆಯಿಂದಿರು ಎಂದು ಸಮಾಧಾನ ಮಾಡಿದವ . ಕಾಲದ ತೆಕ್ಕೆಯಲ್ಲಿ ನೋವಿಗೆ ಬಲಿಯಾಗುವಾಗ ನೋವನ್ನೇ ನಲಿವಾಗಿಸಿದವ. ಪೇಟೆ, ಹಳ್ಳಿ, ಶಾಪಿಂಗ್ ಮಾಲ್ ಸುತ್ತಾಡಿಸಿದವ. ಅಮ್ಮ ಜೊತೆಗಿಲ್ಲದಾಗ ಅಮ್ಮನಾದವ. ನನ್ನ ಭವಿಷ್ಯದ ಕನಸುಗಳ ದೊಡ್ಡ ಗೋಪುರವನ್ನೇ ಕಟ್ಟಿಸಿದವ. ನನ್ನ ಹುಸಿಮುನಿಸು ಮುಂಗೋಪ, ಅಸಹನೆಯಂಥ ದೌರ್ಬಲ್ಯಗಳೊಂದಿಗೆ ರಾಜಿ ಮಾಡಿಕೊಂಡು ತಪ್ಪನ್ನು ತಿದ್ದಿ ತೀಡಿದವ. ನನ್ನ ಮೇಲೆ ಸಿಟ್ಟು ಬಂದರೂ ಒಂದೇ ಒಂದು ಸಲ ನನಗೆ ಕೈ ಎತ್ತದವ. ನಿತ್ಯ ಪುಟ್ಟಾ ಪುಟ್ಟಾ ಎನ್ನುತ್ತಾ ನನ್ನ ಪುಟ್ಟ ಬದುಕಿನಲ್ಲಿ ಪ್ರೀತಿಯ ಮಳೆ ಕರೆದವ ನೀನು ನನ್ನಣ್ಣ. ನನ್ನೊಳಗಿನ ಪುಟ್ಟ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವ ನೀನು ನನ್ನಣ್ಣ.
ಅಣ್ಣಾ...
ನೀ ಜೊತೆಗಿದ್ರೆ ನಂಗೆ ಖುಷಿ, ನೆಮ್ಮದಿ, ಸಂಭ್ರಮ ಎಲ್ಲಾನೂ. ನೆಮ್ಮದಿ, ಖುಷಿ ಇದ್ರೆ ಅಷ್ಟೇ ಸಾಕಲ್ವಾ ಹೇಳು. ಕೆಲಸದೊತ್ತಡದಿಂದ ತಡವಾಗಿ ಪತ್ರ ಬರೀತಾ ಇದ್ದೀನಿ. ನಂಗೆ ಬೆಟ್ಟದಷ್ಟು ಪ್ರೀತಿ ನೀಡಿ, ನನ್ನ ತಿದ್ದಿ ತೀಡಿದ ನೀನೂ ನಂಗೆ ಅಮ್ಮ. ಮೊನ್ನೆ ರಕ್ಷಾಬಂಧನ. ಹೌದು, ನನಗೆ ನೀನೇ ನಿತ್ಯ 'ರಕ್ಷಾಬಂಧನ'. ನಿತ್ಯ ಅಮ್ಮನ ಮಮತೆಯಲ್ಲಿ ನೀನು ನನ್ನ ತೊಯ್ದುಬಿಡು. ಬದುಕು 'ಶರಧಿ'ಯಾಗುತ್ತದೆ ಅಲ್ವಾ? ನೀನು ಖುಷಿಯಾಗಿರು..ಆ ಖುಷಿಯಲ್ಲಿ ನಂಗೊಂದು ಪುಟ್ಟ ತುಣುಕು ನೀಡು. ನಿಂಗೆ ದುಃಖವಾದ್ರೆ ನೀನೊಬ್ನೇ ಸಹಿಸಬೇಡ. ನಂಗೂ ಸಮಪಾಲು ಕೊಡು. ನಾನೂ ನಿನಗೆ 'ಅಮ್ಮ'ನಾಗುತ್ತೇನೆ. ಮತ್ತೊಮ್ಮೆ ರಾಖಿ ಹಬ್ಬದ ಶುಭಾಶಯಗಳು ಕಣೋ.
ತಡವಾಗಿ ಪತ್ರ ಬರೆದಿದ್ದಕ್ಕೆ ಕ್ಷಮೆಯಿರಲಿ.
ಇಂತೀ,
ನಿನ್ನ ತಂಗಿ
Thursday, August 6, 2009
Sunday, July 26, 2009
ನೆನಪುಗಳ ಜೊತೆಗೆ ಒಂದಿಷ್ಟು ಹೊತ್ತು...

ನೀ ನೀಡಿದ 'ಹಿಡಿಪ್ರೀತಿ'ಯ ನೆನಪು.
ಅಮ್ಮನಂತೆ ಸಂತೈಸಿದ ನಿನ್ನ ನುಣುಪು ಕೈಗಳ ನೆನಪು
ನನ್ನ ಕಾಲ್ಗೆಜ್ಜೆ ಸದ್ದಿಗೆ ದನಿಗೂಡಿಸಿದ ನಿನ್ನ ಹೃದಯದ ನೆನಪು.
ನಿನ್ನ ಪ್ರೀತಿಯ ಜೋಗುಳಕ್ಕೆ ನಿದ್ದೆಯ ಮಂಪರಿಗೆ ಜಾರಿದ ನೆನಪು
ನನ್ನ ಕಣ್ಣುಗಳಲ್ಲಿ ಬೆಳಕು ಮೂಡಿಸಿದ ಆ ನಿನ್ನ ಪ್ರೀತಿಯ ಕಂಗಳ ನೆನಪು
ನೀತೊಡಿಸಿದ ಕೈ ಬಳೆ, ಮುಡಿಸಿದ ಘಮ್ ಎನ್ನುವ ಮಲ್ಲಿಗೆಯ ನೆನಪು.
ನಿನ್ನ ಜೊತೆ ದೇವರೆದುರು ಮಂಡಿಯೂರಿ ನಮಿಸಿದ ನೆನಪು
ನಿನ್ನ ಹೆಸರಿನಲ್ಲಿ ದೇವರಿಗೆ ಹಣ್ಣುಕಾಯಿ ಮಾಡಿಸಿದ ನೆನಪು
ನಿನ್ನ ಮಡಿಲಲ್ಲಿ ಪ್ರೀತಿಯ ಅನನ್ಯತೆಯನ್ನು ಸವಿದ ನೆನಪು
ಮನತುಂಬಾ ಕನಸುಗಳನ್ನು ಹೊತ್ತು ನಿನ್ನ ಜೊತೆ ದಾರಿಗುಂಟ ಸಾಗಿದ ನೆನಪು
ನಿನ್ನ ಕಂಗಳಲ್ಲಿ ಕಣ್ಣಿಟ್ಟು 'ನೀ ನನ್ನ ಜೊತೆಗಿರ್ತೀಯಾ?' ಎಂದು ಭರವಸೆಯಿಂದ ಕೇಳಿದ ನೆನಪು.
ಜ್ವರದಿಂದ ನರಳುತ್ತಿರುವಾಗ ತುತ್ತು ಬಾಯಿಗಿಟ್ಟು ಅಮ್ಮನ ವಾತ್ಸಲ್ಯ ತೋರಿದ ನಿನ್ನ ವಿಶಾಲ ಮನದ ನೆನಪು
'ನಂಗ್ಯಾರಿಲ್ಲ' ಎಂದು ನಿನ್ನೆದೆಯಲ್ಲಿ ಅತ್ತಾಗ 'ನಾನಿದ್ದೇನೆ' ಎಂದು ಬದುಕಿನ ಧೈರ್ಯ ತುಂಬಿದ ನಿನ್ನ ದಿಟ್ಟ ಹೃದಯದ ನೆನೆಪು.!
Thursday, July 23, 2009
ಚೆಂದದ ಕಾರ್ಯಕ್ರಮಕ್ಕೆ ನೀವೂ ಬನ್ನಿ..
Thursday, July 9, 2009
ಜಿನುಗು ಮಳೆಗೆ, ಚುಟುಕ ಹನಿಗಳು...
ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?
"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"
"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"
"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"
"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"
"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"
"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"
"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"
"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"
"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"
"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"
"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"
"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"
"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"
"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"
"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"
"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"
"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"
"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"
Friday, July 3, 2009
ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!
ಜುಲೈ 2, 2006!
ಭಾನುವಾರ.
ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.
ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!
ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.
ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.
ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..
ಭಾನುವಾರ.
ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.
ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!
ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.
ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.
ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..
Friday, June 12, 2009
ಪ್ರೇಮಿಯಾಗಿರುತ್ತಿದ್ದರೆ, ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!
ಇಲ್ಲ, ಮನೆಯ ಸಂತಸ, ಶುಭರಾತ್ರಿಯ ಮುತ್ತು...'ಅತ್ಯಂತ ಪ್ರೀತಿಯ' ಎಂಬ ಪದದಿಂದ ಶುರುವಾಗುವ
ವಾರದ ಪತ್ರಗಳ ವಂಚಕ ಭರವಸೆಗಳು ನನಗಲ್ಲ.
ನನಗಲ್ಲ, ಟೊಳ್ಳು ಸಪ್ತಪದಿಯ ವಿಧಿ, ಹಾಸಿಗೆಯ ಮೇಲಿನ ಒಂಟಿತನ..
ಅದರ ಮೇಲೆ ಮಲಗಿ, ಒಬ್ಬ ಸಂಗಾತಿಯ ಕನಸು ಕಾಣುತ್ತಾನೆ.
ಬಹುಶಃ ಹೆಣ್ನೇ, ತನ್ನವಳಿಗಿಂತ ಹೆಚ್ಚು ಕಾಮಿಸುವವಳನ್ನು....
*******
ಕೊಡು ಅವನಿಗೂ ಉಡುಗೊರೆ
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!
ಚಿತ್ರಕೃಪೆ: ಅಂತರ್ಜಾಲ
(ವಿ.ಸೂ: ಕಮಲದಾಸ್ ಬಗ್ಗೆ ಇತ್ತೀಚೆಗೆ ಕನ್ನಡಪ್ರಭದ ಸಾಪ್ತಾಹಿಕ ದಲ್ಲಿ ಟಿ.ಜೆ. ಎಸ್. ಜಾರ್ಜ್ ಹಾಗೂ ಎಸ್. ಕುಮಾರ್ ಅವರು ಬರೆದ ಲೇಖನದಲ್ಲಿ ಕಮಲದಾಸ್ ಅವರ ಕವಿತೆಗಳ ಸಾಲುಗಳನ್ನು ಬರೆದಿದ್ದರು. ಕಮಲದಾಸ್ ನನ್ನ ಇಷ್ಟದ ಬರಹಗಾರ್ತಿಗಳಲ್ಲಿ ಒಬ್ಬರಾಗಿದ್ದರಿಂದ ಅದನ್ನು ಹೆಕ್ಕಿ ಬ್ಲಾಗ್ ನಲ್ಲಿ ಹಾಕೊಂಡಿದ್ದಿನಿ. ಸಂಪರ್ಕಿಸಿ:http://www.kannadaprabha.com/pdf/epaper.asp?pdfdate=6/7/2009
ಚಿತ್ರಕೃಪೆ: ಅಂತರ್ಜಾಲ
Wednesday, June 3, 2009
ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!
**ನಿನ್ನೆ ಆಸ್ಪತ್ರೆ ಕಡೆಗೆ ಸಾಗಿದ್ದೆ. ಸೂರ್ಯ ನೆತ್ತಿಗೇರಿದ್ದ..ನನ್ನ ನೆತ್ತಿಯನ್ನೂ ಬಿಸಿಮಾಡಿದ್ದ! ಕಾಲುಗಳು ಭಾರವೆನಿಸಿದರೂ, ನಡೆಯುತ್ತಿದ್ದವು. ಕುಳ್ಳಗಿನ ದೇಹ, ತಲೆಯಲ್ಲಿ ಒಂಚೂರು ಕೂದಲು ಇಲ್ಲದ ಆ ಯುವಕ ಕಣ್ಣುಮುಚ್ಚಿ ಬೀದಿ ಬದಿಯಲ್ಲಿ ಕುಳಿತು ಕೈಯೊಡ್ಡುತ್ತಿದ್ದ. ಆತನ ತಲೆ ಬಿಸಿಲಿಗೆ ಸುಡುವಂತೆ ಕಂಡುಬರಲಿಲ್ಲ..ಕನಸುಗಳಿದ್ದರೂ ಬದುಕನ್ನೇ ಮರೆತುಕೂತಿದ್ದ. ನನಗಿಂತ ಅನಾರೋಗ್ಯನಾದರೂ ಆತ ಆರೋಗ್ಯವಂತ. ಹೊಟ್ಟೆಯ ಹಸಿವು ಸುಡುವ ಬಿಸಿಲನ್ನೂ ಲೆಕ್ಕಿಸಲಿಲ್ಲ. ಆತನಿಗೆ ವೈದ್ಯರ ಅಗತ್ಯವಿರಲಿಲ್ಲ!**ಮುಂದೆ ಸಾಗಿದಾಗ ಹಣ್ಣು ಮಾರುವವ. ಬಿರುಬಿಸಲನ್ನೂ ಲೆಕ್ಕಿಸದೆ ತರಕಾರಿ, ಹಣ್ಣುಗಳನ್ನು ತನ್ನ ಗಾಡಿ ಮೇಲೆ ಹಾಕೊಂಡು ದೂಡುತ್ತಾ ಸಾಗುತ್ತಿದ್ದ. ಚೌಕಾಸಿಯವರ ಚೌಕಾಸಿಗೆ ಮಣಿದು, ತಕೋಳ್ಳಿ ಅನ್ನುತ್ತಿದ್ದ ಆತನದೂ ಹೊಟ್ಟೆಪಾಡು.
**ಈ ಬೆಂಗಳೂರಿನಲ್ಲಿ ಸಿಗ್ನಲ್ ನಲ್ಲಿ ಒಂದಷ್ಟು ಹೊತ್ತು ನಿಮ್ಮ ವಾಹನಗಳು ನಿಂತಿರಲಿ..ನಿಮ್ಮನ್ನು ಹಿಂದೆ-ಮುಂದಿನಿಂದ ಪೀಡಿಸುವ ಹಿಜಡಾಗಳು ಕಣ್ಣಿಗೆ ಬೀಳುತ್ತಾರೆ. ಚಿಲ್ಲರೆ ನೀಡದಿದ್ರೆ ನಿಮ್ಮನ್ನು ಅವರು ಸುಮ್ಮನೆ ಬಿಡಲಾರರು..ನೀವು ಅಂಜಿ ನೀಡೇ ನೀಡುತ್ತೀರ. ಬೆಳಿಗ್ಗೆಯಿಂದ ಸಂಜೆತನಕ ಬದುಕು ಹೊರುವ ಕೆಲಸ..ನಿತ್ಯಪಾಡಿದು. ನಾನು ಬಸ್ಸಲ್ಲಿ ಬರುವಾಗ ಯಾವಾಗಲೂ ಕಣ್ಣಿಗೆ ಬೀಳೋ ಬದುಕಿನ ಸತ್ಯಗಳು!
**ಅಲ್ಲಿ ಬೀದಿ ಬದಿಯಲ್ಲಿ ಸುಲಭ ಶೌಚಾಲಯ, ಪಕ್ಕದಲ್ಲೇ ದೇವಸ್ಥಾನ. ಪುಟ್ಟ ಕಂಚಿನ ಪ್ರತಿಮೆ. ನಿತ್ಯ ನಡೆಯುವ ಪೂಜೆ-ಪುರಸ್ಕಾರಗಳು, ಜಾಗಟೆಯ ಸದ್ದು, ಮಂತ್ರಘೋಷ. ಟೂ ವೀಲರ್, ಕಾರಿನಲ್ಲಿ ಬರೋ ಮಂದಿ ಅಲ್ಲೇ ತಮ್ಮ ವಾಹನಗಳು ನಿಲ್ಲಿಸುತ್ತಾರೆ. ಒಂದಿಷ್ಟು ನೋಟುಗಳನ್ನು ಹುಂಡಿಗೆ ಹಾಕಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಬಿಎಂಟಿಸಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಹೊರಗೆ ಇಣುಕಿದ್ದ ನನ್ನ ಕಣ್ಣುಗಳಿಗೆ ಇದು ನಿತ್ಯದ ಸಂಗತಿ.
**ಆ ಪ್ರತಿಷ್ಠಿತ ಸ್ಕೂಲ್ ಎದುರಿನ ಬಸ್ ನಿಲ್ದಾಣದಲ್ಲಿ ನನ್ನ ಬಸ್ಸಿಗಾಗಿ ಕಾಯುತ್ತಿದ್ದೆ. ತಮ್ಮ ಮಕ್ಕಳನ್ನು ಕಾರಿನಲ್ಲಿ ತಂದು ಬಿಡುವ ಹೆತ್ತವರು ಮಗುವಿನ ಕೆನ್ನೆಗೆ ಮುತ್ತನಿಟ್ಟು, ಕ್ಲಾಸ್ ರೂಂಗೆ ಕಳಿಸುತ್ತಿದ್ದರು. ನೆನಪಾಯಿತು..ನನ್ನ ಯಜಮಾನ್ರಿಗೆ ಸಂಬಳ ಆಗಿಲ್ಲವೆಂದು..ಮಕ್ಕಳಿಗೆ ಪುಸ್ತಕ ತೆಗೆದುಕೊಟ್ಟಿಲ್ಲ. ಹಾಗಾಗಿ ಮಕ್ಕಳನ್ನು ಮುಂದಿನ ವಾರ ಶಾಲೆಗೆ ಕಳಿಸಬೇಕು ಎಂದಿರುವ ಆ ಅಮ್ಮ!
**ಹೊಟೇಲ್ ಎದುರುಗಡೆ ಇರುವ ಆ ಮೆಟ್ಟಿಲ ಮೇಲೆ ನಿಂತು ಆ ಕಪ್ಪು ಕನ್ನಡದ ಹುಡುಗಿ ಸಿಗರೇಟು ಸೇದುತ್ತಿದ್ದಳು, ಗ್ಲಾಸು ತೊಳೆಯುವ ಹುಡುಗ ಪಿಳಿಪಿಳಿಂತ ಆಕೆಯನ್ನೇ ದಿಟ್ಟಿಸುತ್ತಿದ್ದ..ಅವಳ ಕಾರು ಮರೆಯಾಗುವವರೆಗೂ!
**ರಾಶಿ ಹಾಕಿದ ಗೋಣಿಚೀಲಗಳ ಪಕ್ಕ ಕುಳಿತ ಆ ಪುಟ್ಟ ಕಂದಮ್ಮ ಸಿಕ್ಕಿದ್ದನ್ನು ಮೆಲ್ಲುತ್ತಾ, ಎದುರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋ ಮಕ್ಕಳನ್ನು ಆಸೆ ಕಂಗಳಿಂದ ನೋಡುತ್ತಾ!
**ನೆನಪಾಯಿತು..ಪ್ರೀತಿಯ ಗೆಳೆಯ ಹೇಳಿದ ಕಥೆ ...'ಅವಳು ಮದುವೆಯಾಗಿದ್ದಳಂತೆ ಹುಡುಗನ ಸಂಬಳವನ್ನು ಪ್ರೀತಿಸಿ! 'ಸಂಬಳ ಪ್ರೀತಿಸಿದವಳಿಗೆ ' ಬದುಕಿನ ಒಲವು ಅರ್ಥವಾಗಲೇ ಇಲ್ಲವಂತೆ..ಆತನಿನ್ನೂ ಕೊರಗುತ್ತಿದ್ದನಂತೆ ಖಿನ್ನತೆಯಿಂದ....ಸಂಬಳ ಪ್ರೀತಿಗೆ ಬಲಿಯಾಗಿ'!
ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಿದ್ದೆ. ಮೆಜೆಸ್ಟಿಕ್ ಜನಜಂಗುಳಿ, ಕತ್ತಲಾಗುವಾಗ ಕಿತ್ತು ತಿನ್ನೋ ಕಣ್ಣುಗಳು, ಬದುಕೋ ದಾರಿಗಳು, ನಾನು ಬನಶಂಕರಿಯಲ್ಲಿ ರಸ್ತೆ ದಾಟಕ್ಕೆ ಪರದಾಡಿದ್ದು, ಪಾರ್ಕಲ್ಲಿ ಕುಳಿತು ಒಬ್ಬಳೇ ಅತ್ತಿದ್ದು, ಅಮ್ಮನ ನೆನಪಾಗಿ ದಿಂಬು ಒದ್ದೆಯಾಗಿಸಿದ್ದು, ಮನೆಗೆ ಹೋಗ್ತೀನಂತ ಅಣ್ಣ ಜೊತೆ ಜಗಳ ಆಡಿದ್ದು, ಅತ್ತಾಗ ಅವನು ಐಸ್ ಕ್ರೀಂ ಕೊಡಿಸಿದ್ದು, ಬೆಂಗಳೂರಿನ ಇಂಚಿಂಚನ್ನು ಪರಿಚಯ ಮಾಡಿಸಿದ್ದು, ಮೊದಲ ಬಾರಿಗೆ ಸಾನಿಯಾ ಮಿರ್ಜಾನ ಪ್ರೆಸ್ ಮೀಟ್ ಗೆ ಹೋಗಿ ಅರೆಬರೆ ಇಂಗ್ಲೀಷ್ ಬಾರದ ನಾನು ಅವಳ ಇಂಗ್ಲೀಷ್ ಅರ್ಥವಾಗದೆ..ಎಡಿಟರ್ ಜೊತೆ ಬೈಸಿಕೊಂಡಿದ್ದು....ಎಲ್ಲವೂ ನೆನಪಿನ ಪರದೆ ಮೇಲೆ ಸಾಗುತ್ತಲೇ ಇವೆ. ಬದುಕು ಸಾಗುತ್ತಲೇ ಇದೆ..ಮುಂದಕ್ಕೆ. ಬದುಕಿನ ಸತ್ಯ-ಮಿಥ್ಯಗಳನ್ನು ಕಣ್ಣಾರೆ ಕಾಣುತ್ತಾ, ಕೆಲವೊಮ್ಮೆ ಕಂಗಳು ಒದ್ದೆಯಾಗಿಸುತ್ತಾ, ಕೆಲವೊಮ್ಮೆ ಖುಷಿ ಖುಷಿಯಾಗುತ್ತಾ....!!
ಫೋಟೋ: ಎನ್.ಕೆ. ಸುಪ್ರಭಾ
Subscribe to:
Comments (Atom)
