ಆಫೀಸ್ ನಲ್ಲಿ ಬಂದು ಕುಳಿತಾಗ ಚಡಪಡಿಕೆ, ಅಳು ಉಕ್ಕಿ ಬರುತ್ತಿತ್ತು. ನನ್ನ ಸಿಸ್ಟಮ್ ಎದುರು ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೆ...ಅಮ್ಮನ ಮಡಿಲ ಬಿಟ್ಟು ಬಂದಂಗೆ! ಕಾರಣ ಬಸ್ಸಲ್ಲಿ ಬರುವಾಗ ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೆ!! ಅವಳು ಬೇರಾರೂ ಅಲ್ಲ, ನನ್ನ ಡೈರಿ..ಹೆಸರು ಜನನಿ! ಎರಡು ವರ್ಷಗಳ ಹಿಂದೆ ಹೊಸದಿಗಂತ ಪತ್ರಿಕೆಯಲ್ಲಿರುವಾಗ ನನ್ನ ಸೀನಿಯರ್ ಸರ್ ಒಬ್ರು ನಂಗೆ ತುಂಬಾ ಚೆಂದದ ಡೈರಿ ಪುಸ್ತಕ ತಂದುಕೊಟ್ಟಿದ್ದರು. ಅದಕ್ಕೆ ಜನನಿ ಎಂದು ಹೆಸರಿಟ್ಟು, ನಾನು ಓದಿರುವ, ನನಗೆ ಇಷ್ಟವಾದ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿಡುತ್ತಿದ್ದೆ. ಬಸವಣ್ಣನ ವಚನ, ಮಂಕುತಿಮ್ಮನ ಕಗ್ಗ, ರಸ್ಕಿನ್ ಬಾಂಡ್ ಕವನ ಸಾಲುಗಳು, ಬೇಂದ್ರೆ, ಕುವೆಂಪು, ನಿಸಾರ್, ಕೆ.ಎಸ್.ಎನ್, ಗೌರೀಶ ಕಾಯ್ಕಿಣಿ ಸಾಹಿತ್ಯ ವಿಮರ್ಶೆಯ ಸಾಲುಗಳು, ಲಂಕೇಶ್...ಹೀಗೆ ಕಳೆದ ಎರಡು ವರ್ಷದಲ್ಲಿ ಓದಿದ ಎಲ್ಲಾ ವಿಷಯಗಳನ್ನು ಬರೆದಿಡುತ್ತಿದ್ದೆ.
ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,
ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.
"ಏನಮ್ಮ ನೋಡ್ತಾ ಇದ್ದೀಯಾ?'
"ಅಂಕಲ್, ಆ ಪುಸ್ತಕ ಕೊಡ್ತೀರಾ?"
"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"
"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"
"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"
ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.
"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ
"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"
"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?
ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,
ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.
"ಏನಮ್ಮ ನೋಡ್ತಾ ಇದ್ದೀಯಾ?'
"ಅಂಕಲ್, ಆ ಪುಸ್ತಕ ಕೊಡ್ತೀರಾ?"
"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"
"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"
"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"
ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.
"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ
"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"
"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?


