ಅದು ನಗರದ ಪ್ರತಿಷ್ಠಿತ ಆಸ್ಪತ್ರೆ. ರಾಜ್ಯದ ವಿವಿಧ ಭಾಗಗಳ ರೋಗಿಗಳ ಕೇಂದ್ರ. ಯಾರೇ ಕೇಳಿ ಈ ಆಸ್ಪತ್ರೆ ಬಗ್ಗೆ ಗೊತ್ತು..ಜನತೆಗೆ ಒಳ್ಳೆ ಅಭಿಪ್ರಾಯನೂ ಇದೆ. ಅದರ ನಿರ್ದೇಶಕರಂತೂ ಪದೇ ಪದೇ ಈ ಆಸ್ಪತ್ರೆ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತೇವೆ, ಅದು ನೀಡುತ್ತೇವೆ ಇದು ನೀಡುತ್ತವೆ ಅಂತ ಪತ್ರಿಕಾಗೋಷ್ಠಿಯಲ್ಲಿ ಪುಂಖಾನುಪುಂಖವಾಗಿ ಬೊಬ್ಬಿಟ್ಟದ್ದೇ ಬಂತು. ನಾನು ಎರಡು ಸಲ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆಸ್ಪತ್ರೆಯ ಹೆಸರು ಕೇಳಿದ್ರೆ ಮಹಾನ್ ದಾನಿಗಳು ಹಣ ಸುರೀತಾರೆ,ಹೊಗಳುತ್ತಾರೆ. ಒಟ್ಟಿನಲ್ಲಿ ಆ ಆಸ್ಪತ್ರೆಯ ಬಗ್ಗೆ ಒಳ್ಳೆ ಹೆಸರಿದೆ..
ಆದ್ರೆ ಮೊನ್ನೆ ಮೊನ್ನೆ ನನ್ನ ಫ್ರೆಂಡು ಒಬ್ಬರು ತಮ್ಮ ಅತ್ತೆಯ ಚಿಕಿತ್ಸೆಗೆಂದು ಮೈಸೂರಿಂದ ಬಂದಿದ್ದರು. ನಾನು ಸಹಜವೆಂಬಂತೆ ಕೇಳಿದ್ದೆ; ಹೇಗೆ ಬಡವ್ರು ಹೋಗ್ಬಹುದಾ? ಖರ್ಚು ಹೆಚ್ಚಾ?.ಅದ್ಕೆ ಅವ್ರು ಹೇಳಿದ್ದ ಉತ್ತರ ಹೇಗಿತ್ತು ಗೊತ್ತಾ? "ನಾವು (ಜೆಡಿಎಸ್ ನ ಪ್ರಮುಖ ಮುಖಂಡರ ಹೆಸರು ಹೇಳಿ) ಕಡೆಯಿಂದ ಬಂದವರು. ಹೌದಾ? ಅದ್ಕೂ influence ಬೇಕಾ? ಅಂದಾಗ "ಹೂಂ ಮತ್ತೆ, ಅದಿಲ್ಲದೆ ಯಾವುದೂ ಆಗಲ್ಲಮ್ಮ." ಅಂದ್ರು. ಅವರು ಹೇಳಿದ್ದನ್ನು ಕೇಳಿ ನಾನು ಆಸ್ಪತ್ರೆಯ ಒಳಹೊಕ್ಕೆ. ಐದಾರು ರೋಗಿಗಳನ್ನು ಮಾತಾಡಿಸಿದ್ದೆ. ಅವರೇನೂ ಬಡವರಲ್ಲ, ದುಡ್ಡನ್ನೇ ಹಾಸಿಗೆ ಮಾಡ್ಕೊಂಡವರು. ಆದ್ರೂ ಅವರಿಗೆ influence! ಬಡವರಿಗೆ ಅಲ್ಲಿನ ಡಾಕ್ಟರ್ ಗಳು ಹೇಳಿದ್ದೇ ಮದ್ದು..ಕೊಟ್ಟಿದ್ದೇ injection, ಹೇಳಿದಷ್ಟು ದುಡ್ಡು ಎನೀಸಿಕೊಡಬೇಕು..ಹಾಗಾಗಿ ಬಡವರು ಬಂದ್ರು ಸಾಲ ಮಾಡಿ, ಏನೇನೋ ಮಾಡಿ ಬರಬೇಕು. ಹಣವಿಲ್ಲಾಂದ್ರೆ ಅಲ್ಲಿಗೆ ಬರುವಂತಿಲ್ಲ. ಸಾಯುತ್ತಿರುವ ಜೀವವನ್ನು ಉಳಿಸಿಕೊಳ್ಲಲೂ ಸಾಧ್ಯವಿಲ್ಲ.
ಇದ್ಯಾಕಪ್ಪಾ ಬ್ಲಾಗಲ್ಲಿ ಬರೆದ್ಳು? ಇದು ಎಲ್ಲಾ ಕಡೆ ಆಗುತ್ತೆ ಅನ್ನಬಹುದು..ಅದರೆ ನನಗೇಕೋ ಆ ಆಸ್ಪತ್ರೆ ಮೇಲ್ನೋಟಕ್ಕೆ ಕಾಣುವ ಹಾಗೆ ಇಲ್ಲ ಅನಿಸುತ್ತೆ..ಹೌದು! ಈಗಿನ ಕಾಲದಲ್ಲಿ ಮನುಷ್ಯನ ಬದುಕೇ influence ಮೇಲೆ ನಿಂತಿದೆ. ಅನಿಸಲ್ವಾ?
Friday, June 20, 2008
ಖಂಡಿತಾ ಬರ್ತೀರಲ್ವಾ?


ಈ ಬಗ್ಗೆ ಇನ್ನೂ ಮಾಹಿತಿ ಬೇಕೇ?
ಸಾಕ್ಷಿರಾಜ್:9448171069
ರಾಘವೇಂದ್ರ: 9886683008
Subscribe to:
Posts (Atom)