
"ನಿಮ್ಮ ಮಗನ ಸಾವಿನ ಬಗ್ಗೆ ಹೇಳಿ" ಎಂದು ಮಗ/ಮಗಳ ಶವದ ಎದುರು ರೋಧಿಸುತ್ತಿರುವ ಅಪ್ಪ/ಅಮ್ಮನ ಬಳಿ ಕೇಳಿದರೆ...! ಹೌದು..ಇಂಥ ಪ್ರಶ್ನೆಗಳನ್ನು ನಿನ್ನೆ ವರದಿಗಾರರು ಕೇಳುತ್ತಿದ್ದುದನ್ನು ನೋಡಿ ವರದಿಗಾರರ ಇಂಥ ನೀಚತನದಿಂದ ಮನಸ್ಸು ರೋಸಿಹೋದರೆ, ಮಗನ ಕಳೆದುಕೊಂಡ ಹೆತ್ತ ಕರುಳ ದುಃಖ ನೋಡಿ ನಾನೂ ಕರಗಿ ಕಣ್ಣಿರಾದೆ. ನಿನ್ನೆ ಮುಂಬೈ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಮೇಜರ್ ಸಂದೀಪ್ ಅವರ ಶವ ಬೆಂಗಳೂರಿನ ಯಲಹಂಕಕ್ಕೆ ಬರಲು ಇನ್ನೇನು ಕೆಲ ಕ್ಷಣಗಳಿವೆ ಎಂದಾಗ ಟಿವಿ ಮಾಧ್ಯಮದ ಕೆಲ ವರದಿಗಾರರು ಇಂಥ ಪ್ರಶ್ನೆಗಳನ್ನು ಅವರ ತಂದೆ ಮತ್ತು ಸಂಬಂಧಿಕರ ಜೊತೆ ಕೇಳುತ್ತಿದ್ದರು. ನಿಮ್ಮ ಮಗನ ಬಗ್ಗೆ ಹೇಳಿ, ಅವನ ಸಾವಿನ ಕುರಿತು ಹೇಳಿ..ಹೀಗೆ ದುಃಖದ ಮನೆಯಲ್ಲಿ ಇನ್ನಷ್ಟು ದುಃಖ ತುಂಬಿಸುವ, ಈಗಾಗಲೇ 'ಸತ್ತಿರುವವರನ್ನು' ಮತ್ತೊಮ್ಮೆ ಸಾಯಿಸುವ ಪಾಪಕೃತಗಳಿಗೆ ಕೈ ಹಾಕುತ್ತಿರುವ ಇಂಥ ವರದಿಗಾರರಿಗೆ ಕನಿಷ್ಠ ಜ್ಞಾನವೂ ಇಲ್ಲ ಅನಿಸಿತ್ತು.
ನಾನು ಎಲ್ಲರನ್ನು ಬೈಯುತ್ತಿಲ್ಲ..ಎಲ್ಲಾ ವರದಿಗಾರರು ಹೀಗೆ ಮಾಡುತ್ತಾರಂತಲ್ಲ..ಆದರೆ ಕೆಲವು ವರದಿಗಾರರ ಅವಿವೇಕತನದಿಂದಾಗಿ ಇಂದು ಮಾಧ್ಯಮಗಳ ಮೇಲೆ ಜನ ಯಾವಾಗ ನಂಬಿಕೆ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ. ನಿನ್ನೆಯ ಕೆಲ ಟಿವಿಗಳ ವರದಿ ನೋಡಿದ್ರೆ..ನ್ಯೂಸ್ ಕೊಡೋ ವೇಗದಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ದಾಳಿಯೇ ಪೂರ ಕನ್ ಫ್ಯೂಸ್ ಆಗುತ್ತಿತ್ತು.
ಇತ್ತೀಚೆಗೊಬ್ಬರು ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಫೈಲಟ್ ಒಬ್ರು ಸತ್ತಿರುವುದು ನೆನಪಿರಬಹುದು(ಹೆಸರು ಮರೆತು ಹೋಗಿದೆ..ಗೊತ್ತಿದ್ರೆ ಹೇಳಿ)..ಅವರ ಹೆತ್ತವರ ಬಳಿ ಹೋಗಿ ನಿಮ್ಮ ಮಗನ ಸಾವಿನ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ ಅಂದಾಗ, ಅಯ್ಯೋ ನಮ್ಮ ಮಗನ ಸಾವಿನ ಬಗ್ಗೆ ಹೇಳಬೇಕಾಯ್ತಲ್ಲಾ..ಅಂತ ಗೋಳೋ ಅಂತ ಅತ್ತುಬಿಟ್ಟರು. ಎರಡು ವರ್ಷಗಳ ಹಿಂದೆ ರಾಯಾಚೂರಿನಲ್ಲಿ ಕೊಳವೆ ಬಾವಿ ಒಳಗೆ ಬಿದ್ದ ಸಂದೀಪ್ ಅನ್ನು ಹೊರತೆಗೆದರೂ ಆತ ಬದುಕಿ ಉಳಿಯಲಿಲ್ಲ. ಕೊಳವೆ ಬಾವಿ ಒಳಗೆ ಬಿದ್ದ ಮಗ ಬದುಕಿ ಉಳಿಯುತ್ತಾನೆ ಅನ್ನೋ ನಿರೀಕ್ಷೆಯಿಂದ ಮತ್ತು ದುಃಖ ತಡೆಯಲಾಗದೆ ಅಳುತ್ತಿದ್ದ ಅಪ್ಪನ ಬಳಿ, ಟಿವಿ ವರದಿಗಾರನೊಬ್ಬ ಹೋಗಿ, "ನಿಮ್ಮ ಮಗ ಬದುಕಿ ಉಳಿಯುತ್ತಾನೆ ಅಂತ ಅನಿಸುತ್ತದೆಯೇ? ' ಎಂದು ಕೇಳಿದಾಗ, ಯಾಕಪ್ಪ ಇಂಥ ಪ್ರಶ್ನೆಗಳನ್ನು ಕೇಳ್ತಿಯಾ,...ನನ್ ಮಗ ಬದುಕಿ ಬರ್ತಾನೆ ಅಂತ ಹೇಳುತ್ತಾ ಅಳುತ್ತಾನೇ ಇದ್ರು.
ಇತ್ತೀಚೆಗೊಬ್ಬರು ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಫೈಲಟ್ ಒಬ್ರು ಸತ್ತಿರುವುದು ನೆನಪಿರಬಹುದು(ಹೆಸರು ಮರೆತು ಹೋಗಿದೆ..ಗೊತ್ತಿದ್ರೆ ಹೇಳಿ)..ಅವರ ಹೆತ್ತವರ ಬಳಿ ಹೋಗಿ ನಿಮ್ಮ ಮಗನ ಸಾವಿನ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ ಅಂದಾಗ, ಅಯ್ಯೋ ನಮ್ಮ ಮಗನ ಸಾವಿನ ಬಗ್ಗೆ ಹೇಳಬೇಕಾಯ್ತಲ್ಲಾ..ಅಂತ ಗೋಳೋ ಅಂತ ಅತ್ತುಬಿಟ್ಟರು. ಎರಡು ವರ್ಷಗಳ ಹಿಂದೆ ರಾಯಾಚೂರಿನಲ್ಲಿ ಕೊಳವೆ ಬಾವಿ ಒಳಗೆ ಬಿದ್ದ ಸಂದೀಪ್ ಅನ್ನು ಹೊರತೆಗೆದರೂ ಆತ ಬದುಕಿ ಉಳಿಯಲಿಲ್ಲ. ಕೊಳವೆ ಬಾವಿ ಒಳಗೆ ಬಿದ್ದ ಮಗ ಬದುಕಿ ಉಳಿಯುತ್ತಾನೆ ಅನ್ನೋ ನಿರೀಕ್ಷೆಯಿಂದ ಮತ್ತು ದುಃಖ ತಡೆಯಲಾಗದೆ ಅಳುತ್ತಿದ್ದ ಅಪ್ಪನ ಬಳಿ, ಟಿವಿ ವರದಿಗಾರನೊಬ್ಬ ಹೋಗಿ, "ನಿಮ್ಮ ಮಗ ಬದುಕಿ ಉಳಿಯುತ್ತಾನೆ ಅಂತ ಅನಿಸುತ್ತದೆಯೇ? ' ಎಂದು ಕೇಳಿದಾಗ, ಯಾಕಪ್ಪ ಇಂಥ ಪ್ರಶ್ನೆಗಳನ್ನು ಕೇಳ್ತಿಯಾ,...ನನ್ ಮಗ ಬದುಕಿ ಬರ್ತಾನೆ ಅಂತ ಹೇಳುತ್ತಾ ಅಳುತ್ತಾನೇ ಇದ್ರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಳ್ಳಭಟ್ಟಿ ದುರಂತದ ಬಗ್ಗೆ ನೀವೂ ತಿಳಿದಿರಬಹುದು. ಅಲ್ಲಿ ಹೆಣಗಳು ಬಿದ್ದಿದ್ದರೆ, ಹೆಣಗಳ ಸುತ್ತ ಅಳುತ್ತಿರುವ ಅವರ ಸಂಬಂಧಿಕರ ಬಳಿ ಹೋಗಿ ಅವರನ್ನು ಮಾತಾಡಿಸೋದು...ಮಾತಾಡಿಸುವುದು ತಪ್ಪಲ್ಲ..ಆದರೆ ಇಂಥ ಅಸಂಬದ್ಧ ಪ್ರಶ್ನೆಗಳನ್ನು ಕೇಳುವಾಗ ನಿಜಕ್ಕೂ ಅಹನೀಯವೆನಿಸುತ್ತೆ. ಇದು ಖಂಡಿತಾ ಸರಿಯಲ್ಲ..ಅವನು ಪತ್ರಿಕಾ ಅಥವಾ ಟಿವಿ, ಯಾವ ವರದಿಗಾರನಾದ್ರೂ ಸರಿ..ಹೀಗೆ ಕೇಳೋದು ಸರಿಯಲ್ಲ. ಆದರೆ ಕೇಳೋರು ಕೇಳ್ತಾನೆ ಇರ್ತಾರೆ. ಮುಂಬೈನಲ್ಲಿ ಮದ್ಯಾಹ್ನ ನಡೆದ ಸ್ಫೋಟವನ್ನು ರಾತ್ರಿ ಒಂಬತ್ತು ಗಂಟೆಗೆ ಬರೋ ನ್ಯೂಸ್ ನಲ್ಲಿ "ಬನ್ನಿ..ತಾಜ್ನಲ್ಲಿ ನಡೆಯುತ್ತಿರುವ ಸ್ಫೋಟದ ಕುರಿತು ತಿಳ್ಕೋಳ್ಳದಕ್ಕೆ ನೇರವಾಗಿ ಅಲ್ಲಿ ಹೋಗಿ ಬರೋಣ" ಅಂದ್ರೆ ಮನೆಯಲ್ಲಿ ಟಿವಿ ಎದುರು ಕುಳಿತವರು ಏನಪ್ಪಾ..ಮಧ್ಯಾಹ್ನದ ಸ್ಫೋಟನೋ ಅಥವಾ ಮತ್ತೆ ಸ್ಫೋಟ ಆಯಿತಾ ಅಂತ ಗೊಂದಲದಲ್ಲಿ ಸಿಕ್ಕಿಬಿಡ್ತಾರೆ. ಇದು ನ್ಯೂಸ್ ಸೆನ್ಸಾ? ನಾನ್ ಸೆನ್ಸಾ? ಗೊತ್ತಾಗುತ್ತಿಲ್ಲ. ನಿನ್ನೆ ರಾತ್ರಿ ಕುಳಿತು ಮೇಜರ್ ಸಂದೀಪ್ ಸಾವು ಕುರಿತು ಟಿವಿ ಚಾನೆಗಳ ಅವಿವೇಕತನದ ಪ್ರಶ್ನೆಗಳನ್ನು ನೋಡಿದಾಗ ಮನದೊಳಗೆ ಬೈಯೋದು ಬಿಟ್ಟು ಬ್ಲಾಗ್ ನಲ್ಲಿ ತುಂಬಿಸೋಣ ಅನಿಸ್ತು.