ನಿನ್ನೆಗೆ (ಜನವರಿ 30) ಮಹಾತ್ಮಾಗಾಂಧಿ ಗೋಡ್ಸೆಯಿಂದ ಹತರಾಗಿ 60 ವರ್ಷ ಆಯಿತು. ನಿನ್ನೆ ರಾತ್ರಿ ಆಫೀನಿಂದ ಹೊರಡುವಾಗ 8 ಗಂಟೆ ರಾತ್ರಿ. ನನ್ನ ಸ್ನೇಹಿತರೊಬ್ಬರು ಸಿಕ್ಕಿದ್ದರು. ಆಫೀಸ್ ಬಳಿಯಿಂದ ನನ್ ಮನೆತನಕ ಅವರ ಜೊತೆ ಕಾರಲ್ಲಿ ಹೋಗಿದ್ದೆ. ಹಾಗೆ ಮಾತಡುತ್ತಿರಬೇಕಾದ್ರೆ ಗಾಂಧೀಜಿ ವಿಷಯ ಮಾತಾಡುತ್ತಾ ಹೋದೆವು. ಮಾತಾಡುತ್ತಲೇ ಇರುವಾಗ ಅವರು " ಗಾಂಧೀಜಿ ಜೀವನಮಾರ್ಗವನ್ನು ಸರಿಯಾಗಿ ಪಾಲಿಸುವುದು ಎಂ.ಜಿ. ರೋಡ್ " ಮಾತ್ರ ಅಂದ ಅವರು " ಈ ಮಾತು ನಾನು ಹೇಳಿದ್ದಲ್ಲ, ಖ್ಯಾತ ಸಾಹಿತಿಯೊಬ್ಬರೇ ಹೇಳಿದ್ದಾರೆ" ಅಂದ್ರು. ಯಾಕೆ ಅಂತ ಕೇಳಿದಾಗ ನಕ್ಕು ಅವರು "ಅಲ್ಲಮ್ಮ ನಿಂಗೇನು ಗೊತ್ತಾಗುತ್ತೆ ಹೇಳು? ಗಾಂಧೀಜಿ ಸರಳ ಬದುಕನ್ನು ಅನುಸರಿಸಿದ್ದಾರೆ. ಹಾಗೆ ಎಂ.ಜಿ. ರೋಡ್ ಗೆ ಹೋಗೋರೆಲ್ಲರದು ಸರಳ ಬದುಕು, ಗಾಂಧೀಜಿ ಥರ ಒಂಚೂರು ಬಟ್ಟೆ.." ಹೀಗೆ ವಿವರಿಸಿ ನಗತೊಡಗಿದರು. ಈ ಮಾತು ತಮಾಷೆಗೆ ಹುಟ್ಟಿಕೊಂಡಿದ್ದು. ತನ್ನ ತತ್ವ, ಜೀವನಾದರ್ಶಗಳ ಮೂಲಕ ವಿದೇಶಿಯರ ಮನಗೆದ್ದವರು ಗಾಂಧೀಜಿ. ಈ ಎಂ.ಜಿ. ರೋಡ್ ಕೂಡ ವಿದೇಶಿಯರನ್ನೇ ಆಕರ್ಷಿಸುತ್ತದೆ. 'ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ಓಡಾಡುವಂತಾದರೆ, ಆಗ ಮಹಿಳೆಯೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ' ಅಂದವರು ಗಾಂಧೀಜಿ. ಆ ಮಾತು ಕೂಡ ಇಲ್ಲಿ ನೂರಕ್ಕೆ ನೂರುಭಾಗವೂ ನಿಜವಾಗುತ್ತಿದೆ. ನಡುರಾತ್ರಿಯಲ್ಲಿಯೂ ಇಲ್ಲಿ ಮಹಿಳೆಯರು ಬೇಕಾಬಿಟ್ಟಿ ಸ್ವತಂತ್ರರಾಗಿ ಸುತ್ತಾಡುತ್ತಾರೆ. ಥೇಟ್ ಗಾಂದಿಯಂತೆ ಮೈಯಲ್ಲಿ ಅರೆಬಟ್ಟೆ!! ಪಾಪ, ಈ ರಸ್ತೆಯಲ್ಲಿ ಒಂದೇ ಒಂದು ಅಪವಾದ ಅಂದ್ರೆ ಗಾಂಧೀಜಿಯ ಸಾರಾಯಿ ವಿರುದ್ಧದ ಧೋರಣೆ ಇನ್ನೂ ಇಲ್ಲಿನ ಜನತೆಗೆ ತಿಳಿದಿಲ್ಲ. ಹಗಲೂ ರಾತ್ರಿಯೆನ್ನದೆ, ಬೆಳಗ್ಗಿನಿಂದ ನಡುರಾತ್ರಿಯವರೆಗೂ ಇಲ್ಲಿನ ಬಾರ್. ಪಬ್ಗಳಲ್ಲಿ ಹೌಸ್ಪುಲ್. ಇದೊಂದು ವಿಷ್ಯ ಬಿಟ್ರೆ ಮತ್ತೆ ಎಲ್ಲ ರೀತಿಯಿಂದಲೂ ಮಹಾತ್ಮಗಾಂಧೀ ರಸ್ತೆ ಗಾಂಧೀಜಿಯ ಜೀವನಾದರ್ಶಗಳನ್ನು ಚಾಚು ತಪ್ಪದೆ ಪಾಲಿಸುತ್ತದೆ!!
**ದಯಾಶಂಕರ್ ಶುಕ್ಕ ಸಾಗರ್ ಬರೆದ 'ಬ್ರಹ್ಮಚರ್ಯ ಕೀ ಪ್ರಯೋಗ್' ಹೊಸ ಪುಸ್ತಕದ ಬಗ್ಗೆ ಪತ್ರಿಕೆಯಲ್ಲಿ ಓದಿದೆ. ಗಾಂಧೀಜಿ ಸಾಯುವಾಗ 'ಹೇ ರಾಮ್' ಅಂದಿಲ್ಲ, 'ಅಹ್' ಎಂದು ಹೇಳಿದ್ದಾರೆ ಎಂದು ಲೇಖಕರು ವಾದಿಸಿದ್ದಾರಂತೆ. ಬಹುಶಃ ಸತ್ತವರ ಬಗ್ಗೆ ಬದುಕಿದ್ದವರು ಸಧ್ಯದಲ್ಲಿಯೇ ವಿವಾದಗಳನ್ನು ಸೃಷ್ಟಿಸಬಹುದು.
Subscribe to:
Post Comments (Atom)
1 comment:
gandhijiyannu simplifide madi nodabedi. Sadyavaguvudadare Avara Hind Swaraj Pustaka Odi.
Shubhasayagalondige
geleya
rajesh
Post a Comment