Tuesday, November 27, 2007

ಬೆಂಗ್ಳೂರು ಸಿಟಿ ಬಸ್ಸುಗಳೇ ಸಮಸ್ಯೆ ಮಾರಾಯ್ರೆ..

ನಿಮಗೆ ಗೊತ್ತುಂಟಾ? ಈ ಬೆಂಗಳೂರು ಸಿಟಿ ಬಸ್ಸಲ್ಲಿ ಹೋಗುವುದೇ ದೊಡ್ಡ ಸಮಸ್ಯೆ ಮಾರಾಯ್ರೆ. ನನ್ನ ಮನೆಯಿಂದ ನನ್ನ ಆಫೀಸಿಗೆ ಬಸ್ಸಲ್ಲಿ ಬಂದ್ರೆ ಇರೋದು ಕೇವಲ 15 ನಿಮಿಷದ ದಾರಿ. ಆದ್ರೆ ಈ ಟ್ರಾಫಿಕ್ ಜಾಮ್ಗಳ ನಡುವೆ ಸಿಕ್ಕಿಕೊಂಡ್ರೆ 1.30ಗಂಟೆಯ ಭರ್ಜರಿ ಜರ್ನಿ ನನ್ದು. ಮೊನ್ನೆ ನಾನು ಆಫೀಸಿನಿಂದ ಹೊರಟಾಗ ರಾತ್ರಿ 8.30. ಬೆಂಗಳೂರಿನಲ್ಲಿ ಇದೇನು ತಡರಾತ್ರಿಯಲ್ಲ ಬಿಡಿ. ಆಫೀಸಿನಿಂದ ಹೊರಟವಳು ಅರ್ಧ ಗಂಟೆ ಬಸ್ಸ್ಟಾಂಡಿನಲ್ಲಿ ಕಾದೆ. 9 ಗಂಟೆಗೆ ಬಸ್ಸು ಹತ್ತಿದೆ. ಅದೇನು ಕರ್ಮವೋ ಟ್ರಾಫಿಕ್ ಜಾಮ್! ಬಸ್ಸು ಎಲ್ಲೆಲ್ಲೋ ಸುತ್ತಾಡಿಕೊಂಡು ಹೋಗಿ, ನಾನಿಳಿಯುವ ಸ್ಥಳಕ್ಕೆ ಬಂದಾಗ 10.30 ಗಂಟೆ. ನಂತ್ರ ಇನ್ನೊಂದು ಬಸ್ಸು ಹತ್ತಿ ಹೋಗಬೇಕು. ಆಟೋದಲ್ಲೊ ಹೋಗೋಣವೆಂದರೆ 10 ನಿಮಿಷದ ದಾರಿಗೆ 100 ರೂಪಾಯಿ ಕೇಳ್ತಾರೆ. ಬಸ್ಸಿಗೆ ಕಾದು ಬಸ್ಸಲ್ಲೇ ಹೋದೆ. ಲೇಟ್ ನೈಟ್ ರಾತ್ರಿ ಅಲ್ವಾ? ಕುಡುಕ್ರ ಕಾಟ ಅಂದ್ರೆ ಅವರು ಕುಡಿದಿರುವ ಸ್ಮೆಲ್ಲು ನಮ್ ಮೂಗಿಗೆ. ಎಂಥ ಮಾರಾಯ್ರೆ ಅವರಿಗೆ ಹೇಳಿದ್ದಾದ್ದರೂ ಅರ್ಥ ಆಗುತ್ತಾ ಅದೂ ಇಲ್ಲ. ಅಷ್ಟು ಹೊತ್ತು ರಾತ್ರೀಲಿ ಹೋಗೋ ಹುಡುಗೀರೆಲ್ಲ ಸಾಮಾನ್ಯುವಾಗಿ ಬಸ್ಸಲ್ಲಿ ಹೋಗಲ್ಲ. ಟು ವೀಲರ್ ಅಥವ ಕಾರಲ್ಲೇ ಹೋಗ್ತಾರೆ. ಇದೊಂದು ರೀತಿಯ ಕಿರಿಕಿರಿ ಆದ್ರೆ ಇನ್ನೊಂದೆಡೆ ಕಂಡಕ್ಟ್ರ್ರು ರಾತ್ರಿ ಡ್ಯೂಟಿ ಮಾಡೋ ಟ್ರಾಫಿಕ್ ಪೊಲೀಸ್ ಥರ ಆಡ್ತಾನೆ. ಪ್ರಯಾಣಿಕರ ಟಿಕೇಟ್ ಮಾಡಕ್ಕೂ ಅವನಿಗ್ಗೆ ಮೂಗಿನ ಮೇಲೆ ಸಿಟ್ಟು. ಬೇಕಾಬಿಟ್ಟಿ ಬೈಯುತ್ತಾ, ರಶ್ನಲ್ಲಿ ನುಗ್ಗಿಕೊಂಡು ಬೆವರು ಒರೆಸಿಕೊಳ್ಳುತ್ತಾ, ಸ್ಟಾಪ್ ಬಂದಾಗ 'ವಿಸಿಲ್ ' ಹಾಕೋಕೂ ಅವನಿಗೆ ನೆನಪಿರಲ್ಲ. ಕೆಲವರಂತೂ ಹತ್ತಿ ಮುಂದಿನ ಸ್ಟಾಪ್ನಲ್ಲಿ ಇಳೀಯುವವರೆಗೂ ಆತ ಎಲ್ಲೋ ಮಧ್ಯದಲ್ಲಿ ಸಿಕ್ಕಹಾಕೊಂಡು ಟಿಕೇಟ್ ಟಿಕೇಟ್ ಅನ್ತಾನೆ ಇರ್ತಾನೆ, ಇತ್ತ ಪಾಸ್ ಎಂದು ಸುಳ್ಳು ಹೇಳಿ ಹತ್ತಿದವರೂ ಮೆಲ್ಲಗೆ ತಮ್ಮ ಸ್ಟಾಪ್ನಲ್ಲಿ ಇಳದುಕೊಳ್ಳುತ್ತಾರೆ. ಇನ್ನೊಂದೆಡೆ 'ಎಲ್ರೂ ಪಾಸ್ ಪಾಸ್ ಅನ್ತಾರೆ. ಬೋಲಿಮಕ್ಳು ಒಳಗೋಗದೆ ಡೋರಲ್ಲಿ ನೇತಾಡ್ತಾರೆ, ನಮ್ ಕಷ್ಟ ಯಾರ್ ಕೇಳ್ತಾರೆ..ನಮ್ಗೂ ಹೆಂಡ್ತಿ ಮಕ್ಳು ಇದ್ದಾರೆ..ಹೊಟ್ಟೆಪಾಡಿಗೆಲ್ಲ.."ಕಂಡಕ್ಟ್ರ ಗೊಣಗಾಟ ಬೇರೆ. ಯಾರಾದ್ರೂ 3-5 ರೂಪಾಯಿ ಕೊಟ್ಟು ಟಿಕೇಟ್ ಕೊಡದೆ ತನ್ನ ಕಿಸೆಗಿಳಿಸಿಕೋಳ್ಳುವ ಆಸೆ ಪಾಪ ಅವನಿಗೆ. ಕೆಲವರಂತೂ ಟಿಕೇಟ್ ನೀಡಿ, ನೂರರ ನೋಟು ತೆಗೆದುಕೊಂಡು ಆಮೇಲೆ ಚಿಲ್ಲರೆ ಕೊಡದೆ ಬೇಗನೇ ರೈಟ್ ಅಂದುಬಿಡ್ತಾರೆ. ಬೆಂಗ್ಳೂರು ಬಸ್ಸುಗಳಲ್ಲಿ ಹೀಗೆ ದುಡ್ಡು ಮಾಡೋ ಕಂಡಕ್ಟ್ರಣ್ಣ ನವ್ರುಗೇನೂ ಬರವಿಲ್ಲ ಬಿಡಿ. ಇನ್ನು ಡ್ರೈವರಣ್ಣನ ಕತೆ ಕೇಳೋದೆ ಬೇಡಪ್ಪ. ರಾತ್ರಯಂತೂ ಅವನಿಗೆ ಕಂಡಕ್ಟ್ರ ಸಿಳ್ಳೆ ಕೇಳೋದೇ ಇಲ್ಲ, ಅವನೇನೂ ಉದ್ದಕ್ಕೆ ಹೋಗ್ತಾನೇ ಇರ್ತಾನೆ. ಇಳೇಬೇಕಾದ್ರೆ ನಾವೇ ಅವ್ನ ಹತ್ರ ಬಂದು ಇಳಿತೀವಿ ಅನ್ಬೇಕು. ಅಬ್ಬಾಬ್ಬಾ ಬೆಂಗ್ಳೂರು ಸಿಟಿ ಬಸ್ಸುಗಳ ಪ್ರಯಾಣ ನೋಡಿದ್ರೆ, ಯಾವ ಜನ್ಮದ ಪಾಪದ ಫಲ ಅನ್ನದೆ ಅಡ್ಡಿಯಿಲ್ಲ.

2 comments:

ಹೆಸರು ರಾಜೇಶ್, said...

chitraravare adkke nodi navu bengaloorige barode ella. Lekana tumba chennagide.
SATHYA SARALA SUNDARA
geleya
rajesh

ಚಿತ್ರಾ ಸಂತೋಷ್ said...

ಹೌದಾ? ಬೆಂಗ್ಳೂರು ಬರಲ್ವಾ? ಬೇಡಪ್ಪಾ..ಮೈಸೂರಲ್ಲೇ ಇದ್ದುಬಿಡಿ. ಥ್ಯಾಂಕ್ಯೂ