Friday, July 25, 2008

ಇದೆಲ್ಲ ಎಕ್ಸ್ ಕ್ಲೂಸಿವ್ ಸುದ್ದಿಗಳು ಕಣ್ರಿ..

ಅದೇ ನಿನ್ನೆ ಬಾಂಬು ಸ್ಪೋಟ..ಜತೆಗೆ ಜನರಷ್ಟೇ ಅಲ್ಲ, ಚಾನೆಲ್ಲುಗಳೂ ವದಂತಿಗಳನ್ನು ಸ್ಪೋಟಿಸುವುದರಲ್ಲಿ ನಿರತರಾಗಿದ್ದುದು ದುರದೃಷ್ಟ. ನಿನ್ನೆ ನಾನು ಮಧ್ಯಾಹ್ನ 1 ಗಂಟೆಗೇ ಆಫಿಸಿನಿಂದ ಮನೆಗೆ ತೆರಳಿದ್ದೆ. ಸ್ವಲ್ಪ ಜ್ವರವಿದ್ದುರದಿಂದ ಬೇಗನೇ ಮನೆಗೆ ಹೊರಟಿದ್ದೆ. ಮನೆಗೆ ತಲುಪುವಾಗಲೇ ಒಂದಷ್ಟು ಮೆಸೇಜ್ಗಳು ನನಗೆ ಬಾಂಬು ಸ್ಪೋಟದ ಬಗ್ಗೆ ತಿಳಿಸಿದ್ದವು. ಮತ್ತೆ ಟಿ.ವಿ. ನೋಡೋಣ ಅಂದ್ರೆ ಕೇಬಲ್ ಸಂಪರ್ಕವನ್ನೇ ಕಡಿತಗೊಳಿಸಲಾಗಿತ್ತು. ನಂತರ ಮೊಬೈಲು ಕೂಡ ಸ್ಥಗಿತ. ಅದರ್ಲಿ..ವಿಷ್ಯ ಅದಲ್ಲ, ಪ್ರತಿ ಚಾನೆಲ್ಲುಗಳು ತಾ ಮುಂದೆ-ತಾ ಮುಂದೆ ಎಂದು ಜಿದ್ದಿಗೆ ಬಿದ್ದವರಂತೆ ಸ್ಪೊಟದ ಕುರಿತು ಮಾಹಿತಿ ನೀಡುತ್ತಿದ್ದವು. ಎಲ್ಲವೂ ಎಕ್ಸ್ ಕ್ಲೂಸಿವ್! ಬೆಂಗಳೂರಿಗೆ ಬೆಂಗಳೂರೇ ಟಿ.ವಿ. ಮುಂದೆ ಕುಳಿತು ಸುದ್ದಿ ನೋಡುತ್ತಿದ್ದರು. ಇದು ಸಹಜ ಬಿಡಿ. ಆದ್ರೆ ನಾವು ಸರಿಯಾದ ಮಾಹಿತಿಯೇ ನೀಡಿದ್ದೇವೆಯೇ? ಎಂಬ ಕನಿಷ್ಠ ಪರಿಜ್ಞಾನ ಚಾನೆಲ್ಲುಗಳಿಗೆ ಬೇಡವೇ? ಕನ್ನಡದ ಚಾನೆಲ್ಲೊಂದು ನಿನ್ನೆ ಈ ಸ್ಪೋಟದ ಬಗ್ಗೆ ಎಕ್ಸ್ಕ್ಲೂಸಿವ್ ಸುದ್ದಿ ಹೊಡೆಯೋಕೆ ಶುರುಮಾಡಿದ್ದು ಇನ್ನು ಹೇಳಿದ್ದನ್ನೇ ಮತ್ತೆ ಮತ್ತೆ ಅಂದ್ರೆ ಜನರಿಗೆ ವಾಕರಿಕೆ ಬರೋ ರೀತಿ ಬಿತ್ತರಿಸ್ತಾ ಇದೆ. ಅಷ್ಟೇ ಅಲ್ಲ..ನಿನ್ನೆ ಮಡಿವಾಳದಲ್ಲಿ ಬಾಂಬು ಸ್ಪೋಟದಲ್ಲಿ ಸುಧಾ ಎಂಬಾಕೆ ಸಾವಿಗೀಡಾಗಿದ್ದರೂ, ಆ ಚಾನೆಲ್ನಲ್ಲಿ ಬಂದಿದ್ದು ಲಕ್ಷ್ಮಿ ಎಂಬಾಕೆ ಮೃತರು. ಅಷ್ಟೇ ಅಲ್ಲ, ಸ್ವಲ್ಪ ಹೊತ್ತಿನಲ್ಲಿ ಸುಧಾ ಎಂಬಾಕೆಯ ಸಾವು. ಒಟ್ಟು ಇಬ್ಬರ ಸಾವು. ನಮ್ಮನೆಯಲ್ಲೂ ಅದೇ ಚಾನೆಲ್ ನೋಡ್ತಾ ಇದ್ದೆ. ಒಟ್ಟಿನಲ್ಲಿ ಜನರಿಗೆ ಎಂಥ ಸುದ್ದಿ ನೀಡಬೇಕು ಎಂಬುದಕ್ಕಿಂತ ಏನಾದ್ರೂ ಆಗ್ಲಿ ಎಕ್ಸ್ ಕ್ಲೂಸಿವ್ ಆಗಿ ತೋರಿಸ್ಬೇಕು ಅನ್ನೋದೇ ಮಹಾಸಾಧನೆ ಅಂದುಕೊಂಡಂತಿತ್ತು ಆ ಚಾನೆಲ್ಲು. ನಮ್ಮೂರಿಂದಲೂ ಆ ಚಾನೆಲ್ ನೋಡಿ ಅಮ್ಮ, ತಮ್ಮ ಎಲ್ರರದು ಕಾಲ್. ಅದ್ರೆ ಆ ಚಾನೆಲ್ ಹೊರತುಪಡಿಸಿ, ಎಲ್ರೂ ಸರಿಯಾದ ಮಾಹಿತಿಯನ್ನೇ ನೀಡಿದ್ದವು.ಬಹುಶಃ ನೀವುಗಳೂ ಈ ಚಾನೆಲ್ಲನ್ನು ವೀಕ್ಷಿಸಿರಬಹುದು. ನಮ್ಮ ಸುದ್ದಿವಾಹಿನಿಗಳು ಎಷ್ಟು ನೀಚಮಟ್ಟಕ್ಕೆ ಇಳಿದಿವೆ ಎಂಬುದಕ್ಕೆ ಇದೊಂದು ನಿದರ್ಶನ. ಹೆಚ್ಚೆನೂ ಬರೆಯಲ್ಲ..ನೀವೇ ಹೇಳಿ.

No comments: