Tuesday, March 4, 2008

ಡಿ.ವಿ.ಜಿ. ಅವರ ಹುಟ್ಟುಹಬ್ಬಕ್ಕೆ ನೀವೂ ಬನ್ನಿ..

ಮುಂಬರುವ ಮಾರ್ಚ್ 17ಕ್ಕೆ ಆಧುನಿಕ ಸರ್ವಜ್ಞ ಎಂದೇ ಕರೆಯಲ್ಪಡುವ ಕವಿ ಡಿ.ವಿ. ಗುಂಡಪ್ಪ ಅವರಿಗೆ 121 ವರ್ಷ ತುಂಬುತ್ತೆ. ಅವರು ನಮ್ಮ-ನಿಮ್ಮ ನಡುವೆ ಇಲ್ಲವಾದರೂ ಬದುಕಿನ ಮೌಲ್ಯಗಳನ್ನೇ ತೆರೆದಿಟ್ಟ 'ಮಂಕುತಿಮ್ಮನ ಕಗ್ಗ' ಎಂಬ ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ. ಇಂದಿಗೂ ನಮ್ಮಲ್ಲಿ ಡಿ.ವಿ.ಜಿ. ಚಿರಾಯು. ನಮ್ಮೆಲ್ಲರ ಬದುಕಿಗೆ ಜೀವನಾದರ್ಶವೂ ಹೌದು. ನಾನು ಕಗ್ಗ ಓದಿದ್ದು 10ನೇ ತರಗತಿಯಲ್ಲಿ. ಆಗ ಒಂದೂ ಅರ್ಥವಾಗಿರಲಿಲ್ಲ. ಆಮೇಲೆ ಅದಕ್ಕೆ 'ಕಗ್ಗಕ್ಕೊಂದು ಕೈಪಿಡಿ' ಪುಸ್ತಕ ಬಂತು. ಅದನ್ನು ಓದಿದಾಗಲೇ ನನಗೆ ಕಗ್ಗ ಅಂದ್ರೆ ಏನು?ಅದ್ರಲ್ಲಿ ಏನಿದೆ ಅಂತ ಅರ್ಥವಾಗಿದ್ದು.
ಇಂದು ಕಗ್ಗದಂಥ ಕೃತಿಗಳು ಕಡಿಯಾಗುತ್ತಿವೆ, ಜನತೆಗೆ ಹಿಂದಿನ ಉತ್ತ,ಮ ಕೃತಿಗಳನ್ನು ಓದುವವರೂ, ಅದರಲ್ಲಿದ್ದ ಜೀವನಾದರ್ಶಗಳನ್ನು ತಿಳಿದು ಆ ಬಗ್ಗೆ ಜನರಲ್ಲಿ ಅರಿವು ಉಂಟುಮಾಡುವವವರು ತೀರಾ ಕಡಿಮೆ. ಇಂಥ ಸನ್ನಿವೇಶದಲ್ಲಿ ಬೆಂಗಳೂರಿನ ಸಮಾಜ ಸೇವಕರ ಸಮಿತಿ ಬೆಂಗಳೂರಿನಲ್ಲಿ 'ಡಿವಿ.ಜಿ' ಅವರ ಹುಟ್ಟುಹಬ್ಬ ಆಚರಿಸಿ, ಆ ಮೂಲಕ ಡಿ.ವಿ.ಜಿ. ಅವರ ವಿಶಾಲ ಜೀವನಾದರ್ಶವನ್ನು ಜನಮನದಲ್ಲಿ ಹರಡುವ ಉತ್ತ,ಮ ಕಾರ್ಯ ಹಮ್ಮಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಡಿ.ವಿ.ಜಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾ ಬಂದಿರುವ ಸಮಾಜ ಸೇವಕ ಸಮಿತಿ, ಡಿ.ವಿ.ಜಿ. ಅವರ ಸಾಹಿತ್ಯವನ್ನು ನಾಡಿನೆಲ್ಲೆಡೆ ತಲುಪಿಸುವ ಉದ್ದೇಶ ಹೊಂದಿದೆ. ಟೀ-ಶರ್ಟ್ ಗಳ ಮೇಲೆ ಕಗ್ಗದ ನುಡಿಗಳನ್ನು ಬರೆಸುವುದು ಮತ್ತು ಖ್ಯಾತ ಕವಿಗಳ ಅಥವಾ ಕಗ್ಗದ ನುಡಿಗಳನ್ನೇ ಹೊಂದಿರುವ ಶುಭಾಶಯ ಪತ್ರಗಳನ್ನು ಸಮಾಜ ಸೇವಕರ ಸಮಿತಿ ಹೊರತಂದಿದೆ. ಆಶ್ಚರ್ಯವೆಂದರೆ, ಈ ಸಮತಿಯಲ್ಲಿರುವವರೆಲ್ಲರೂ ಐಟಿ ಉದ್ಯೋಗಿಗಳು. ಇಂದು ಬೆಂಗಳೂರಿನಂಥ ಮಹಾನಗರದಲ್ಲಿ ಸಾಹಿತ್ಯ, ಮೌಲ್ಯ, ಸಂಸ್ಕೃತಿ ಎಲ್ಲವೂ ಮರೆಯಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಸಮಾಜ ಸೇವಕರ ಸಮಿತಿಯ ಧ್ಯೇಯವನ್ನು ಮೆಚ್ಚಲೇಬೇಕು. ಇಷ್ಟು ಮಾತ್ರವಲ್ಲ ಬಳ್ಲಾರಿಯಲ್ಲಿ ಎರಡು ಬಡಮಕ್ಕಳಿಗೆ ಶಾಲೆಗಳನ್ನು ತೆರೆದು ಉಚಿತ ವಿದ್ಯಾಭ್ಯಾಸ ನೀಡುತ್ತಾರೆ.

ಕಾರ್ಯಕ್ರಮ ನಡೆಸುವ ಸ್ಥಳ: ಗಾಯನ ಸಮಾಜ ಬೆಂಗಳೂರು
ಸಮಯ: ಸಂಜೆ 6 ಗಂಟೆ


No comments: