ಕೊನೆಗೂ ಪುಸ್ತಕ ಸಿದ್ಧವಾಗಿದೆ.ತಪ್ಪೆಲ್ಲಾ ನನ್ನದೇ.
ತುಂಬಾ ಸಮಯದಿಂದ ಇಂಥ ಪುಸ್ತಕ ಮಾಡೋಣ ಹೇಳುತ್ತಾ ಇದ್ದವರು ನನ್ನ ಮೇಸ್ಟ್ರು ಪುರಂದರ ಭಟ್ಟರು.ಅವರು ಕಾರಂತರು ಕಟ್ಟಿದ ಕರ್ನಾಟಕ ಸಂಘದ ಅಧ್ವರ್ಯು.
ನಾನು ತುಂಬಾ ಶೈ.
ಕತೆ ಬರೆಯುವುದು ಗೊತ್ತು ಆದರೆ ಈ ಪುಸ್ತಕ ಮಾಡುವುದು ಅದನ್ನು ಹೊರತರುವುದು ಇತ್ಯಾದಿ ಎಲ್ಲಾ ನನಗೆ ಆಗುವ ಹೋಗುವ ಸಂಗತಿಯಲ್ಲ ಅಂತ ಸುಮ್ಮನಿದ್ದೆ.
ನನಗೆ ನನ್ನ ಕತೆಗಳ ಬಗೆಗೆ ಸದಾ ಅನುಮಾನ.
ಅಂತೂ ನಾನು ಸರಿ ಸಾರೂ ಎಂದೆ.
ಹಾಗೇ ಹೇಳಲು ನಾನು ತೆಗೆದುಕೊಂಡ ಅವಧಿ ಕೇವಲ ಎರಡೂವರೆ ವರ್ಷ.
ತಾರೀಕು ೨೪ ಇದೇ ತಿಂಗಳು ಈ ಕತೆ ಪುಸ್ತಕವನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದಾರೆ ಇದನ್ನು ಪ್ರೀತಿಯಿಂದ ರೂಪಿಸಿದ ಕರ್ನಾಟಕ ಸಂಘ.
ಪುಸ್ತಕವನ್ನು ಎತ್ತಿ ತೋರಿಸುವುದಕ್ಕೆ ಬರುವವನು ನನಗೆ ಅವನಲ್ಲದೇ ಇನ್ಯಾರೂ ಅಲ್ಲದ ನನ್ನ ಒಡನಾಡಿ ಗೆಳೆಯ ಜೋಗಿ.
ಅವರ ಜೊತೆ ಹಿರಿಯ ಸ್ನೇಹಿತ ನಾಗತಿಹಳ್ಳಿ ಚಂದ್ರಶೇಖರ್.
ನೀವೂ ಅಲ್ಲಿಗೆ ಬರಬೇಕು ಅಷ್ಟೇ..
ಬೇರೇನೂ ನನಗೆ ಗೊತ್ತಿಲ್ಲ.
ಏನೆಲ್ಲಾ ಇದೆ ಅಂತ ಅಲ್ಲಿಗೆ ಬನ್ನಿ ಗೊತ್ತಾಗುತ್ತದೆ.
ಎಲ್ಲಿಗೆ ಅಂದರೆ ಪುತ್ತೂರಿಗೆ.
ಅನುರಾಗ ವಠಾರಕ್ಕೆ.
ಬರ್ತೀರಲ್ಲ?
-ಗೋಪಾಲಕೃಷ್ಣ ಕುಂಟಿನಿ
No comments:
Post a Comment