ನಿನ್ನೆಯ ಜಿನುಗು ಮಳೆಗೆ ನನ್ನ ಪುಟ್ಟ ಮನೆಯಲ್ಲಿ ಕುಳಿತಾಗ ಯಾವುದೋ ಪುಸ್ತಕ ಓದುತ್ತಿದ್ದಂತೆ ಚುಟುಕ ಕವಿ ದಿನಕರ ದೇಸಾಯಿ ಅವರ ಚುಟುಕುಗಳು ಕಣ್ಣಿಗೆ ಬಿದ್ದವು. ಓದುತ್ತಿದ್ದಂತೆ ಮಳೆಗಾಲಕ್ಕೆಂದು ಅಮ್ಮ ಮಾಡಿಕೊಟ್ಟ ಹಪ್ಪಳ-ಸಂಡಿಗೆ ಮೆಲ್ಲೋ ಅನುಭವವಾಯ್ತು. ನಾನು ಓದಿದ್ದನ್ನು ನಿಮಗೂ ಉಣಬಡಿಸಿದ್ದೇನೆ. ಪುರುಸೋತ್ತು ಇದ್ರೆ ಓದಿಕೊಳ್ಳಿ. ಬೆಂಗಳೂರಿನ ಜಿಟಿಜಿಟಿ ಮಳೆ, ಚುಮುಚುಮು ಚಳಿಗೆ ನಿಮಗೂ ಹಪ್ಪಳ-ಸಂಡಿಗೆ ತಿಂದಂತಾಗಬಹುದೇನೋ...?
"ಬಿಸಿನೆಲದಲ್ಲಿ ತುಸು ಹಸಿಯಾಯ್ತು
ಬಿತ್ತಿದ ನೆಲದ ಬೀಜವು ಸಸಿಯಾಯ್ತು
ಸಸಿ ದೊಡ್ಡಗಾಗಲು ತೆನೆಯಾಯ್ತು
ತೆನೆಯೇ ದೇವರ ಮನೆಯಾಯ್ತು"
"ಬೆಳೆಯೇ ಭೂಮಿಯು ಬಂಗಾರ
ಬೆಳೆಯೇ ದೇವರ ಅವತಾರ"
"ಬಾಯಿಗಿಲ್ಲವೆಂದು ತುತ್ತು
ನಿನ್ನ ಕಣ್ಣಮುಂದೆ ಅತ್ತು
ಹೋದರೆನಿತೋ ಮಂದಿ ಸತ್ತು
ನೀನು ಸತ್ತರೇನು ಕುತ್ತು"
"ಜೋ ಜೋ ಜೋ ಜೋ ನನ ತಂಗಿ
ಜೋಗುಳ ಹಾಡುವೆ ರಸರಂಗಿ"
"ಕಟ್ಟಿದರೆ ಅನುಭವದ ತಳಹದಿಯ ಮೇಲೆ
ಕೊನೆಯವರೆಗೂ ನಿಲುವುದು ಕವಿಯ ಲೀಲೆ
ಇಟ್ಟಂಗಿಯಾಗಲಿ ಮಾತು ಕೃತಿಯೊಂದು
ಸರಿಯಾದ ಜಾಗದೊಳಗಿರಲಿ ಒಂದೊಂದು"
"ಲಾಭದಾಯಕವಲ್ಲ ಕವಿಯ ಬೇಸಾಯ
ಕಾಡಿನಲ್ಲಿ ಕೃಷಿ ಮಾಡಿದಂತೆ ಮಾರಾಯ"
"ಎಲೆಕವಿಯೇ ನಿನಗೇಕೆ ನರನ ಬಹುಮಾನ
ಕಾಲರಾಯನು ಕೇಳುವನು ನಿನ್ನ ಗಾನ
ಮೊದಲು ಸಿಗಬೇಕೆಂದು ಕೈಮುಗಿಯಬೇಡ
ತಲೆಬಾಗಿಸಿದರೆ ಕವಿ, ಕವಿಯುವುದು ಮೋಡ"
"ಕಾವ್ಯವೆಂಬುವುದು ಜಾಣತನವಲ್ಲ ಹುಚ್ಚು
ತೀವ್ರವಾದರೆ ಹುಚ್ಚು ಕವಿಯ ಬೆಲೆ ಹೆಚ್ಚು"
"ತರಕಾರಿ ಎಂಬುವುದು ಅಲ್ಲ ಬರಿ ಬದನೆ
ಕಾವ್ಯವೆಂಬುವುದು ಅಲ್ಲ ಬರಿ ಶಬ್ಧ ರಚನೆ
ಪ್ರತಿಯೊಂದು ಶಬ್ಧದೊಳಗಿರಬೇಕು ಪಾಕ
ಈ ಪಾಕ ಎನ್ನುವುದು ಅನುಭವದ ಲೋಕ"
Thursday, July 9, 2009
Friday, July 3, 2009
ಬೆಂಗಳೂರು ನನ್ನ ಪ್ರೀತಿಸಿದೆ, ಆದರೆ ಅಮ್ಮನಷ್ಟು ಅಲ್ಲ!
ಜುಲೈ 2, 2006!
ಭಾನುವಾರ.
ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.
ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!
ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.
ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.
ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..
ಭಾನುವಾರ.
ಮೊತ್ತಮೊದಲ ಬಾರಿಗೆ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟ ದಿನ. ನಮ್ಮೂರಿಂದ ಶಿರಾಡ್ ಘಾಟ್ ದಾಟಿದ್ದು ಅದೇ ಮೊದಲು. ತುಮಕೂರು ರಸ್ತೆ ಸಮೀಪಿಸುತ್ತಿದ್ದಂತೆ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಣ್ಣಿಗೆ ಬೀಳುತ್ತಿರುವಾಗ ಇದೇನಾ ಬೆಂಗಳೂರು? ಅಂತ ಭಯ, ಗೊಂದಲ. ಯಾಕಪ್ಪಾ ಬಂದೇ ಈ ಊರಿಗೆ? ಅಂತ ಕಣ್ತುಂಬ ನೀರು ತುಂಬಿಕೊಂಡಿದ್ದೆ. ಊರಿಂದ ಕರೆದುಕೊಂಡು ಬಂದಿದ್ದ ಅಣ್ಣ, ಮೊದಲು ಹಂಗೆ ಅನಿಸೋದು..ಆಮೇಲೆ ಎಲ್ಲಾ ಸರಿಹೋಗುತ್ತೆ ಅಂತ ಸಮಾಧಾನಿಸ್ತಾ ಇದ್ರೆ..ಬಸ್ಸಲ್ಲಿ ಕುಳಿತು ಹೊರ ಜಗತ್ತನ್ನು ನೋಡುತ್ತಿದ್ದ ನನ್ನ ಕಣ್ಣುಗಳಲ್ಲಿ ಬರೇ ನೀರಷ್ಟೆ ತುಂಬಿಕೊಂಡಿತ್ತು. ಒಂದು ಪುಟ್ಟ ಸೂಟುಕೇಸ್ ಜೊತೆಗೆ ಒಂದು ಪುಟ್ಟ ಬ್ಯಾಗ್ ಜೊತೆಗೆ ಮೆಜೆಸ್ಟಿಕ್ ನ ಜನಜಂಗುಳಿ ನಡುವೆ ಬಂದು ನಿಂತಾಗ ಜುಲೈ 2, ಮುಂಜಾವು. ಪರವೂರಿಂದ ರೈಲಿನಲ್ಲಿ, ಬಸ್ಸಿನಲ್ಲಿ ಬಂದು ಇಳಿದ ಕೂಲಿಕಾರ್ಮಿಕರು. ಪುಟ್ ಪಾತ್ ನಲ್ಲೇ ಬದುಕು ಕಾಣೋರು, ಬಸ್ ಸ್ಟಾಂಡಿನ ಕಲ್ಲುಬೆಂಚಿನ ಮೇಲೆ ಮಲಗಿದೋರು, ಸಿಕ್ಕಲೆಲ್ಲಾ ಮೂತ್ರ ಮೂಡೋರು, ಜೊತೆಗೆ ಮೆಜೆಸ್ಟಿಕ್ ನಲ್ಲಿ ಮೂಗಿಗೆ ಬಡಿಯೋ ಕೆಟ್ಟ ವಾಸನೆ, ಹುಚ್ಚರು, ಅರೆಹುಚ್ಚರು, ಹಸಿದವರು, ಹೊಟ್ಟೆ ತುಂಬಿದೋರು, ಬದುಕಿದವರು, ಬದುಕಿಗಾಗಿ ಹೋರಾಡುವವರು,.....ಹೀಗೇ 'ಮೆಜೆಸ್ಟಿಕ್' ಬದುಕಿನ ನಾನಾ ಸತ್ಯಗಳಿಗೆ ತನ್ನನ್ನು ತೆರೆದುಕೊಳ್ಳುತ್ತಾ ನಿಂತಿದ್ದನ್ನು ನೋಡುತ್ತಾ ಮೂಖಳಾಗಿದ್ದೆ.
ಅಲ್ಲಿಂದ ಜಯನಗರ ಬಸ್ ಹತ್ತಿದ್ರೆ..ಜಯನಗರ ಅಂದ್ರೆ ಬಸ್ ಕಂಡಕ್ಟರ್ ಗೆ ಅರ್ಥವಾಗೊಲ್ಲ. ಜಯನಗರದಲ್ಲಿ ತುಂಬಾ ಬ್ಲಾಕ್ ಗಳಿವೆ ...ಅಂದಾಗ ಮತ್ತೊಂದು ಸಲ ಹೋಗಬೇಕಾದ ಸ್ಥಳ ಕನ್ ಫಾರ್ಮ್ ಮಾಡಿಕೋಬೇಕಾಯಿತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಬಳಿ ಬಸ್ಸಿಂದಿಳಿದು ಬಸ್ ಸ್ಟಾಂಡ್ ಎಲ್ಲಿ ಅಂತ ಹುಡುಕಾಕೆ ನಾಲ್ಕು ರೌಂಡು ಹಾಕಿಸಿದ ಅಟೋದವನಿಗೆ 30 ರೂ. ಕೊಟ್ಟು ಇಳಿದಾಗ ಬಸ್ ಸ್ಟಾಂಡ್ ಅಲ್ಲೇ ಹತ್ತಿರದಲ್ಲಿತ್ತು!!
ಬೆಂಗಳೂರು..! ಬಂದೇ ಬಿಟ್ಟೆ..ಎಕ್ಸಾಮ್ ಹಾಲ್ ನಿಂದ ನೇರವಾಗಿ ಬೆಂಗಳೂರಿಗೆ ಬಿದ್ದುಬಿಟ್ಟೆ. ಕೈಯಲ್ಲಿ ಮೊಬೈಲ್ ಇಲ್ಲ..ಸಿಕ್ಕ ಕಾಯಿನ್ ಬೂತ್ ಗಳಿಗೆ ಕಾಯಿನ್ ಹಾಕಿ ಅತ್ತು ಅತ್ತು ದಿನಾ ಮುಖ ಊದಿಸಿಕೊಳ್ಳೋದೇ ಆಗಿತ್ತು. ಯಾಕಾದ್ರೂ ಬೆಂಗಳೂರಿಗೆ ಬಂದೆ ವಾಪಾಸ್ ಹೋಗೋಣ ಅಂದ್ರೆ ಆ ಧಮ್ ನಂಗಿಲ್ಲ, ಭಯ. ಹೊರಗಡೆ ಜನರ ಮುಖ ನೋಡೋಕೆ ಭಯವಾಗ್ತಿತ್ತು. ಹಾಸ್ಟೇಲ್ ನಲ್ಲಿದ್ರೂ ಗುಬ್ಬಚ್ಚಿ ಥರ ಇದ್ದ ನಂಗೆ ಈ ಬೆಂಗಳೂರು ಮೈಚಳಿ ತರಿಸಿಬಿಟ್ಟಿತ್ತು. ಬಂದ ಮೊದಲ ದಿನ ಬನಶಂಕರಿಗೆ ಅಣ್ಣ ಜೊತೆ ಹೋಗಿದ್ದೆ. ನಾನು ರಸ್ತೆ ದಾಟಬೇಕಾದ್ರೆ ವಾಹನಗಳೆಲ್ಲಾ ಹೋಗಿ ರಸ್ತೆ ಖಾಲಿಯಾಗಲೀ..ಅಂತ ಕಾಯ್ತಾ ನಿಂತಿದ್ದೆ. ಆಮೇಲೇ ಆರಾಮವಾಗಿ ದಾಟೋಣ ಅಂತ. ಆದ್ರೆ ಈ ಬೆಂಗಳೂರಲ್ಲಿ ಖಾಲಿರಸ್ತೆಗಳನ್ನು ಕಾಣೋದೆಲ್ಲಿ? ಅಣ್ಣ ಕೈ ಹಿಡಿದು ಬೈಕೊಂಡು ಎಳೆದುಕೊಂಡು ಹೋಗುವಾಗ ಭಯದಿಂದ ಅತ್ತೆಬಿಟ್ಟಿದ್ದೆ. ಹೋದಲೆಲ್ಲಾ ಸಿಗ್ನಲ್ ಗಳು..ಜನರ ಬೊಬ್ಬೆ, ಗದ್ದಲ...ಅಸಹ್ಯವಾಗಿಬಿಟ್ಟಿತ್ತು. ಸೂರ್ಯ ಮುಳುಗೋ ಹೊತ್ತಿಗೆ ಮನೆ ಸೇರದಿದ್ರೆ ಹೆದರಿಕೆ. ಸುಮಾರು ಆರು ತಿಂಗಳು ಬೇಕಾಯಿತು...ಈ ಬೆಂಗಳೂರಿಗೆ ಹೊಂದಿಕೊಳ್ಲೋಕೆ. ಮೂರ್ನಾಲ್ಕು ತಿಂಗಳಲ್ಲಿ ಹೊಟ್ಟೆಪಾಡಿಗೊಂಡು ಕೆಲ್ಸ ಸಿಕ್ಕು, ಮೂರು ವರ್ಷದಲ್ಲಿ ಒಂದು ಆಫೀಸು ಬದಲಾಯಿಸಿದ್ದೀನಿ. ಮೂರು ವರ್ಷದಲ್ಲಿ ಎಂಥೆಂಥವರನ್ನೂ ಕಂಡೆ. ನಮ್ಮಲ್ಲಿರುವ 'ಒಳ್ಳೆತನ, ಮುಗ್ದತೆ' ಬಳಸಿಕೊಂಡು ಬದುಕುವವರು, ಮೋಸಗಾರರು, ವಂಚಕರು, ಕೊಲೆಗಡುಕರು, ಒಳ್ಳೆಯವರು/ ಕೆಟ್ಟವರು ಎಲ್ಲರನ್ನೂ ನೋಡಿದೆ. ಬಹುಶಃ ನಮ್ಮೂರ ಹಸಿರ ಮಧ್ಯೆ ಇರುವ ನಮ್ಮ ಪುಟ್ಟ ಮನೆಯಲ್ಲಿ ಕುಳಿತಿರುತ್ತಿದ್ರೆ ಬಹುಶಃ ಇದನ್ನೆಲ್ಲಾ ನೋಡುತ್ತಿರಲಿಲ್ಲ ಎಂದನಿಸುತ್ತೆ.
ಹೌದು, ನಿನ್ನೆ ಇದ್ದಕಿದ್ದಂತೆ ನೆನಪಾಯಿತು. ಇಲ್ಲಿ ಬಂದು ಮೂರು ವರ್ಷವಾಯಿತು. ನಿಜವಾಗ್ಲೂ ಅಚ್ಚರಿಪಟ್ಟೆ. ಅಷ್ಟು ಪುಕ್ಕಲುತನ ವಿದ್ದೋ ಹುಡುಗಿ ನಾನೇನಾ? ಅನಿಸ್ತು. ಹೌದು ಬದಲಾಗಿದ್ದೇನೆ..ಒಂಚೂರು ಹೆದರಿಕೆ, ಭಯ ಎಲ್ಲನೂ ಹೋಗಿದೆ. ನಾಲ್ಕು ಜನರೆದುರು ಮಾತಾನಾಡೋ ಧೈರ್ಯ ಬಂದಿದೆ. ಅಡುಗೆ ಮನೆ ಹೊಕ್ಕದವಳು ಇಲ್ಲಿಯ ಪುಟ್ಟ ಅಡುಗೆ ಮನೇಲಿ ನಂಗೆ ಬೇಕಾದಷ್ಟಾದರೂ ಮಾಡಿಕೊಂಡು ತಿನ್ನೋಕೆ ಕಲಿತೆ. 'ಬದುಕುವವರ' ನಡುವೆ ಹೇಗೆ 'ಬದುಕಬೇಕು' ಅನ್ನೋದನ್ನು ಕಲಿತೆ. ಬೆಂಗಳೂರನ್ನು ಪ್ರೀತಿಸಿದೆ..ಬೆಂಗಳೂರೂ ನನ್ನನ್ನು ಪ್ರೀತಿಸಿದೆ..ಆದರು ನನ್ನ ಅಮ್ಮನಷ್ಟು ಅಲ್ಲ! ದುಡಿಯೋಕೆ ಕಲಿತಿದ್ದೇನೆ..ಹೌದು, ಬೆಂಗಳೂರು ಎಲ್ರಿಗೂ ಅನ್ನ ನೀಡುತ್ತೆ. ಬದುಕೋಕೆ ಕಲಿತವನು ಮಾತ್ರ ಇಲ್ಲಿ ಸಲ್ಲುತ್ತಾನೆ ಅನ್ನೋದನ್ನೂ ತಿಳ್ಕೊಂಡೆ.
ಹೌದು...ನಿಮ್ ಜೊತೆ ಹೇಳಿಕೋಬೇಕಾನಿಸ್ತು...ಹೇಳಿಬಿಟ್ಟೆ. ಹಾಗೇ ನೋಡಿದ್ರೆ ಹೇಳಕ್ಕೆ ತುಂಬಾ ಇದೆ..ಇನ್ನೊಂದ್ಸಲ ಹೇಳ್ತೀನಿ..ಬೋರ್ ಆದ್ರೆ ಸಾರಿ..
Friday, June 12, 2009
ಪ್ರೇಮಿಯಾಗಿರುತ್ತಿದ್ದರೆ, ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!

'ಅತ್ಯಂತ ಪ್ರೀತಿಯ' ಎಂಬ ಪದದಿಂದ ಶುರುವಾಗುವ
ವಾರದ ಪತ್ರಗಳ ವಂಚಕ ಭರವಸೆಗಳು ನನಗಲ್ಲ.
ನನಗಲ್ಲ, ಟೊಳ್ಳು ಸಪ್ತಪದಿಯ ವಿಧಿ, ಹಾಸಿಗೆಯ ಮೇಲಿನ ಒಂಟಿತನ..
ಅದರ ಮೇಲೆ ಮಲಗಿ, ಒಬ್ಬ ಸಂಗಾತಿಯ ಕನಸು ಕಾಣುತ್ತಾನೆ.
ಬಹುಶಃ ಹೆಣ್ನೇ, ತನ್ನವಳಿಗಿಂತ ಹೆಚ್ಚು ಕಾಮಿಸುವವಳನ್ನು....
*******
ಕೊಡು ಅವನಿಗೂ ಉಡುಗೊರೆ
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!
ಚಿತ್ರಕೃಪೆ: ಅಂತರ್ಜಾಲ
(ವಿ.ಸೂ: ಕಮಲದಾಸ್ ಬಗ್ಗೆ ಇತ್ತೀಚೆಗೆ ಕನ್ನಡಪ್ರಭದ ಸಾಪ್ತಾಹಿಕ ದಲ್ಲಿ ಟಿ.ಜೆ. ಎಸ್. ಜಾರ್ಜ್ ಹಾಗೂ ಎಸ್. ಕುಮಾರ್ ಅವರು ಬರೆದ ಲೇಖನದಲ್ಲಿ ಕಮಲದಾಸ್ ಅವರ ಕವಿತೆಗಳ ಸಾಲುಗಳನ್ನು ಬರೆದಿದ್ದರು. ಕಮಲದಾಸ್ ನನ್ನ ಇಷ್ಟದ ಬರಹಗಾರ್ತಿಗಳಲ್ಲಿ ಒಬ್ಬರಾಗಿದ್ದರಿಂದ ಅದನ್ನು ಹೆಕ್ಕಿ ಬ್ಲಾಗ್ ನಲ್ಲಿ ಹಾಕೊಂಡಿದ್ದಿನಿ. ಸಂಪರ್ಕಿಸಿ:http://www.kannadaprabha.com/pdf/epaper.asp?pdfdate=6/7/2009
ಚಿತ್ರಕೃಪೆ: ಅಂತರ್ಜಾಲ
Wednesday, June 3, 2009
ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!

**ಮುಂದೆ ಸಾಗಿದಾಗ ಹಣ್ಣು ಮಾರುವವ. ಬಿರುಬಿಸಲನ್ನೂ ಲೆಕ್ಕಿಸದೆ ತರಕಾರಿ, ಹಣ್ಣುಗಳನ್ನು ತನ್ನ ಗಾಡಿ ಮೇಲೆ ಹಾಕೊಂಡು ದೂಡುತ್ತಾ ಸಾಗುತ್ತಿದ್ದ. ಚೌಕಾಸಿಯವರ ಚೌಕಾಸಿಗೆ ಮಣಿದು, ತಕೋಳ್ಳಿ ಅನ್ನುತ್ತಿದ್ದ ಆತನದೂ ಹೊಟ್ಟೆಪಾಡು.
**ಈ ಬೆಂಗಳೂರಿನಲ್ಲಿ ಸಿಗ್ನಲ್ ನಲ್ಲಿ ಒಂದಷ್ಟು ಹೊತ್ತು ನಿಮ್ಮ ವಾಹನಗಳು ನಿಂತಿರಲಿ..ನಿಮ್ಮನ್ನು ಹಿಂದೆ-ಮುಂದಿನಿಂದ ಪೀಡಿಸುವ ಹಿಜಡಾಗಳು ಕಣ್ಣಿಗೆ ಬೀಳುತ್ತಾರೆ. ಚಿಲ್ಲರೆ ನೀಡದಿದ್ರೆ ನಿಮ್ಮನ್ನು ಅವರು ಸುಮ್ಮನೆ ಬಿಡಲಾರರು..ನೀವು ಅಂಜಿ ನೀಡೇ ನೀಡುತ್ತೀರ. ಬೆಳಿಗ್ಗೆಯಿಂದ ಸಂಜೆತನಕ ಬದುಕು ಹೊರುವ ಕೆಲಸ..ನಿತ್ಯಪಾಡಿದು. ನಾನು ಬಸ್ಸಲ್ಲಿ ಬರುವಾಗ ಯಾವಾಗಲೂ ಕಣ್ಣಿಗೆ ಬೀಳೋ ಬದುಕಿನ ಸತ್ಯಗಳು!
**ಅಲ್ಲಿ ಬೀದಿ ಬದಿಯಲ್ಲಿ ಸುಲಭ ಶೌಚಾಲಯ, ಪಕ್ಕದಲ್ಲೇ ದೇವಸ್ಥಾನ. ಪುಟ್ಟ ಕಂಚಿನ ಪ್ರತಿಮೆ. ನಿತ್ಯ ನಡೆಯುವ ಪೂಜೆ-ಪುರಸ್ಕಾರಗಳು, ಜಾಗಟೆಯ ಸದ್ದು, ಮಂತ್ರಘೋಷ. ಟೂ ವೀಲರ್, ಕಾರಿನಲ್ಲಿ ಬರೋ ಮಂದಿ ಅಲ್ಲೇ ತಮ್ಮ ವಾಹನಗಳು ನಿಲ್ಲಿಸುತ್ತಾರೆ. ಒಂದಿಷ್ಟು ನೋಟುಗಳನ್ನು ಹುಂಡಿಗೆ ಹಾಕಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಬಿಎಂಟಿಸಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಹೊರಗೆ ಇಣುಕಿದ್ದ ನನ್ನ ಕಣ್ಣುಗಳಿಗೆ ಇದು ನಿತ್ಯದ ಸಂಗತಿ.
**ಆ ಪ್ರತಿಷ್ಠಿತ ಸ್ಕೂಲ್ ಎದುರಿನ ಬಸ್ ನಿಲ್ದಾಣದಲ್ಲಿ ನನ್ನ ಬಸ್ಸಿಗಾಗಿ ಕಾಯುತ್ತಿದ್ದೆ. ತಮ್ಮ ಮಕ್ಕಳನ್ನು ಕಾರಿನಲ್ಲಿ ತಂದು ಬಿಡುವ ಹೆತ್ತವರು ಮಗುವಿನ ಕೆನ್ನೆಗೆ ಮುತ್ತನಿಟ್ಟು, ಕ್ಲಾಸ್ ರೂಂಗೆ ಕಳಿಸುತ್ತಿದ್ದರು. ನೆನಪಾಯಿತು..ನನ್ನ ಯಜಮಾನ್ರಿಗೆ ಸಂಬಳ ಆಗಿಲ್ಲವೆಂದು..ಮಕ್ಕಳಿಗೆ ಪುಸ್ತಕ ತೆಗೆದುಕೊಟ್ಟಿಲ್ಲ. ಹಾಗಾಗಿ ಮಕ್ಕಳನ್ನು ಮುಂದಿನ ವಾರ ಶಾಲೆಗೆ ಕಳಿಸಬೇಕು ಎಂದಿರುವ ಆ ಅಮ್ಮ!
**ಹೊಟೇಲ್ ಎದುರುಗಡೆ ಇರುವ ಆ ಮೆಟ್ಟಿಲ ಮೇಲೆ ನಿಂತು ಆ ಕಪ್ಪು ಕನ್ನಡದ ಹುಡುಗಿ ಸಿಗರೇಟು ಸೇದುತ್ತಿದ್ದಳು, ಗ್ಲಾಸು ತೊಳೆಯುವ ಹುಡುಗ ಪಿಳಿಪಿಳಿಂತ ಆಕೆಯನ್ನೇ ದಿಟ್ಟಿಸುತ್ತಿದ್ದ..ಅವಳ ಕಾರು ಮರೆಯಾಗುವವರೆಗೂ!
**ರಾಶಿ ಹಾಕಿದ ಗೋಣಿಚೀಲಗಳ ಪಕ್ಕ ಕುಳಿತ ಆ ಪುಟ್ಟ ಕಂದಮ್ಮ ಸಿಕ್ಕಿದ್ದನ್ನು ಮೆಲ್ಲುತ್ತಾ, ಎದುರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋ ಮಕ್ಕಳನ್ನು ಆಸೆ ಕಂಗಳಿಂದ ನೋಡುತ್ತಾ!
**ನೆನಪಾಯಿತು..ಪ್ರೀತಿಯ ಗೆಳೆಯ ಹೇಳಿದ ಕಥೆ ...'ಅವಳು ಮದುವೆಯಾಗಿದ್ದಳಂತೆ ಹುಡುಗನ ಸಂಬಳವನ್ನು ಪ್ರೀತಿಸಿ! 'ಸಂಬಳ ಪ್ರೀತಿಸಿದವಳಿಗೆ ' ಬದುಕಿನ ಒಲವು ಅರ್ಥವಾಗಲೇ ಇಲ್ಲವಂತೆ..ಆತನಿನ್ನೂ ಕೊರಗುತ್ತಿದ್ದನಂತೆ ಖಿನ್ನತೆಯಿಂದ....ಸಂಬಳ ಪ್ರೀತಿಗೆ ಬಲಿಯಾಗಿ'!
ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಿದ್ದೆ. ಮೆಜೆಸ್ಟಿಕ್ ಜನಜಂಗುಳಿ, ಕತ್ತಲಾಗುವಾಗ ಕಿತ್ತು ತಿನ್ನೋ ಕಣ್ಣುಗಳು, ಬದುಕೋ ದಾರಿಗಳು, ನಾನು ಬನಶಂಕರಿಯಲ್ಲಿ ರಸ್ತೆ ದಾಟಕ್ಕೆ ಪರದಾಡಿದ್ದು, ಪಾರ್ಕಲ್ಲಿ ಕುಳಿತು ಒಬ್ಬಳೇ ಅತ್ತಿದ್ದು, ಅಮ್ಮನ ನೆನಪಾಗಿ ದಿಂಬು ಒದ್ದೆಯಾಗಿಸಿದ್ದು, ಮನೆಗೆ ಹೋಗ್ತೀನಂತ ಅಣ್ಣ ಜೊತೆ ಜಗಳ ಆಡಿದ್ದು, ಅತ್ತಾಗ ಅವನು ಐಸ್ ಕ್ರೀಂ ಕೊಡಿಸಿದ್ದು, ಬೆಂಗಳೂರಿನ ಇಂಚಿಂಚನ್ನು ಪರಿಚಯ ಮಾಡಿಸಿದ್ದು, ಮೊದಲ ಬಾರಿಗೆ ಸಾನಿಯಾ ಮಿರ್ಜಾನ ಪ್ರೆಸ್ ಮೀಟ್ ಗೆ ಹೋಗಿ ಅರೆಬರೆ ಇಂಗ್ಲೀಷ್ ಬಾರದ ನಾನು ಅವಳ ಇಂಗ್ಲೀಷ್ ಅರ್ಥವಾಗದೆ..ಎಡಿಟರ್ ಜೊತೆ ಬೈಸಿಕೊಂಡಿದ್ದು....ಎಲ್ಲವೂ ನೆನಪಿನ ಪರದೆ ಮೇಲೆ ಸಾಗುತ್ತಲೇ ಇವೆ. ಬದುಕು ಸಾಗುತ್ತಲೇ ಇದೆ..ಮುಂದಕ್ಕೆ. ಬದುಕಿನ ಸತ್ಯ-ಮಿಥ್ಯಗಳನ್ನು ಕಣ್ಣಾರೆ ಕಾಣುತ್ತಾ, ಕೆಲವೊಮ್ಮೆ ಕಂಗಳು ಒದ್ದೆಯಾಗಿಸುತ್ತಾ, ಕೆಲವೊಮ್ಮೆ ಖುಷಿ ಖುಷಿಯಾಗುತ್ತಾ....!!
ಫೋಟೋ: ಎನ್.ಕೆ. ಸುಪ್ರಭಾWednesday, May 27, 2009
'ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ?'!!
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ....
ಅಮೃತವರ್ಷಿಣಿ ಚಿತ್ರದ ಸುಂದರ ಗೀತೆ ಮನಸ್ಸನ್ನೇ ಉಯ್ಯಾಲೆಯಾಗಿಸಿತ್ತು. ಹಾಡು ಕೇಳ್ತಾ ಓದೋದು ನನ್ನ ಅಭ್ಯಾಸ..ನನ್ನ ಪುಟ್ಟ ಕೋಣೆಯೊಳಗೆ ಕುಳಿತರೆ ಪಕ್ಕದ ಮನೆಯವರ ಮಾತುಗಳು ಕಿವಿಗೆ ಬೀಳೋ ಸಾಧ್ಯತೆಗಳಿರುವುದರಿಂದ ಜೋರಾಗಿ ಹಾಡು ಹಾಕಿ ಓದ್ತಾ ಇದ್ದೆ. ಕಿಟಕಿ ಬಾಗಿಲು ತೆರದರೆ ಬೀಸೋ ಗಾಳಿ, ಚಲಿಸುವ ಮೋಡಗಳು, ನಿರಭ್ರ ಆಕಾಶ...ಎಲ್ಲವೂ ಮನಸ್ಸಿಗೆ ಮುದ ನೀಡುತ್ತೆ.
ಹಾಗೇ ಓದಲು ಕುಳಿತಿದ್ದರೆ ಪಕ್ಕದ್ಮನೆಯ ಇಬ್ಬರು ಪುಟ್ಟ ಮಕ್ಕಳು ಬಂದು, "ಅಕ್ಕಾ, ನಿಂಗೆ ಓದೋಕೆ ತೊಂದ್ರೆ ಆಯ್ತಾ?' ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ?' , ನಮ್ಮ ಅಪ್ಪ-ಅಮ್ಮ ಜಗಳ ಆಡ್ತಾ ಇದ್ದಾರೆ..ನಿಮಗೆ ಕೇಳಿ ಡಿಸ್ಟರ್ಬ್ ಆಯ್ತಾ ಎಂದು ಕೇಳಿದಾಗ ನನಗೆ ಅಚ್ಚರಿ. ನಿಜವಾಗಲೂ ಹಾಡು ಜೋರಾಗಿ ಇಟ್ಟಿದ್ರಿಂದ ನಂಗೆ ಅವರ ಕಿತ್ತಾಟ ಕಿವಿಗೆ ಬೀಳಲಿಲ್ಲ. ಹಾಡು ಆಫ್ ಮಾಡಿದಾಗ...ಹೆಂಡತಿಯೇ ಗಂಡನಿಗೆ ಹೊಡೆಯಿತೋ/ ಅಥವಾ ಗಂಡನೇ ಹೆಂಡತಿಗೆ ಹೊಡೆಯಿತೋ..ಗೊತ್ತಿಲ್ಲ. ಜೋರು ಜಗಳ..ಬೊಬ್ಬೆ ಕೇಳಿಸ್ತಾ ಇತ್ತು. ತುಂಬಾ ಸರಳವಾಗಿರೋ/ ಹಿತ-ಮಿತ ಮಾತಾಡೋ ಪುಟ್ಟ ಕುಟುಂಬ ಅದು. ಮೂವರು ಹೆಣ್ಣು ಮಕ್ಕಳೇ..ದೊಡ್ಡವಳು ಮೊದಲ ಪಿಯುಸಿ. ಇನ್ನೊಬ್ಳು ಆರನೇ ಕ್ಲಾಸು..ಸಣ್ಣವಳು ಯುಕೆಜಿ.
ಯಾಕೋ ಓದೋದು ಬೇಡ ಅನಿಸ್ತು, ಹಾಡು ನಿಲ್ಲಿಸಿದೆ. ಸುಮ್ಮನಾಗಿ ನನ್ನಷ್ಟಕ್ಕೆ ಯೋಚನಾ ಲಹರಿಗಳು ತಲೆಯನ್ನು ಕೊರೆದವು..ಈ ಬದುಕು ಹೀಗ್ಯಾಕೆ?
ಆ ಪುಟ್ಟ ಮಗು..ಇನ್ನೂ ಯುಕೆಜಿ..ಬಾಯಿ ಅಗಲಿಸಿ ನಗೋಕೆ ಬರುತ್ತೆ..ನಿತ್ಯ ಬಂದು ಬೆಳ್ಳಂಬೆಳಿಗ್ಗೆನೇ ಬಂದು ಊಟ ಆಯ್ತಾ? ಎಂದು ಕೇಳಿದಾಗ ಎತ್ತಿ ಮುದ್ದು ಮಾಡಿಬಿಡ್ತೀನಿ..ಅದು ಮತ್ತು ಆರನೆಯ ಕ್ಲಾಸಿನ ಹುಡುಗಿ ಬಂದು ಅಕ್ಕಾ ನಿಂಗೆ ತೊಂದ್ರೆ ಆಯ್ತಾ? ಎಂದಾಗ ಕರುಳು ಚುರ್ರೆಂದಿತ್ತು. ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳು, ಕಣ್ಣಲ್ಲಿನ ಹೆದರಿಕೆ, ನಮ್ಮಪ್ಪ-ಅಮ್ಮನ ಜಗಳ ಹೊರಗಿನವರಿಗೆ ಗೊತ್ತಾಯ್ತು ಎಂದಾಗ ಉಂಟಾಗುವ ಮುಜುಗರ ಎಲ್ಲಾವೂ ಆ ಪುಟ್ಟ ಮಕ್ಕಳ ಕಂಗಳಲ್ಲಿ ಸ್ಪಷ್ಟವಾಗುತ್ತಿತ್ತು. ನಿಜವಾಗಲೂ ಆ ಮಕ್ಕಳ ಮುಖ ನೋಡದಾಗ ನನಗರಿವಿಲ್ಲದಂತೆ ಕಂಗಳು ಒದ್ದೆಯಾಗಿದ್ದವು.
ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತಿಸ್ತೀವಿ. ಭವಿಷ್ಯದ ನಗುವಾಗಬೇಕಿದ್ದ ಮಕ್ಕಳ ಬದುಕಿನಲ್ಲಿ ನಗೆಬೆಳದಿಂಗಳು ಕಂಡೀತೇ? ಯಾಕೋ ಮನಸ್ಸಿಗೆ ತೀರ ನೋವಾಯಿತು.
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ....
ಅಮೃತವರ್ಷಿಣಿ ಚಿತ್ರದ ಸುಂದರ ಗೀತೆ ಮನಸ್ಸನ್ನೇ ಉಯ್ಯಾಲೆಯಾಗಿಸಿತ್ತು. ಹಾಡು ಕೇಳ್ತಾ ಓದೋದು ನನ್ನ ಅಭ್ಯಾಸ..ನನ್ನ ಪುಟ್ಟ ಕೋಣೆಯೊಳಗೆ ಕುಳಿತರೆ ಪಕ್ಕದ ಮನೆಯವರ ಮಾತುಗಳು ಕಿವಿಗೆ ಬೀಳೋ ಸಾಧ್ಯತೆಗಳಿರುವುದರಿಂದ ಜೋರಾಗಿ ಹಾಡು ಹಾಕಿ ಓದ್ತಾ ಇದ್ದೆ. ಕಿಟಕಿ ಬಾಗಿಲು ತೆರದರೆ ಬೀಸೋ ಗಾಳಿ, ಚಲಿಸುವ ಮೋಡಗಳು, ನಿರಭ್ರ ಆಕಾಶ...ಎಲ್ಲವೂ ಮನಸ್ಸಿಗೆ ಮುದ ನೀಡುತ್ತೆ.
ಹಾಗೇ ಓದಲು ಕುಳಿತಿದ್ದರೆ ಪಕ್ಕದ್ಮನೆಯ ಇಬ್ಬರು ಪುಟ್ಟ ಮಕ್ಕಳು ಬಂದು, "ಅಕ್ಕಾ, ನಿಂಗೆ ಓದೋಕೆ ತೊಂದ್ರೆ ಆಯ್ತಾ?' ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ?' , ನಮ್ಮ ಅಪ್ಪ-ಅಮ್ಮ ಜಗಳ ಆಡ್ತಾ ಇದ್ದಾರೆ..ನಿಮಗೆ ಕೇಳಿ ಡಿಸ್ಟರ್ಬ್ ಆಯ್ತಾ ಎಂದು ಕೇಳಿದಾಗ ನನಗೆ ಅಚ್ಚರಿ. ನಿಜವಾಗಲೂ ಹಾಡು ಜೋರಾಗಿ ಇಟ್ಟಿದ್ರಿಂದ ನಂಗೆ ಅವರ ಕಿತ್ತಾಟ ಕಿವಿಗೆ ಬೀಳಲಿಲ್ಲ. ಹಾಡು ಆಫ್ ಮಾಡಿದಾಗ...ಹೆಂಡತಿಯೇ ಗಂಡನಿಗೆ ಹೊಡೆಯಿತೋ/ ಅಥವಾ ಗಂಡನೇ ಹೆಂಡತಿಗೆ ಹೊಡೆಯಿತೋ..ಗೊತ್ತಿಲ್ಲ. ಜೋರು ಜಗಳ..ಬೊಬ್ಬೆ ಕೇಳಿಸ್ತಾ ಇತ್ತು. ತುಂಬಾ ಸರಳವಾಗಿರೋ/ ಹಿತ-ಮಿತ ಮಾತಾಡೋ ಪುಟ್ಟ ಕುಟುಂಬ ಅದು. ಮೂವರು ಹೆಣ್ಣು ಮಕ್ಕಳೇ..ದೊಡ್ಡವಳು ಮೊದಲ ಪಿಯುಸಿ. ಇನ್ನೊಬ್ಳು ಆರನೇ ಕ್ಲಾಸು..ಸಣ್ಣವಳು ಯುಕೆಜಿ.
ಯಾಕೋ ಓದೋದು ಬೇಡ ಅನಿಸ್ತು, ಹಾಡು ನಿಲ್ಲಿಸಿದೆ. ಸುಮ್ಮನಾಗಿ ನನ್ನಷ್ಟಕ್ಕೆ ಯೋಚನಾ ಲಹರಿಗಳು ತಲೆಯನ್ನು ಕೊರೆದವು..ಈ ಬದುಕು ಹೀಗ್ಯಾಕೆ?
ಆ ಪುಟ್ಟ ಮಗು..ಇನ್ನೂ ಯುಕೆಜಿ..ಬಾಯಿ ಅಗಲಿಸಿ ನಗೋಕೆ ಬರುತ್ತೆ..ನಿತ್ಯ ಬಂದು ಬೆಳ್ಳಂಬೆಳಿಗ್ಗೆನೇ ಬಂದು ಊಟ ಆಯ್ತಾ? ಎಂದು ಕೇಳಿದಾಗ ಎತ್ತಿ ಮುದ್ದು ಮಾಡಿಬಿಡ್ತೀನಿ..ಅದು ಮತ್ತು ಆರನೆಯ ಕ್ಲಾಸಿನ ಹುಡುಗಿ ಬಂದು ಅಕ್ಕಾ ನಿಂಗೆ ತೊಂದ್ರೆ ಆಯ್ತಾ? ಎಂದಾಗ ಕರುಳು ಚುರ್ರೆಂದಿತ್ತು. ದಿಟ್ಟಿಸಿ ನೋಡುತ್ತಿದ್ದ ಕಣ್ಣುಗಳು, ಕಣ್ಣಲ್ಲಿನ ಹೆದರಿಕೆ, ನಮ್ಮಪ್ಪ-ಅಮ್ಮನ ಜಗಳ ಹೊರಗಿನವರಿಗೆ ಗೊತ್ತಾಯ್ತು ಎಂದಾಗ ಉಂಟಾಗುವ ಮುಜುಗರ ಎಲ್ಲಾವೂ ಆ ಪುಟ್ಟ ಮಕ್ಕಳ ಕಂಗಳಲ್ಲಿ ಸ್ಪಷ್ಟವಾಗುತ್ತಿತ್ತು. ನಿಜವಾಗಲೂ ಆ ಮಕ್ಕಳ ಮುಖ ನೋಡದಾಗ ನನಗರಿವಿಲ್ಲದಂತೆ ಕಂಗಳು ಒದ್ದೆಯಾಗಿದ್ದವು.
ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತಿಸ್ತೀವಿ. ಭವಿಷ್ಯದ ನಗುವಾಗಬೇಕಿದ್ದ ಮಕ್ಕಳ ಬದುಕಿನಲ್ಲಿ ನಗೆಬೆಳದಿಂಗಳು ಕಂಡೀತೇ? ಯಾಕೋ ಮನಸ್ಸಿಗೆ ತೀರ ನೋವಾಯಿತು.
Friday, May 15, 2009
ಗೆಳತಿ ಮತ್ತೆ ಸಿಕ್ಕಾಗ ....
ಆಫೀಸ್ ನಲ್ಲಿ ಬಂದು ಕುಳಿತಾಗ ಚಡಪಡಿಕೆ, ಅಳು ಉಕ್ಕಿ ಬರುತ್ತಿತ್ತು. ನನ್ನ ಸಿಸ್ಟಮ್ ಎದುರು ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೆ...ಅಮ್ಮನ ಮಡಿಲ ಬಿಟ್ಟು ಬಂದಂಗೆ! ಕಾರಣ ಬಸ್ಸಲ್ಲಿ ಬರುವಾಗ ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೆ!! ಅವಳು ಬೇರಾರೂ ಅಲ್ಲ, ನನ್ನ ಡೈರಿ..ಹೆಸರು ಜನನಿ! ಎರಡು ವರ್ಷಗಳ ಹಿಂದೆ ಹೊಸದಿಗಂತ ಪತ್ರಿಕೆಯಲ್ಲಿರುವಾಗ ನನ್ನ ಸೀನಿಯರ್ ಸರ್ ಒಬ್ರು ನಂಗೆ ತುಂಬಾ ಚೆಂದದ ಡೈರಿ ಪುಸ್ತಕ ತಂದುಕೊಟ್ಟಿದ್ದರು. ಅದಕ್ಕೆ ಜನನಿ ಎಂದು ಹೆಸರಿಟ್ಟು, ನಾನು ಓದಿರುವ, ನನಗೆ ಇಷ್ಟವಾದ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿಡುತ್ತಿದ್ದೆ. ಬಸವಣ್ಣನ ವಚನ, ಮಂಕುತಿಮ್ಮನ ಕಗ್ಗ, ರಸ್ಕಿನ್ ಬಾಂಡ್ ಕವನ ಸಾಲುಗಳು, ಬೇಂದ್ರೆ, ಕುವೆಂಪು, ನಿಸಾರ್, ಕೆ.ಎಸ್.ಎನ್, ಗೌರೀಶ ಕಾಯ್ಕಿಣಿ ಸಾಹಿತ್ಯ ವಿಮರ್ಶೆಯ ಸಾಲುಗಳು, ಲಂಕೇಶ್...ಹೀಗೆ ಕಳೆದ ಎರಡು ವರ್ಷದಲ್ಲಿ ಓದಿದ ಎಲ್ಲಾ ವಿಷಯಗಳನ್ನು ಬರೆದಿಡುತ್ತಿದ್ದೆ.
ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,
ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.
"ಏನಮ್ಮ ನೋಡ್ತಾ ಇದ್ದೀಯಾ?'
"ಅಂಕಲ್, ಆ ಪುಸ್ತಕ ಕೊಡ್ತೀರಾ?"
"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"
"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"
"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"
ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.
"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ
"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"
"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?
ನನ್ನದೊಂದು ಅಭ್ಯಾಸ ಎಂದ್ರೆ ಎಲ್ಲೇ ಹೋದ್ರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಳ್ಳುವುದು..ಕಣ್ಣಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಳ್ಳುವುದು. ಹಾಗೇ ನಿನ್ನೆ ಶುಕ್ರವಾರ ನನ್ನ ಬ್ಯಾಗ್ ನಲ್ಲಿ ಅದು ತುಂಬದಾಗ ಕೈಯಲ್ಲಿ ಹಿಡಿದುಕೊಂಡೇ ಬಸ್ಸು ಹತ್ತಿದ್ದೆ. ಅದೇನಾಯ್ತೋ ಇಳಿಯುವಾಗ ಮರೆತೇಬಿಟ್ಟೆ. ನನ್ನ ಒಂದು ಪುಟ್ಟ ವಸ್ತು ಕೂಡ ಕಳೆದುಹೋಗದ ಹಾಗೇ ಜೋಪಾನವಾಗಿಡೋಳು ನಾನು. ಛೇ! ಕಳೆದುಹೋಯ್ತಲ್ಲಾ..ಅಂದಾಗ ನಿಜವಾಗಲೂ ನನಗೆ ದುಃಖ ತಡೆಯಲಾಗಲಿಲ್ಲ. ನನ್ನ ಕಲೀಗ್ಸ್ 'ಚಿತ್ರಾ ಸಿಕ್ರೂ ಸಿಗಬಹುದು..ಚಿಂತೆ ಮಾಡಿ ಪ್ರಯೋಜನವಿಲ್ಲ' ಅಂತ ಸಮಾಧಾನ ಹೇಳುತ್ತಿದ್ರು. ಮನೆಯಲ್ಲಿ ನಿಂಗೆ ತಲೆಯಲ್ಲಿ ಏನು ತುಂಬಿಕೊಂಡಿತ್ತು ಅಂತ ಬೈದುಬಿಟ್ರು. ಗೆಳೆಯನೊಬ್ಬ ನೀನು ಚೆಂದದ ಹುಡುಗ್ರನ್ನು ನೋಡಿ ಮರೆತುಬಿಟ್ಟಿದ್ದಿ ಅಂತ ತಮಾಷೆ ಮಾಡಿದಾಗ ಕೆಟ್ಟ ಸಿಟ್ಟಿನಿಂದ ಅವನಿಗೆ ಎದುರುತ್ತರ ಕೊಟ್ಟಿದ್ದೆ. ಆಫೀಸ್ ನಲ್ಲಿ ಕುಳಿತವಳು ಎರಡೆರಡು ಸಲ ಬಸ್ ಸ್ಟಾಂಡಿಗೆ ಹೋಗಿ ಕಾದಾಗಲೂ ಆ ಬಸ್ಸನ್ನು ಪತ್ತೆ ಹಚ್ಚಲಾಗಲಿಲ್ಲ. ಕಥೆ ಮುಗಿದೇ ಹೋಯ್ತು ಅಂದುಕೊಂಡೆ. ರಾತ್ರಿ ಇಡೀ ಅದೇ ಗೆಳತಿಯ ಚಿಂತೆ,,,,,
ಇಂದು ಬೆಳಿಗ್ಗೆ ಏಳೂವರೆಗೆ ಬಂದು ಅದೇ ಬಸ್ ಸ್ಟಾಂಡಿನಲ್ಲಿ ಕುಳಿತೆ. ಎಂಟೂವರೆ ತನಕವೂ ಬಸ್ಸು ಬರಲಿಲಲ್ಲ. ಆದ್ರೂ ಸಿಗುತ್ತೇನೋ ಅನ್ನೋ ಭರವಸೆ. ಎಂಟು ಮುಕ್ಕಾಲಿಗೆ ಬಸ್ಸು ಬಂದುಬಿಡ್ತು..ಒಟ್ಟೊಟ್ಟಿಗೆ ಮೂರು ಬಸ್ಸುಗಳು ಬಂದಾಗ ಆ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆಟೋ ಹತ್ತಿ ಬಸ್ಸನ್ನು ಹಿಂಬಾಲಿಸಿದೆ. ಸಿಗ್ನಲ್ ನಲ್ಲಿ ಬಸ್ಸು ನಿಂತಿತ್ತು. ಅಟೋ ಬಿಟ್ಟು ಬಸ್ಸು ಹತ್ತಿದಾಗ ಚಾಲಕನ ಎದುರುಗಡೆ ನನ್ನ ಜನನಿ ನಗುತ್ತಿದ್ದಾಳೆ! ಸ್ವರ್ಗಕ್ಕೆ ಮೂರೇ ಗೇಣು...ಖುಷಿಯೋ ಖುಷಿ. ಆ ಖುಷಿಯಲ್ಲಿ ಚಾಲಕರತ್ರ ನನ್ನ ಪುಸ್ತಕ ಕೊಡ್ತೀರಾ ಅಂತ ಕೇಳೋಕು ಮರೆತುಹೋಗಿ ಸುಮ್ನೆ ನಿಂತುಕೊಂಡು ನೋಡ್ತಾನೆ ಇದ್ದೆ.
"ಏನಮ್ಮ ನೋಡ್ತಾ ಇದ್ದೀಯಾ?'
"ಅಂಕಲ್, ಆ ಪುಸ್ತಕ ಕೊಡ್ತೀರಾ?"
"ಯಾಕೆ ಅದು ನನ್ನ ಪುಸ್ತಕ ಕಣಮ್ಮಾ"
"ಇಲ್ಲ ಅಂಕಲ್, ನಿನ್ನೆ ನಾನು ಮರೆತುಬಿಟ್ಟುಹೋಗಿದ್ದೆ"
"ಇಲ್ಲಮ್ಮಾ..ಇದು ನನ್ನ ಮಗನ ನೋಟ್ ಬುಕ್. ಕೊಡಕ್ಕಾಗಲ್ಲ. ಅದ್ರಲ್ಲಿ ಒಳ್ಳೊಳ್ಳೆ ಕವನಗಳು, ಬಸವಣ್ಣನ ವಚನಗಳು, ಪ್ರೇಮಕವನಗಳು, ಮಂಕುತಿಮ್ಮನ ಕಗ್ಗದ ಸಾಲುಗಳಿವೆ. ನನ್ನ ಮಗ ಬರೆದಿಟ್ಟಿದ್ದು ಕೊಡಕ್ಕಾಗಲ್ಲ"
ನಂಗೆ ನಗು ಬಂದು, ಜೋರಾಗಿ ನಕ್ಕುಬಿಟ್ಟೆ.
"ನೋಡಮ್ಮಾ..ನಾನು ಈ ಪುಸ್ತಕ ಕೊಡಬೇಕಾದ್ರೆ ನಂಗೆ ನೀನು ಟಿಫನ್ ಕೊಡಿಸಬೇಕು. ಹಾಗಾದ್ರೆ ಮಾತ್ರ ಕೊಡ್ತೀನಿ" ಅಂದಾಗ
"ಆಯ್ತು ಅಂಕಲ್..ಹೊಟೇಲ್ ತಿಂಡಿ ಬೇಡ..ನಮ್ಮನೆಯಿಂದ ನೀರು ದೋಸೆ ಮಾಡಿ ತಂದುಕೊಡ್ತೀನಿ"
"ಮಂಗ್ಳೂರು ಹುಡುಗಿನಾ ನೀನು..ಆಯ್ತಮ್ಮ..ತಕೋ ನಿನ್ನ ಪುಸ್ತಕ. ನಾವೆಲ್ಲಾ ಓದಿ ಖುಷಿಪಟ್ವಿ. ತುಂಬಾ ಚೆನ್ನಾಗ್ ಬರೆದಿದ್ದೀಯಾ. ಗುಡ್" ಎಂದು ಬಸ್ಸಿನಲ್ಲಿದ್ದವರನ್ನೆಲ್ಲಾ ನಗೆಯ ಕಡಲಲ್ಲಿ ಮುಳುಗಿಸಿ ಆ ಪುಸ್ತಕ ನನ್ನ ಕೈಗಿತ್ತರು. ಅಷ್ಟೇ ಅಲ್ಲ, ಆ ನಿರ್ವಾಹಕ ಅಂಕಲ್ ಅದೇಂಗೆ ಬಾಯಿಪಾಠ ಮಾಡಿಕೊಂಡಿದ್ರೋ ..ಆ ಪುಸ್ತಕದಲ್ಲಿದ್ದ ಪ್ರೇಮ ಕವನದ ಕೆಲ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ಬಸ್ಸಿನಲ್ಲಿದ್ದವರನ್ನೆಲ್ಲಾ ನಗಿಸುತ್ತಿದ್ರು. ಬೆಳಿಗ್ಗೆ ಶಿವಾಜಿನಗರದಿಂದ ಹೊರಡುವ ಶಿವಾಜಿನಗರ-ಕೋರಮಂಗಲ ಕೆಎ-01, ಎಫ್ ಎ-544 ನಂಬರ್ ಬಸ್ಸಿನ ಚಾಲಕ ಬಿಳಿ ಗಡ್ಡದ ಅಂಕಲ್ ಮತ್ತು ನಿರ್ವಾಹಕ ಅಂಕಲ್ ಕುರಿತು ಹೆಮ್ಮೆ ಅನಿಸ್ತು. ಥ್ಯಾಂಕ್ಯೂ ಅಂಕಲ್.....!! ನಿಜಕ್ಕೂ ನಾನೆಷ್ಟು ಖುಷಿಪಟ್ಟೆ ಗೊತ್ತಾ?
Thursday, May 14, 2009
'ಪಿಂಕು, ಇವತ್ತು ನನ್ನ ಹುಟ್ಟುಹಬ್ಬನಾ?'
ಐದು ವರುಷಗಳ ಹಿಂದಿನ ಘಟನೆ. ನಾನಾಗ ಪ್ರಥಮ ಬಿಎ. ತೋಚಿದ್ದನ್ನು ಗೀಚೋ ಗೀಳು. ಹೆಚ್ಚು-ಕಡಿಮೆ ಎಲ್ಲಾ ಕನ್ನಡ ಪತ್ರಿಕೆಗಳು, ವಾರಪತ್ರಿಕೆಗಳಲ್ಲೂ ನಾನು ಬರೆದ ಪುಟ್ಟ ಬರಹಗಳು ಪ್ರಕಟವಾಗುತ್ತಿದ್ದವು. ಈ ಗೀಚಾಟಕ್ಕೆ ಬಲಿಯಾಗಿ ನನ್ನ ಮೊದಲ ಚುಟುಕು ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಮೆಚ್ಚಿ ಪತ್ರ ಬರೆದವರಲ್ಲಿ ಮೊದಲಿಗರು ಜಗ್ಗಣ್ಣ. ಪುಟ್ಟ ಪೋಸ್ಟ್ ಕಾರ್ಡೊಂದರಲ್ಲಿ ನನಗೆ ಬರೆದ ನಾಲ್ಕು ಸಾಲಿನ ಪತ್ರ ಭಾಳ ಇಷ್ಟವಾಗಿಬಿಡ್ತು. ಆಮೇಲೆ ನನ್ನ ಪ್ರತಿ ಬರಹಗಳು ಪ್ರಕಟವಾದಗಲೂ ಅವರು ಪತ್ರ ಬರೆಯುತ್ತಿದ್ದರು.
ಆಗ ನನಗೆ ಪತ್ರದ ಗೀಳು ಕೂಡ ಜಾಸ್ತಿ. ಯಾರೇ ಪತ್ರ ಬರೆದ್ರೂ ಅದಕ್ಕೆ ಪುಟ್ಟ ಕಾರ್ಡೊಂದರಲ್ಲಿ ಕೃತಜ್ಞತೆ ಹೇಳಿಬಿಡೋದು. ಜಗ್ಗಣ್ಣನಿಗೂ ಹಾಗೇ ಮಾಡುತ್ತಿದ್ದೆ. ನಾನು ಅವರಿಗೆ ಬರೆದ ಕಾರ್ಡು ಅವರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನ ಆದ ಮೇಲೆ ಜಗ್ಗಣ್ಣನ ಕೈಗೆ ಸೇರುತ್ತಿತ್ತು. ಆಗ ಜಗ್ಗಣ್ಣ ನಂಗಿಟ್ಟ ಹೆಸರು 'ಪಿಂಕು'. ಪರಸ್ಪರ ಮುಖ ಪರಿಚಯವಿಲ್ಲದ ಪತ್ರ ಮೈತ್ರಿ ಒಂದೂವರೆ ವರ್ಷ ಸಾಗಿತು. ನಮ್ಮ ಹಾಸ್ಟೇಲಿನ ಅಡುಗೆಕೋಣೆಯಿಂದ ಹಿಡಿದು ಕಾಲೇಜಿನ ಕಾರಿಡಾರ್ ತನಕವೂ ಜಗ್ಗಣ್ಣ ಯಾರೂಂತ ಕುತೂಹಲ! ಆದ್ರೂ ನಾ ಫೋನಲ್ಲಿ ಕೂಡ ಮಾತನಾಡಿರಲಿಲ್ಲ. ಫೋನ್ ನಂಬರು ಎಷ್ಟೇ ಕೇಳಿದ್ರೂ ಕೊಡಲಿಲ್ಲ. ನನಗೆ ಸಂಶಯ ಬರತೊಡಗಿತ್ತು..ಯಾವಾಗ ಪತ್ರ ಬರೆದ್ರೂ ಅದರಲ್ಲಿ ಉಜಿರೆ ಪೋಸ್ಟ್ ಆಫೀಸ್ ನ ಸೀಲ್ ಬೀಳ್ತಾ ಇತ್ತು. ಹಾಗಿರುವಾಗ ಈತ ನಮ್ಮ ಕಾರಿಡಾರಲ್ಲೇ ಇದ್ದಾನೆ ಅನಿಸಿತು. ಆದ್ರೂ ಪತ್ರದಲ್ಲಿ ಬಿಡದೆ ಕಾಡುತ್ತಿದ್ದ ನನಗೆ, ಪಿಂಕು ನನ್ನ ಗೆಳೆಯನ ಜೊತೆ ಪತ್ರ ಕೊಟ್ಟು ಕಳಿಸ್ತೀನಿ..ಅದಕ್ಕೆ ಅದ್ರಲ್ಲಿ ಉಜಿರೆಯ ಸೀಲ್ ಬೀಳೋದು ಅಂತ ತಪ್ಪಿಸಿಕೊಳ್ಳುತ್ತಿದ್ರು.
ಕೊನೆಗೆ ಪೀಡಿಸಿ, ಕಾಡಿ, ಬೇಡಿ ನಂಬರು ಕೊಟ್ರು. ಮೊದಲೇ ರಚ್ಚೆ ಹಿಡಿದ್ರೆ ಬಿಡೋಳು ನಾನಲ್ಲ. ಸೆಂಟಿಮೆಂಟಲ್ಲಾಗಿ ಬರೆದು ಮೊಬೈಲ್ ನಂಬರು ಗಿಟ್ಟಿಸಿಕೊಂಡೆ. ಸಿಕ್ಕ ತಕ್ಷಣ ಫೋನ್ ಮಾಡಿದ್ರೆ , 'ಧ್ವನಿ ಎಲ್ಲೊ ಕೇಳಿದಂಗೆ ಇದೆ'!! ಆದ್ರೂ ಗೊತ್ತಾಗಲಿಲ್ಲ. ಕೊನೆಗೆ ಒಂದು ದಿನ ಪತ್ರ ಬರೆದು 'ಜಗ್ಗಣ್ಣ ನಿಂಗೆ ನಿಜವಾಗ್ಲೂ ತಂಗಿ ಮೇಲೆ ಪ್ರೀತಿಯಿದ್ರೆ ನನ್ನ ಮುಖತಃ ಭೇಟಿಯಾಗು. ಇಲ್ಲಾಂದ್ರೆ ಇಂದಿಗೆ ಪತ್ರ ಕೊನೆ" ಅಂತ ಹೇಳಿದೆ. ಏನೂ ಮಾಡಿದ್ರೂ ನನ್ನ ಹಠ ಬಿಡಲಿಲ್ಲ..ಕೊನೆಗೆ ಸೋತು ಒಪ್ಪಿಕೊಂಡ ಮಹಾಶಯ. ಕಾಲೇಜು ಪಕ್ಕ ಇರುವ ಪೋಸ್ಟ್ ಆಫೀಸು ಪಕ್ಕ ಬಾ. ನಾನು ಆಕಾಶ ನೀಲಿ ಶರ್ಟ್ ಧರಿಸಿದ್ದೇನೆ. ನಿನ್ನನ್ನು ನಾನೇ ಪತ್ತೆ ಹಚ್ಚುತ್ತೇನೆ ಎಂದಿದ್ದರು! ಆವಾಗಲೇ ಒಂದು ರೌಂಡ್ ಬೆವರು ಇಳಿದಿತ್ತು. ಛೇ! ದಿನಾ ಮಾತನಾಡುವವರೇ ಜಗ್ಗಣ್ಣ ಆದ್ರೆ? ಅಂತ ಅಂಜಿಕೆ ಬೇರೆ.
ಅಂದು ಮಧ್ಯಾಹ್ನ ಹನ್ನೆರಡೂವರೆ ಗಂಟೆ. ಹಾಸ್ಟೇಲಿನಿಂದ ಹಿಡಿದು ಕ್ಲಾಸ್ ತನಕವೂ ಎಲ್ಲರ ಜೊತೆ ಹೇಳಿದ್ದೆ ಜಗ್ಗಣ್ಣ ಸಿಗ್ತಾರೆ ಅಂತ. ಹಾಗೇ ಎಲ್ರಿಗೂ ಕುತೂಹಲ. ಒಂದೇ ಒಂದು ಕನ್ನಡ ಕ್ಲಾಸಿಗೆ ಚಕ್ಕರ್ ಹಾಕಿದವಳಲ್ಲ. ಅಂದು ನಾಗಣ್ಣ ಸರ್ ಕ್ಲಾಸಿಗೆ ಬಂಕ್ ಹೊಡೆದೆ. ಸರ್ ಬಂದವ್ರೆ ಚಿತ್ರಾ ಕಾಣ್ತಿಲ್ಲ ಎಂದಾಗ ಹುಡುಗೀರು ಗೊಳ್ಳೆಂದು ನಕ್ಕಿದ್ರಂತೆ. ಜಗ್ಗಣ್ಣನ್ನು ನೋಡಬೇಕೆಂದು ಕುತೂಹಲದಿಂದ ಪೋಸ್ಟ ಆಫೀಸು ಬಳಿ ಹೋಗಿ ಕಾದು ನಿಂತಾಗ..ಆಕಾಶನೀಲಿ ಶರ್ಟ್ ಹಾಕಿದ ವ್ಯಕ್ತಿಯನ್ನು ನೋಡಿ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೆ ಅನಿಸ್ತು. ಮುಖಕ್ಕೆ ಬಾರಿಸಿದ ಹಾಗೆ...ನನ್ನ ಸಿಟ್ಟನ್ನೆಲ್ಲಾ ಹೊರತೆಗೆದು ಬೈದುಬಿಟ್ಟು ವಾಪಾಸ್ ಬಂದೆ!
ಜಗ್ಗಣ್ಣ ಬೇರೆ ಯಾರೂ ಆಗಿರಲಿಲ್ಲ..ಅದೇ ಪೋಸ್ಟ ಆಫೀಸ್ ನಲ್ಲಿದ್ರು. ನಿತ್ಯ ನಾನು ಅವರಿಗೆ ಲೆಟರ್ ಬರೆದು ಅವರ ಕೈಯಲ್ಲೇ ಪೋಸ್ಟ ಮಾಡಕೆ ಕೊಡುತ್ತಿದ್ದೆ. ಕಾರ್ಡು ತೆಗೆದುಕೊಳ್ಳುವಾಗಲೆಲ್ಲಾ ಸುಮ್ಮನೆ ನಕ್ಕು ನನ್ನ ಕೈಯಿಂದ ಕಾರ್ಡ್ ತಕೋತಾ ಇದ್ರು. ಆದ್ರೂ ಅವ್ರ ಮೇಲೆ ನಂಗೆ ಡೌಟು ಬರಲಿಲ್ಲ. ನಾನು ಅವರಿಗೆ ಪೋಸ್ಟ ಮಾಡುತ್ತಿದ್ದ ಕಾರ್ಡನ್ನು ಅವರೇ ಕಿಸೆಗೆ ತುಂಬಿಕೊಂಡು ಮನೆಯಲ್ಲಿ ಎಲ್ಲರೆದುರು ಓದಿ ಮಜಾ ಮಾಡುತ್ತಿದ್ರಂತೆ!
ಮತ್ತೆ ಮರುದಿನ ಹೋಗಿ ಜಗ್ಗಣ್ಣ ಕ್ಷಮಿಸಿ ಅಂತ ಹೇಳಿದೆ. ಆಮೇಲೆ ಒಂದೂವರೆ ವರ್ಷ ಜಗ್ಗಣ್ನನ ಜತೆಗಿದ್ದೆ. ಕೇವಲ ನನಗೆ ಮಾತ್ರವಲ್ಲ ನಮ್ಮ ಹಾಸ್ಟೇಲ್ ಹುಡುಗಿಯರಿಗೆಲ್ಲ ಜಗ್ಗಣ್ಣನೇ ಆಗಿದ್ರು. ಅವರು ಮೊದಲ ಬಾರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಸಿಲ್ವರ್ ಕಲರ್ ವಾಚ್ ಈಗಲೂ ನನ್ನ ಕೈಯಲ್ಲಿದೆ. ಕೊನೆಗೆ ಬೆಂಗಳೂರಿಗೆ ಬರುವಾಗಲೂ ನನ್ನ ಕರೆದುಕೊಂಡು ಬಂದಿದ್ದು ಜಗ್ಗಣ್ಣನೇ! ಈಗ ಜಗ್ಗಣ್ಣ ನಮ್ಮಮ್ಮಂಗೂ ಮಗ ಆಗಿಬಿಟ್ಟಿದ್ದಾರೆ. ಎನಿಸಿಕೊಂಡಾಗ ತುಂಬಾ ಖುಷಿ ಆಗುತ್ತೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ದಿನಾ ನಗುತ್ತಿರುತ್ತಾರೆ. ಮೊನ್ನೆಮೊನ್ನೆ ಬೆಂಗಳೂರಿಗೆ ಬಂದು ಒಂದು ವಾರ ಇದ್ದು ಹೋಗಿದ್ರು.
ಈ ಘಟನೆ ಬರೆದಿದ್ದು ಯಾಕಂದ್ರೆ ಮೇ.13ಕ್ಕೆ ಜಗ್ಗಣ್ಣನ ಹುಟ್ಟುಹಬ್ಬ.ತಮಾಷೆ ಅಂದ್ರೆ ಅವರ ಹುಟ್ಟುಹಬ್ಬ ಅವರಿಗೆ ನೆನಪೇ ಇರಕ್ಕಿಲ್ಲ. ನಿನ್ನೇ ಹಾರೈಕೆ ಹೇಳೋಣ ಅಂತ ಫೋನು ಮಾಡಿದ್ರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡಿನಲ್ಲಿ ನಿಂತುಕೊಂಡು , 'ಪಿಂಕು ನನ್ನ ಹುಟ್ಟಿದ ದಿನ ಮರೆತೇಹೋಗಿತ್ತು ಮಾರಾಯ್ತಿ' ಅಂತ ಜೋರಾಗಿ ನಗುತ್ತಿದ್ದಾರೆ! ಆಶ್ಚರ್ಯ ಎಂದ್ರೆ ನನ್ನ ಪರಿಚಯ ಆದಾಗಿನಿಂದ ಅವರ ಹುಟ್ಟಿದ ದಿನವನ್ನು ನಾನೇ ನೆನಪಿಸುತ್ತಿದ್ದೇನೆ. ಯಾವಾಗ ನೋಡಿದ್ರೂ ಅಣ್ಣಂದಿರ ಬಗ್ಗೆನೇ ಹೇಳ್ತಾಳೆ ಅಂತ ಬೋರ್ ಅನಿಸ್ತಾ..??ಸಾರೀ..ನಂಗೆ ಹೇಳದೆ ಇರಕ್ಕಾಗದು..ಅಣ್ಣಂದಿರು ಅಂದ್ರೆ ನಂಗೆ ಅಮ್ಮ ಥರ!
ಪ್ರೀತಿಯ ಜಗ್ಗಣ್ಣ..ನಿನಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.
ಹುಲ್ಲಾಗು ಬೆಟ್ಟದಡಿ..ಮನೆಗೆ ಮಲ್ಲಿಗೆಯಾಗು...
ಪಿಂಕಿಗೆ ಯಾವಾಗಲೂ ಪ್ರೀತಿಯ ಅಣ್ಣನಾಗು..
ಸವಿಹಾರೈಕೆಗಳು..
ಆಗ ನನಗೆ ಪತ್ರದ ಗೀಳು ಕೂಡ ಜಾಸ್ತಿ. ಯಾರೇ ಪತ್ರ ಬರೆದ್ರೂ ಅದಕ್ಕೆ ಪುಟ್ಟ ಕಾರ್ಡೊಂದರಲ್ಲಿ ಕೃತಜ್ಞತೆ ಹೇಳಿಬಿಡೋದು. ಜಗ್ಗಣ್ಣನಿಗೂ ಹಾಗೇ ಮಾಡುತ್ತಿದ್ದೆ. ನಾನು ಅವರಿಗೆ ಬರೆದ ಕಾರ್ಡು ಅವರ ಮನೆಯಲ್ಲಿ ಸಾರ್ವಜನಿಕ ಪ್ರದರ್ಶನ ಆದ ಮೇಲೆ ಜಗ್ಗಣ್ಣನ ಕೈಗೆ ಸೇರುತ್ತಿತ್ತು. ಆಗ ಜಗ್ಗಣ್ಣ ನಂಗಿಟ್ಟ ಹೆಸರು 'ಪಿಂಕು'. ಪರಸ್ಪರ ಮುಖ ಪರಿಚಯವಿಲ್ಲದ ಪತ್ರ ಮೈತ್ರಿ ಒಂದೂವರೆ ವರ್ಷ ಸಾಗಿತು. ನಮ್ಮ ಹಾಸ್ಟೇಲಿನ ಅಡುಗೆಕೋಣೆಯಿಂದ ಹಿಡಿದು ಕಾಲೇಜಿನ ಕಾರಿಡಾರ್ ತನಕವೂ ಜಗ್ಗಣ್ಣ ಯಾರೂಂತ ಕುತೂಹಲ! ಆದ್ರೂ ನಾ ಫೋನಲ್ಲಿ ಕೂಡ ಮಾತನಾಡಿರಲಿಲ್ಲ. ಫೋನ್ ನಂಬರು ಎಷ್ಟೇ ಕೇಳಿದ್ರೂ ಕೊಡಲಿಲ್ಲ. ನನಗೆ ಸಂಶಯ ಬರತೊಡಗಿತ್ತು..ಯಾವಾಗ ಪತ್ರ ಬರೆದ್ರೂ ಅದರಲ್ಲಿ ಉಜಿರೆ ಪೋಸ್ಟ್ ಆಫೀಸ್ ನ ಸೀಲ್ ಬೀಳ್ತಾ ಇತ್ತು. ಹಾಗಿರುವಾಗ ಈತ ನಮ್ಮ ಕಾರಿಡಾರಲ್ಲೇ ಇದ್ದಾನೆ ಅನಿಸಿತು. ಆದ್ರೂ ಪತ್ರದಲ್ಲಿ ಬಿಡದೆ ಕಾಡುತ್ತಿದ್ದ ನನಗೆ, ಪಿಂಕು ನನ್ನ ಗೆಳೆಯನ ಜೊತೆ ಪತ್ರ ಕೊಟ್ಟು ಕಳಿಸ್ತೀನಿ..ಅದಕ್ಕೆ ಅದ್ರಲ್ಲಿ ಉಜಿರೆಯ ಸೀಲ್ ಬೀಳೋದು ಅಂತ ತಪ್ಪಿಸಿಕೊಳ್ಳುತ್ತಿದ್ರು.
ಕೊನೆಗೆ ಪೀಡಿಸಿ, ಕಾಡಿ, ಬೇಡಿ ನಂಬರು ಕೊಟ್ರು. ಮೊದಲೇ ರಚ್ಚೆ ಹಿಡಿದ್ರೆ ಬಿಡೋಳು ನಾನಲ್ಲ. ಸೆಂಟಿಮೆಂಟಲ್ಲಾಗಿ ಬರೆದು ಮೊಬೈಲ್ ನಂಬರು ಗಿಟ್ಟಿಸಿಕೊಂಡೆ. ಸಿಕ್ಕ ತಕ್ಷಣ ಫೋನ್ ಮಾಡಿದ್ರೆ , 'ಧ್ವನಿ ಎಲ್ಲೊ ಕೇಳಿದಂಗೆ ಇದೆ'!! ಆದ್ರೂ ಗೊತ್ತಾಗಲಿಲ್ಲ. ಕೊನೆಗೆ ಒಂದು ದಿನ ಪತ್ರ ಬರೆದು 'ಜಗ್ಗಣ್ಣ ನಿಂಗೆ ನಿಜವಾಗ್ಲೂ ತಂಗಿ ಮೇಲೆ ಪ್ರೀತಿಯಿದ್ರೆ ನನ್ನ ಮುಖತಃ ಭೇಟಿಯಾಗು. ಇಲ್ಲಾಂದ್ರೆ ಇಂದಿಗೆ ಪತ್ರ ಕೊನೆ" ಅಂತ ಹೇಳಿದೆ. ಏನೂ ಮಾಡಿದ್ರೂ ನನ್ನ ಹಠ ಬಿಡಲಿಲ್ಲ..ಕೊನೆಗೆ ಸೋತು ಒಪ್ಪಿಕೊಂಡ ಮಹಾಶಯ. ಕಾಲೇಜು ಪಕ್ಕ ಇರುವ ಪೋಸ್ಟ್ ಆಫೀಸು ಪಕ್ಕ ಬಾ. ನಾನು ಆಕಾಶ ನೀಲಿ ಶರ್ಟ್ ಧರಿಸಿದ್ದೇನೆ. ನಿನ್ನನ್ನು ನಾನೇ ಪತ್ತೆ ಹಚ್ಚುತ್ತೇನೆ ಎಂದಿದ್ದರು! ಆವಾಗಲೇ ಒಂದು ರೌಂಡ್ ಬೆವರು ಇಳಿದಿತ್ತು. ಛೇ! ದಿನಾ ಮಾತನಾಡುವವರೇ ಜಗ್ಗಣ್ಣ ಆದ್ರೆ? ಅಂತ ಅಂಜಿಕೆ ಬೇರೆ.
ಅಂದು ಮಧ್ಯಾಹ್ನ ಹನ್ನೆರಡೂವರೆ ಗಂಟೆ. ಹಾಸ್ಟೇಲಿನಿಂದ ಹಿಡಿದು ಕ್ಲಾಸ್ ತನಕವೂ ಎಲ್ಲರ ಜೊತೆ ಹೇಳಿದ್ದೆ ಜಗ್ಗಣ್ಣ ಸಿಗ್ತಾರೆ ಅಂತ. ಹಾಗೇ ಎಲ್ರಿಗೂ ಕುತೂಹಲ. ಒಂದೇ ಒಂದು ಕನ್ನಡ ಕ್ಲಾಸಿಗೆ ಚಕ್ಕರ್ ಹಾಕಿದವಳಲ್ಲ. ಅಂದು ನಾಗಣ್ಣ ಸರ್ ಕ್ಲಾಸಿಗೆ ಬಂಕ್ ಹೊಡೆದೆ. ಸರ್ ಬಂದವ್ರೆ ಚಿತ್ರಾ ಕಾಣ್ತಿಲ್ಲ ಎಂದಾಗ ಹುಡುಗೀರು ಗೊಳ್ಳೆಂದು ನಕ್ಕಿದ್ರಂತೆ. ಜಗ್ಗಣ್ಣನ್ನು ನೋಡಬೇಕೆಂದು ಕುತೂಹಲದಿಂದ ಪೋಸ್ಟ ಆಫೀಸು ಬಳಿ ಹೋಗಿ ಕಾದು ನಿಂತಾಗ..ಆಕಾಶನೀಲಿ ಶರ್ಟ್ ಹಾಕಿದ ವ್ಯಕ್ತಿಯನ್ನು ನೋಡಿ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೆ ಅನಿಸ್ತು. ಮುಖಕ್ಕೆ ಬಾರಿಸಿದ ಹಾಗೆ...ನನ್ನ ಸಿಟ್ಟನ್ನೆಲ್ಲಾ ಹೊರತೆಗೆದು ಬೈದುಬಿಟ್ಟು ವಾಪಾಸ್ ಬಂದೆ!
ಜಗ್ಗಣ್ಣ ಬೇರೆ ಯಾರೂ ಆಗಿರಲಿಲ್ಲ..ಅದೇ ಪೋಸ್ಟ ಆಫೀಸ್ ನಲ್ಲಿದ್ರು. ನಿತ್ಯ ನಾನು ಅವರಿಗೆ ಲೆಟರ್ ಬರೆದು ಅವರ ಕೈಯಲ್ಲೇ ಪೋಸ್ಟ ಮಾಡಕೆ ಕೊಡುತ್ತಿದ್ದೆ. ಕಾರ್ಡು ತೆಗೆದುಕೊಳ್ಳುವಾಗಲೆಲ್ಲಾ ಸುಮ್ಮನೆ ನಕ್ಕು ನನ್ನ ಕೈಯಿಂದ ಕಾರ್ಡ್ ತಕೋತಾ ಇದ್ರು. ಆದ್ರೂ ಅವ್ರ ಮೇಲೆ ನಂಗೆ ಡೌಟು ಬರಲಿಲ್ಲ. ನಾನು ಅವರಿಗೆ ಪೋಸ್ಟ ಮಾಡುತ್ತಿದ್ದ ಕಾರ್ಡನ್ನು ಅವರೇ ಕಿಸೆಗೆ ತುಂಬಿಕೊಂಡು ಮನೆಯಲ್ಲಿ ಎಲ್ಲರೆದುರು ಓದಿ ಮಜಾ ಮಾಡುತ್ತಿದ್ರಂತೆ!
ಮತ್ತೆ ಮರುದಿನ ಹೋಗಿ ಜಗ್ಗಣ್ಣ ಕ್ಷಮಿಸಿ ಅಂತ ಹೇಳಿದೆ. ಆಮೇಲೆ ಒಂದೂವರೆ ವರ್ಷ ಜಗ್ಗಣ್ನನ ಜತೆಗಿದ್ದೆ. ಕೇವಲ ನನಗೆ ಮಾತ್ರವಲ್ಲ ನಮ್ಮ ಹಾಸ್ಟೇಲ್ ಹುಡುಗಿಯರಿಗೆಲ್ಲ ಜಗ್ಗಣ್ಣನೇ ಆಗಿದ್ರು. ಅವರು ಮೊದಲ ಬಾರಿ ನನ್ನ ಹುಟ್ಟುಹಬ್ಬಕ್ಕೆ ಕೊಟ್ಟ ಸಿಲ್ವರ್ ಕಲರ್ ವಾಚ್ ಈಗಲೂ ನನ್ನ ಕೈಯಲ್ಲಿದೆ. ಕೊನೆಗೆ ಬೆಂಗಳೂರಿಗೆ ಬರುವಾಗಲೂ ನನ್ನ ಕರೆದುಕೊಂಡು ಬಂದಿದ್ದು ಜಗ್ಗಣ್ಣನೇ! ಈಗ ಜಗ್ಗಣ್ಣ ನಮ್ಮಮ್ಮಂಗೂ ಮಗ ಆಗಿಬಿಟ್ಟಿದ್ದಾರೆ. ಎನಿಸಿಕೊಂಡಾಗ ತುಂಬಾ ಖುಷಿ ಆಗುತ್ತೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ದಿನಾ ನಗುತ್ತಿರುತ್ತಾರೆ. ಮೊನ್ನೆಮೊನ್ನೆ ಬೆಂಗಳೂರಿಗೆ ಬಂದು ಒಂದು ವಾರ ಇದ್ದು ಹೋಗಿದ್ರು.
ಈ ಘಟನೆ ಬರೆದಿದ್ದು ಯಾಕಂದ್ರೆ ಮೇ.13ಕ್ಕೆ ಜಗ್ಗಣ್ಣನ ಹುಟ್ಟುಹಬ್ಬ.ತಮಾಷೆ ಅಂದ್ರೆ ಅವರ ಹುಟ್ಟುಹಬ್ಬ ಅವರಿಗೆ ನೆನಪೇ ಇರಕ್ಕಿಲ್ಲ. ನಿನ್ನೇ ಹಾರೈಕೆ ಹೇಳೋಣ ಅಂತ ಫೋನು ಮಾಡಿದ್ರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಂಡಿನಲ್ಲಿ ನಿಂತುಕೊಂಡು , 'ಪಿಂಕು ನನ್ನ ಹುಟ್ಟಿದ ದಿನ ಮರೆತೇಹೋಗಿತ್ತು ಮಾರಾಯ್ತಿ' ಅಂತ ಜೋರಾಗಿ ನಗುತ್ತಿದ್ದಾರೆ! ಆಶ್ಚರ್ಯ ಎಂದ್ರೆ ನನ್ನ ಪರಿಚಯ ಆದಾಗಿನಿಂದ ಅವರ ಹುಟ್ಟಿದ ದಿನವನ್ನು ನಾನೇ ನೆನಪಿಸುತ್ತಿದ್ದೇನೆ. ಯಾವಾಗ ನೋಡಿದ್ರೂ ಅಣ್ಣಂದಿರ ಬಗ್ಗೆನೇ ಹೇಳ್ತಾಳೆ ಅಂತ ಬೋರ್ ಅನಿಸ್ತಾ..??ಸಾರೀ..ನಂಗೆ ಹೇಳದೆ ಇರಕ್ಕಾಗದು..ಅಣ್ಣಂದಿರು ಅಂದ್ರೆ ನಂಗೆ ಅಮ್ಮ ಥರ!
ಪ್ರೀತಿಯ ಜಗ್ಗಣ್ಣ..ನಿನಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು.
ಹುಲ್ಲಾಗು ಬೆಟ್ಟದಡಿ..ಮನೆಗೆ ಮಲ್ಲಿಗೆಯಾಗು...
ಪಿಂಕಿಗೆ ಯಾವಾಗಲೂ ಪ್ರೀತಿಯ ಅಣ್ಣನಾಗು..
ಸವಿಹಾರೈಕೆಗಳು..
Subscribe to:
Posts (Atom)